ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದು:ಖ(ಕ)ವನ

By Staff
|
Google Oneindia Kannada News


ದು:ಖ(ಕ)ವನ

Chandrashekara B.Hಅಮ್ಮಾ , ಯಾರಿವರು ? ಎಲ್ಲಿಂದ ಬಂದರು ?
ನಮ್ಮನೇಕೆ ಕಡಿವರು, ಕೊಲ್ಲುವರು?

ಕಂದಾ, ಇವರು ಮಾನವರು, ಮಹಾ-
ಬುದ್ಧಿವಂತರಂತೆ(?!), ಇವರಿಂದ ಅಸಾಧ್ಯವೂ ಸಾಧ್ಯವಂತೆ!

ಅದಿರಲಿ ಅಮ್ಮಾ , ಇವರೇನು ನಮ್ಮ ಬೆಳೆಸಿದರೆ?
ನೀರುಣಿಸಿ ಬೆಳೆಸಿದರೆ, ಇವರಿಗಾಗಿಯೇ ನಾವು ಸಾಯಬೇಕೆ?

ಕಂದಾ, ಈ ಜೀವಿಗಳು - ತಮ್ಮಿಂದ ಈ ಲೋಕ,
ಈ ಕಾಡು-ವನಚರ ಪ್ರಪಂಚವೆಂದು ಮೆರೆಯುತಿಹರು
ನಮ್ಮ ಮರೆಯುತಿಹರು ಧನದಾಸೆಯಲಿ,
ತಮ್ಮತನವ ಮರೆಯುತಿಹರು, ನಮ್ಮನು ಕೊಂದು!

ಕಂದಾ, ಇರಲಿ ಬಿಡು. ಇಂದಲ್ಲ ನಾಳೆ, ಅದರಾಚೆ ನಾಳೆ
ಇವರೆಲ್ಲಿ ಉಳಿವರು ? ನೀನ್‌ ಅಳದಿರು ಕಂದಾ ಸಾಯ್ವೆನೆಂದು, ಕೊಲ್ವರೆಂದು.
ಬೆಂಡಾಗಿ, ಬರದ ಬೇಗೆಗೆ ಸಿಕ್ಕು ನರಳುವರು. ಇದು ನಮ್ಮ
ಮನದ ನೋವಿಗೆ ಅವರಿಗೆ ದೇವನಿಟ್ಟಿರುವ ಫಲ, ಮಗೂ.

ಇದೋ ನಮ್ಮ ನೋವಿನ ಶಾಪವಲ್ಲ . ಅದು ಅವರ ಕರ್ಮ.
ನಮ್ಮನು ಅಳಿಸಿ ನಲಿವರಿಗೆ ದುಷ್ಫಲವುಂಟು, ನೀನ್‌ ಅಳದಿರು ಕಂದಾ।

ಈ ಕವಿತೆಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X