ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ದು:ಖ(ಕ)ವನ
ದು:ಖ(ಕ)ವನ
-
ಚಂದ್ರಶೇಖರ
ಬಿ.
ಎಚ್.
Email : [email protected]
Website : http://in.geocities.com/kavithasangama
ನಮ್ಮನೇಕೆ ಕಡಿವರು, ಕೊಲ್ಲುವರು?
ಕಂದಾ,
ಇವರು
ಮಾನವರು,
ಮಹಾ-
ಬುದ್ಧಿವಂತರಂತೆ(?!),
ಇವರಿಂದ
ಅಸಾಧ್ಯವೂ
ಸಾಧ್ಯವಂತೆ!
ಅದಿರಲಿ
ಅಮ್ಮಾ
,
ಇವರೇನು
ನಮ್ಮ
ಬೆಳೆಸಿದರೆ?
ನೀರುಣಿಸಿ
ಬೆಳೆಸಿದರೆ,
ಇವರಿಗಾಗಿಯೇ
ನಾವು
ಸಾಯಬೇಕೆ?
ಕಂದಾ,
ಈ
ಜೀವಿಗಳು
-
ತಮ್ಮಿಂದ
ಈ
ಲೋಕ,
ಈ
ಕಾಡು-ವನಚರ
ಪ್ರಪಂಚವೆಂದು
ಮೆರೆಯುತಿಹರು
ನಮ್ಮ
ಮರೆಯುತಿಹರು
ಧನದಾಸೆಯಲಿ,
ತಮ್ಮತನವ
ಮರೆಯುತಿಹರು,
ನಮ್ಮನು
ಕೊಂದು!
ಕಂದಾ,
ಇರಲಿ
ಬಿಡು.
ಇಂದಲ್ಲ
ನಾಳೆ,
ಅದರಾಚೆ
ನಾಳೆ
ಇವರೆಲ್ಲಿ
ಉಳಿವರು
?
ನೀನ್
ಅಳದಿರು
ಕಂದಾ
ಸಾಯ್ವೆನೆಂದು,
ಕೊಲ್ವರೆಂದು.
ಬೆಂಡಾಗಿ,
ಬರದ
ಬೇಗೆಗೆ
ಸಿಕ್ಕು
ನರಳುವರು.
ಇದು
ನಮ್ಮ
ಮನದ
ನೋವಿಗೆ
ಅವರಿಗೆ
ದೇವನಿಟ್ಟಿರುವ
ಫಲ,
ಮಗೂ.
ಇದೋ
ನಮ್ಮ
ನೋವಿನ
ಶಾಪವಲ್ಲ
.
ಅದು
ಅವರ
ಕರ್ಮ.
ನಮ್ಮನು
ಅಳಿಸಿ
ನಲಿವರಿಗೆ
ದುಷ್ಫಲವುಂಟು,
ನೀನ್
ಅಳದಿರು
ಕಂದಾ।
ಈ ಕವಿತೆಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ
Comments
Story first published: Saturday, March 22, 2003, 5:30 [IST]