ತೀರ್ಪುಗಾರರ ಮೆಚ್ಚುಗೆ ಪಡೆದ ಕವಿತೆ
-
ರವಿ
ಬಿ.ಎನ್.
ಮೂರ್ನಾಡು,
ಕೇರಾಫ್ ಶಕ್ತಿ ದಿನಪತ್ರಿಕೆ, ಕೈಗಾರಿಕಾ ಬಡಾವಣೆ, ಮಡಿಕೇರಿ ತಾಲ್ಲೂಕು, ಕೊಡಗು ಜಿಲ್ಲೆ - 571 201.
ನಿನ್ನೊಡನಿದ್ದ ಹದಿನಾರು ಸಾವಿರ ಹೆಂಡತಿಯರು
ಏನಾದರು ಗೊತ್ತಾ ?
ನಿನ್ನಲಂಕೃತ
ಶಯ್ಯಾಗಾರದಲ್ಲಿ
ಒಬ್ಬರಿಗೊಬ್ಬರು
ಮೈಮರೆತಿದ್ದವರು
ಸದ್ದಿಲ್ಲದೆ
ಮುಂಜಾನೆ
ಮಂಚದಿಂದೆದ್ದು
ನದಿಯ
ಸ್ನಾನಕ್ಕೆಂದು
ಹೋದವರು
ಹಿಂತಿರುಗಿ
ಬರಲಿಲ್ಲ
ಎಂಬುವುದು
ಈಗ
ದೊಡ್ಡ
ಸುದ್ದಿ
!
ಅವರೆಲ್ಲಾ
ಈ
ವಿಶಾಲ
ಶಾಡ್ವಲದಡಿಯಲ್ಲಿ
ಎದುರಿಗಿದ್ದ
ಬೆಟ್ಟದ
ತಪ್ಪಲಿನಲಿ
ಕಾನನದ
ಕವಲು
ದಾರಿಯಲಿ
ವೈಯ್ಯಾರದಲಿ
ಹೂ
ಕುಯ್ಯಲು
ಹೋಗಿ
ದಿಕ್ಕು
ತಪ್ಪಿದ್ದಾರೆ
!
ದಿಕ್ಕು
ತಪ್ಪಿದವರೆಲ್ಲಾ
ಶಹರಿನ
ಒಳ
ಹೊಕ್ಕು
ಮಹಡಿ
ಮನೆಗಳ
ಕೋಣೆ
ಕೋಣೆಯಲಿ
ಹಂಚಿ
ಹೋಗಿದ್ದಾರೆ
ಕೃಷ್ಣಾ...
!
ಒಂದಷ್ಟು
ಜನ
ಗಲ್ಲಿ
ಗಲ್ಲಿಯಲಿ
ಕಣ್ಣು
ಹಾಯಿಸಿ
ಹರಕು
ಚಿಂದಿಯಾಳಗೆ
ಕಣ್ಣು
ಹಾಯಿಸಿ
ಹರಕು
ಚಿಂದಿಯಾಳಗೆ
ಕೈ
ಬೀಸಿ
ಮುರುಕು
ಛಾವಡಿ
ಕೆಳಗೆ
ಚಾಪೆಯಾಗಿ
ಕತ್ತಲೆಯ
ಮುಸುಕಿನೊಳಗೆ
ನಿದ್ರಿಸುತ್ತಿದ್ದಾರೆ
ಕೃಷ್ಣಾ
...
ತುಳಿದು
ಬಿಟ್ಟವರ
ಕಾಲಿನಡಿ
ಧೂಳಾಗಿದ್ದಾರೆ
!
ಇನ್ನೊಂದಷ್ಟು
ಜನ..
ನಿನ್ನ
ಸೇವಕರ
ಅಡಿಯಾಳಾಗಿ
ಬಿಕ್ಕಳಿಸಿ
ಅದುಮಿಟ್ಟ
ಆಸೆಗಳಿಗೆ
ಬಣ್ಣ
ಹಚ್ಚಿ
ಬೂದಿ
ಮುಚ್ಚಿದ
ನೋವಿನ
ಕೆಂಡಕ್ಕೆ
ಗಾಳಿ
ಹಾಯಿಸುತ್ತಿದ್ದಾರೆ
ಕೃಷ್ಣಾ
...
ಮನೆ-
ಮನಗಳ
ಮೂಲೆಯಲಿ
ಉರಿವ
ಬೆಂಕಿ
ಒಲೆಯಾಗಿದ್ದಾರೆ
!
ಅಳಿದುಳಿದ
ಅಷ್ಟೊಂದು
ಜನ...
ಪರದೆಯ
ಮೇಲೆ
ಪರದೆಯೆತ್ತಿ
ನರ್ತಕಿಯರಾಗಿ
ಬೆತ್ತಲೆಯಾಗುತ್ತಿದ್ದಾರೆ
ಕೃಷ್ಣಾ
...
ಕೆಂಪು
ದೀಪದ
ಮಂದ
ಬೆಳಕಿನಡಿ
ಮಿಣುಕು
ಬೆಳಕುಗಳಾಗಿ
ಉರಿಯುತ್ತಿದ್ದಾರೆ..!
ಕೃಷ್ಣಾ
...
ನಿನ್ನ
ಹೆಂಡತಿಯರೆಲ್ಲಾ
ಕೆಲವರು
ಬ್ರಾಹ್ಮಣರಾದರು
!
ಕೆಲವರು
ಹೊಲತಿಯರಾದರು
!
ಕೆಲವರು
ಜಾತಿ-ಜಾತಿಯ
ಹಣೆಪಟ್ಟಿಯಲಿ
ಅವರಿವರಿಗೆ
ಭಾರವಾದರು
!
ಕಾಮದ
ಜಿಡ್ಡಿಗೆ
ಜಡ್ಡುಗಟ್ಟಿ
ಜಾತಿಯನು
ಮೀರಿ
ಎಲ್ಲರಿಗೂ
ಬೇಕಾದರು
!
ಮುಖಪುಟ / ಸಾಹಿತ್ಯ ಸೊಗಡು / ಕವನ ಸ್ಪರ್ಧೆ ಫಲಿತಾಂಶಗಳು