ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ನಕ್ಕು ನಲಿಸು
-
ಕುಷ್ಟಗಿ
ರಾಘವೇಂದ್ರಾಚಾರ್ಯ,
ಬೆಂಗಳೂರು
[email protected]
ನಿನ್ನನೀಕ್ಷಿಸುವವರ ಖೇದಗೊಳಿಸುವುದೇಕೆ?
ತನುಮನದ ದುಃಖಗಳ ಅಂತರದಿ ಬಚ್ಚಿಟ್ಟು,
ಸಂತಸದ ಹೊನಲನ್ನು ಸಂತಸದಿ ಬೀರು.
ತನ್ನಾಯು
ಎರಡು
ದಿನ
ಎನುವುದನು
ಮರೆತು,
ಭಿನ್ನವಿಲ್ಲದೆ
ಜಗಕೆ
ಹರ್ಷವನು
ಕೊಡುತ,
ತನ್ನ
ಪೊತ್ತಿಹ
ಸರಕೆ
ಬಲು
ಕೀರ್ತಿ
ತರುತಿರುವ
ಚೆನ್ನೆ
ಕಮಲಿನಿಯು
ತಾನತ್ತಿಹುದ
ನೋಡಿಹೆಯಾ?
ಗಿಡ
ಗಿಡದಿ
ಹಾರುತಿಹ
ಸುಭಗ
ಬಣ್ಣದ
ಚಿಟ್ಟೆ
ಕಡು
ಚೆಲುವಿನಿಂ
ಜಗವನಾಕರ್ಷಿಸುವುದು;
ಅದರೊಡಲೊಳಿನಿತಿಲ್ಲ
ಭವಿತವ್ಯದ
ಚಿಂತೆ
ಮುದವ
ಕೊಡ
ಕೊಡುತಲೇ
ಮರಣವಪ್ಪುವುದು.
ನೀನು
ನಕ್ಕರೆ
ಜಗವು
ನಿನ್ನೊಡನೆ
ನಗುವುದು;
ನೀನು
ಅತ್ತರೆ
ಮಾತ್ರ
ಯಾರೂ
ಜೊತೆ
ಬರರು.
ನಲಿವು
ನಗೆ
ಬೆಳುದಿಂಗಳನು
ಎಲ್ಲೆಡೆಗೂ
ಬೀರಿ
ಅಳಿಯಲಿರುವಾಯುವಿನ
ಬೆಲೆ
ಪಡೆದುಕೋ!
Comments
Story first published: Monday, April 14, 2003, 5:30 [IST]