ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಯಹೇ ಕನ್ನಡ ಮಾತೆ

By Staff
|
Google Oneindia Kannada News
  • ಕೆ.ಲಕ್ಷ್ಮಣ ರಾವ್‌,
    ಮುಖ್ಯೋಪಾಧ್ಯಾಯರು, ಕಾಗದ ನಗರ ಪ್ರೌಢಶಾಲೆ, ಭದ್ರಾವತಿ- 577 302.
K. Lakshman Raoಭಾರತ ಜನನಿಯ ತನುಜಾತೆ

ಗುಳಿ ಬಿದ್ದ ರಸ್ತೆಗಳ ಸುಂದರ ನಾಡೆ
ಮೌಲ್ಯಾಧಾರಿತ ಪುಢಾರಿಗಳ ಪುಣ್ಯದ ಬೀಡೆ
ಮಳೆ ಇಲ್ಲದೆ ಸೊರಗಿದ ಹಳ್ಳಿಗಳ ನಾಡೆ
ಕಳ್ಳಕಾಕರ, ಲಂಚಕೋರರ ಬೀಡೆ

ಬತ್ತಿದ ಕೆರೆಗಳ ತುಂಬಿದ ಧೂಳಿನ
ಪುಣ್ಯದ ಬೀಡೆ
ಗೋವುಗಳ ಪೂಜಿಸುತ, ಕಟುಕರಿಗೆ
ಮಾರುವ ಪಾಪಾತ್ಮರ ನಾಡೆ

ಕಾವೇರಿಯ ಕುಡಿಯುತ ತುಂಗೆಯಲಿ ಮೀಯುತ
ಭದ್ರೆಯ ಮಲಿನಗೊಳಿಸಿದ ನಾಡೆ
ಕಾಡನು ಕಡಿದು ಗಣಿಯನು ಬಗೆದು
ತುಂಗಭದ್ರೆಯ ಒಣಗಿಸುವ
ರಾಜಕಾರಣಿಗಳ ಪುಣ್ಯದ ಬೀಡೆ.

ಕಾವೇರಿಯ ಕಂಗೆಡಿಸಿ
ರೈತರ ಕಣ್ಣೀರ ಮಿಡಿಸಿ
ಜನರ ಕಣ್ಣಿಗೆ ಮಣ್ಣೆರೆಚಿ
ಕುರ್ಚಿಯ ಕಾಯುವ ಗೋಸುಂಬೆಯ ನಾಡೆ

ಪೆಪ್ಸಿ-ಕೋಲಗಳ ಸಮೃದ್ಧ ಧಾರೆ
ನಿಂಬೆ ಎಳನೀರು ಕಬ್ಬಿನ ಹಾಲನು
ಹಾಲಾಹಲವಾಗಿಸಿದ ಷಂಡರ ನಾಡೆ

ಪ್ರಭುಗಳಿಗೆ ಚಳ್ಳೆ ತಿನ್ನಿಸಿ
ಪೋಲಿಸರಿಗೆ ಕಣ್ಣೀರ್‌ ಇಳಿಸಿದ
ವೀರಪ್ಪನ ಹಡೆದ ಪುಣ್ಯದ ಬೀಡೆ


(ಕುವೆಂಪು ಅವರ ಕ್ಷಮೆ ಕೋರಿ)


ಮುಖಪುಟ / ಸಾಹಿತ್ಯ ಸೊಗಡು / ಕವನ ಸ್ಪರ್ಧೆ ಫಲಿತಾಂಶಗಳು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X