ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕವಿತೆ ಹಣತೆ

By Staff
|
Google Oneindia Kannada News
ಇಲ್ಲ್ಯಾಕ ಇರಲೊಲ್ಲೆಯೋ ಹುಚ್ಚಪ್ಪ
ಅಲ್ಲ್ಯಾಕ ಹೋಗಲೊಲ್ಲೆಯೋ
ಪರದೇಶಕ್ಕ ನೀ ಬಂದಾಗ ಕಳಕೊಂಡ್ಯಲ್ಲೊ
ಹುಟ್ಟೂರ ನೆಲೆ ಎಲ್ಲವು ।। ಪ ।।

ಆ ಊರು ಹೊಲಸೆಂದು ಮೂಗ ಮುರಿವೆ
ಗಲಾಟೆ ಗುಂಪೆಂದು ದೂರ ಸರಿವೆ
ಹಬ್ಬ ಹರಿದಿನ ಸಡಗರ ನೆನೆದು
ಕಣ್ಣ ನೀರು ಸುರಿಸುವೆ ಯಾಕೊ ?

ಅತ್ತೆಮನೆಯಲ್ಲಿ ಕಟಕಟಿಯೆಂದೆ
ನೆಂಟರು ಜಗಳಗಂಟರು ಎಂದೆ
ಕಷ್ಟ ಸುಖಕೆ ಇಲ್ಲಿ ನಿನಗೆ
ಯಾರು ಇಲ್ಲೆಂದು ಅಳುವಿ ಯಾಕೋ?

ಪ್ರಗತಿಗೆ ಇಲ್ಲೇ ಇರಬೇಕೆಂದೆ
ಆಧುನಿಕತೆಗಿದು ಅರಮನೆ ಎಂದೆ
ಮಕ್ಕಳ ಭವಿಷ್ಯ ಉಜ್ವಲ ಎಂದೆ
ಮನೆಯು ಕೊಂಡೆ, ‘setteled’ಉ ಎಂದೆ
ಋತುಗಳು ಹಲವಾರು ಕಳೆದರು
ಇದು ನಿನ್ನ ಊರೆಂದನಿಸದು ಯಾಕೊ ?

ಮಕ್ಕಳು ಬೆಳೆದು ಪ್ರಾಯಕ್ಕೆ ಬಂದಾಗ
ಡೇಟಿಂಗು ಗೀಟಿಂಗು ಅಂತ ಅಂದಾಗ
ಹಣೆಯು ಚಚ್ಚುತ ಗತಿಯೇನೆಂದು
ಪಶ್ಚಾತಾಪ ಪಡುತಿ ಯಾಕೊ?

ಹತ್ತಾರು ವರುಷ ಕಳೆದ ಮೇಲೆ
ಊರಿಗೆ ಹೋದಾಗ ಪರಕೀಯನಾದೆ
ಯಾರಿವನೆಂದು ಕೇಳ್ಯಾರ ನಿನಗೆ
ನಿನ್ನ ದೇಶದಾಗ ನೀ ಪರದೇಶಿಯಾದೆ
ಗುರುತು ಕಳಕೊಂಡು ಬಂದೆಯಲ್ಲೊ
ನೆಲೆ ಇಲ್ಲದವನಾದೆಯಲ್ಲೊ

ಈ ಕವಿತೆಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಸಾಲು ಸಾಲು ಹಣತೆ

ಈ ಮಣ್ಣು

  • ಪ್ರಣಯ ದೀಪ
  • ನಿರಂತರ

  • ಮುಖಪುಟ / ಸಾಹಿತ್ಯ ಸೊಗಡು

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X