ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಳ ಕೊಡುಗೆ

By Staff
|
Google Oneindia Kannada News
Sandhya Ravindranathಸಮಯಧಾರೆ ಹರಿಯುತಿರಲು
ಘಳಿಗೆ ಘಳಿಗೆ ಸರಿಯುತಿರಲು
ಗಡಿಬಿಡಿಯ ನರ್ತನದಲಿ
ಸಾಗುತಿಹುದು ದಿನಚರಿ

ನರ್ತನದ ಗೀತವಿದು
ಮುಗಿಯಲಿಹುದು ಒಂದುದಿನ
ಮುಗಿದ ಒಡನೆ ಸ್ತಬ್ಧವೆಲ್ಲ
ನೀನು ತಾನು ತಾನವೆಲ್ಲ !

ನರ್ತನದ ಗೀತ ನಿಂತು
ಮತ್ತೆ ನಾಳೆ ಬಾರದಿರೆ
ಭರದಿ ಎಲ್ಲಿ ಓಡುವಿರಿ?
‘ಇಲಿಯ ಪಂದ್ಯ’ ಬೇಡ, ಬಿಡಿ!

ಧನ ಗಳಿಕೆಯ ಆಸೆಯಲಿ
ಜೀವನದೀ ಪಯಣದಲಿ
ದಾರಿಯಲ್ಲಿ ಅರಳಿನಿಂತ
ಹೂವ ಸೊಬಗ ಮರೆಯದಿರಿ!

ಮುಗ್ಧ ಮಗುವ ಚಂದದಾಟ
ನೋಡಲೊಂದು ಘಳಿಗೆ ನಿಮ್ಮ
ಅವಸರದ ಘಂಟೆಗಳಲಿ
ಜತನದಿಂದ ಬದಿಯಲಿಡಿ!

ಟಪಟಪನೆ ಅಂಗಳದಲಿ
ಸುರಿವ ಮಳೆಯ ತಾಳವನ್ನು
ಹೃದಯದಲ್ಲಿ ಬೆಚ್ಚಗಿನ
ನೆನಪಾಗಿಸಿ ಹಿಡಿದುಬಿಡಿ!

ಬಾನಂಚಲಿ ಸೂರ್ಯಾಸ್ತದ
ಓಕುಳಿಯ ನೋಡಿ ನಲಿದು
ಸಮಯದಾ ಬೊಗಸೆಯಿಂದ
ಜಾರದಂತೆ ನಿಲಿಸಿಬಿಡಿ!

ದೇವನಿತ್ತ ವರದಾನ
ಬಾಳಪಯಣ ಸವಿದು ನೋಡಿ!
ಗುರಿಯಸೇರುವಾತುರದಲಿ
ಕೊಡುಗೆಯನ್ನು ಬಿಸುಡಬೇಡಿ!

ಈ ಕವಿತೆಯ ಬಗ್ಗೆ ಎರಡು ಸಾಲು ಬರೆಯಿರಿ

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X