ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬಾಳ ಕೊಡುಗೆ
-
ಸಂಧ್ಯಾ
ರವೀಂದ್ರನಾಥ್
[email protected]
ಘಳಿಗೆ ಘಳಿಗೆ ಸರಿಯುತಿರಲು
ಗಡಿಬಿಡಿಯ ನರ್ತನದಲಿ
ಸಾಗುತಿಹುದು ದಿನಚರಿ
ನರ್ತನದ
ಗೀತವಿದು
ಮುಗಿಯಲಿಹುದು
ಒಂದುದಿನ
ಮುಗಿದ
ಒಡನೆ
ಸ್ತಬ್ಧವೆಲ್ಲ
ನೀನು
ತಾನು
ತಾನವೆಲ್ಲ
!
ನರ್ತನದ
ಗೀತ
ನಿಂತು
ಮತ್ತೆ
ನಾಳೆ
ಬಾರದಿರೆ
ಭರದಿ
ಎಲ್ಲಿ
ಓಡುವಿರಿ?
‘ಇಲಿಯ
ಪಂದ್ಯ’
ಬೇಡ,
ಬಿಡಿ!
ಧನ
ಗಳಿಕೆಯ
ಆಸೆಯಲಿ
ಜೀವನದೀ
ಪಯಣದಲಿ
ದಾರಿಯಲ್ಲಿ
ಅರಳಿನಿಂತ
ಹೂವ
ಸೊಬಗ
ಮರೆಯದಿರಿ!
ಮುಗ್ಧ
ಮಗುವ
ಚಂದದಾಟ
ನೋಡಲೊಂದು
ಘಳಿಗೆ
ನಿಮ್ಮ
ಅವಸರದ
ಘಂಟೆಗಳಲಿ
ಜತನದಿಂದ
ಬದಿಯಲಿಡಿ!
ಟಪಟಪನೆ
ಅಂಗಳದಲಿ
ಸುರಿವ
ಮಳೆಯ
ತಾಳವನ್ನು
ಹೃದಯದಲ್ಲಿ
ಬೆಚ್ಚಗಿನ
ನೆನಪಾಗಿಸಿ
ಹಿಡಿದುಬಿಡಿ!
ಬಾನಂಚಲಿ
ಸೂರ್ಯಾಸ್ತದ
ಓಕುಳಿಯ
ನೋಡಿ
ನಲಿದು
ಸಮಯದಾ
ಬೊಗಸೆಯಿಂದ
ಜಾರದಂತೆ
ನಿಲಿಸಿಬಿಡಿ!
ದೇವನಿತ್ತ
ವರದಾನ
ಬಾಳಪಯಣ
ಸವಿದು
ನೋಡಿ!
ಗುರಿಯಸೇರುವಾತುರದಲಿ
ಕೊಡುಗೆಯನ್ನು
ಬಿಸುಡಬೇಡಿ!
ಈ ಕವಿತೆಯ ಬಗ್ಗೆ ಎರಡು ಸಾಲು ಬರೆಯಿರಿ
Comments
Story first published: Friday, May 16, 2003, 5:30 [IST]