ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕವಿತೆ ಹಣತೆಯ ಪ್ರಭೆಯಲ್ಲಿ ಕಾವೇರಿಯ ಯುಗಾದಿ

By Staff
|
Google Oneindia Kannada News

ಮೇರಿಲ್ಯಾಂಡಲಿ ‘ಕಾವೇರಿ’ ಯುಗಾದಿ!!

Shailaja Bhat Valakatteನಾನಂದು ಹೋಗಿದ್ದೆ ಮೇರಿಲ್ಯಾಂಡ್‌ಗೆ
ಸಂಜೆಯಾಗಿತ್ತು
‘ಕಾವೇರಿ’ ಯುಗಾದಿ ಹಬ್ಬದ ಗೌಜಿಲಿ
ಕನ್ನಡ ಪ್ರೋಗ್ರಾಮ್‌ ಇಟ್ಟಿತ್ತು
ಶ್ರೀನಾಥ್‌ ಸರಿತಾ ಗೀತಾ ಎಲ್ಲ
ಬರುವುದು ಅಂತಿತ್ತು

ಪುಟ್ಟು ಪುಟಾಣಿ ಮಕ್ಕಳ ಪ್ರಾರ್ಥನೆ
ನಾಂದಿಯ ಹಾಡಿತ್ತು
ಶುರುವಾಯ್ತಲ್ಲೋ ಮಜಾ ಗಮ್ಮತ್ತಂತ
ಮನದಲೆ ಅನಿಸಿತ್ತು

ಹತ್ತಾರು ಸ್ಕಿಟ್‌ ಪ್ರಹಸನ ಯಾಕೋ
ಬೋರ್‌ ಬೋರಾಗಿತ್ತು !
‘ಸಂಗೀತ ಮೇಷ್ಟ್ರು’, ‘ಮನಿ ಆರ್ಡರ್‌’ ಸಭಿಕರ
ನಗಿಸಲು ಸೋತಿತ್ತು

ಅಲ್ಲಲ್ಲಿ ನಡುವಲಿ ನೃತ್ಯ ಹಾಡುಗಳು
ತಂಪನು ಎರಚಿತ್ತು
ರಸಸಂಜೆಯ ನೀಡಲು ಶ್ರೀನಾಥ್‌ ತಂಡದ
ಶತಪ್ರಯತ್ನ ನಡೆದಿತ್ತು

‘ಆದರ್ಶ ದಂಪತಿ’ ಸ್ಯಾಂಪಲ್‌ ಐಟಮ್‌
ಅಂತೂ ಕ್ಲಿಕ್ಕಾಯ್ತು !
ಕೊನೆಯಲಿ ಭರ್ಜರಿ ಹೋಳಿಗೆ ಭೋಜನ
ರುಚಿಕರವಾಗಿತ್ತು

ಅಲ್ಲಿಗೆ ನನ್ನಯ ಮೇರಿಲ್ಯಾಂಡ್‌ ಟ್ರಿಪ್ಪಿನ
ಕಥೆಯು ಮುಗಿದಿತ್ತು !!

ಈ ಕವಿತೆಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಕಾವೇರಿ ಕಾರ್ಯಕ್ರಮದ ಗದ್ಯರೂಪ

ಗಂಗೆಯ ಹರಿಸಿದ ಭಗೀರಥ ; ರಸಗಂಗೆಯ ಹರಿಸಿದ ಶ್ರೀನಾಥ!

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X