ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾರಿಗುಡಿ

By Staff
|
Google Oneindia Kannada News
Gopinath Tatacharದೂರದಲ್ಲಿ ‘ಢಮ್‌ ಢಮಕ್ಕ ಢಮ್‌’ ದುಡಿ ಶಬ್ದ
ಆರೆಂಟು ಮಂದಿ ಧ್ವನಿ ಬೆರತ ಕಿರಚಾಟ, ಕೂಗು
ಸುತ್ತಾಮುತ್ತ ಇರುಳಿನ ಕತ್ತಲೆ, ಬರಿ ಕತ್ತಲೆ
ಕಣ್ಣುಗಳು ಹತ್ತಿರ ಹತ್ತಿರ ಧಾವಿಸಿ ಬಂತೋ
ಅಲ್ಲಿಯಿಲ್ಲಿ ಒಂದೆರಡು ಉರಿಯಾ ಹಣತೆ
ದೂರದಲ್ಲೆಲ್ಲೋ ಒಂದು ಲಾಂದ್ರದ ಕಂಭ
ರಾಶಿ ಕುಂಕುಮ, ತಮಟೆ, ಕುಣಿತ, ಧೂಳು
ಪುಟ್ಟ ದೇಗುಲವೋ, ಗುಡಿಯೋ.
ಸುತ್ತಲೂ ಅರಮನೆ ಕೋಟೆ ಕೊತ್ತಲವೇನೋ
ಒಳಗೆ ದೇವಸ್ಥಾನ ಬೆಳಕು, ಜ್ಯೋತಿ
ಸುಂದರ ಮೂರ್ತಿಗೆ ಭರ್ಜರಿ ಅಲಂಕಾರ
ಹೂವೂ ತುಳಸಿ ಮಾಲೆ, ಗಂಧ ಕರ್ಪೂರದ ಸುಗಂಧ.
ಅಯ್ಯೋ, ಅಯ್ಯೋ, ನೋವು ತಡಿಲಾರದೆ ಜೋರಾಗಿ ಕಿರುಚ್ತಾನೆ;
ಮಾರಮ್ಮಂಗೆ ಖುಶಿ - ಕೆಂಪಗೆ ಹರಿಯಿತು ರಕ್ತವೋ ಏನೋ;
ಅವನ ಕೈಲಿ ಇನ್ನೇನು ಆಗೋಲ್ಲ - ಹಿಜಡ
ಬೂಂದಿ ಹಂಚಿದ್ರು ಕುಣದ್ರು ಕೂಗಿದ್ರು.
ಗಂಟೆ, ಜಾಗಟೆ, ಮಂಗಳಾರತಿ, ಶಟಾರಿ, ತೀರ್ಥ, ಪಣ್ಯಾರ ಒಳಗೆ
ಜುಟ್ಟು ಬಿಟ್ಟ್ಕೋಂಡು ಬೆನ್ನುಮಾಡಿ ಕುತಿರೋ ಮಾರಮ್ಮ ಹೊರಗೆ ,
ಸೌಮ್ಯ ಮುಖದ ವರಹಸ್ವಾಮಿ ಮುಷ್ಟಿಲಿ ಅವಳ ಜುಟ್ಟು.
ಇದೆ ಚಿತ್ರ, ಇದೆ ದೃಶ್ಯ ಎಷ್ಟು ವರುಷವಾಯ್ತೋ ಏನೋ,
ಇದೆ ಕನಸು, ಇದೆ ದುಃಸ್ವಪ್ನ ಕಾಡಿ, ಕಾಡಿ,
ಹೆದರಿಸಿ ನನ್ನ ಹರಿದು, ಕಿತ್ತು ತಿನ್ನತ್ತಾಯಿವೆ.
ಪಕ್ಷಿಧಾಮಕ್ಕೆ ವಲಸೆ ಬರೊ ಹಕ್ಕಿಯೋಯಿವು,
ಹಾಳಾದ ಭಾವನೆಗಳು ಎಲ್ಲಿಂದ ಬ-ರುತ್ತಾವೋ ?
ಬತ್ತಿಹೋದ ಕಾವೇರೀಲಿ - ಕಾರಣಗಳ ನುಣುಪಾದ
ಬೆಣೆಚುಕಲ್ಲಿಗೆ ತಿಕ್ಕಿ ತೀಡಿದೆನೋ, ಭಾವನೆಗಳಿಲ್ಲದ
ನೋವು ಧಗ್ಗೆಂದು ಹತ್ತಿ ಉರಿದು ರೆಕ್ಕೆಪುಕ್ಕ ಸುಟ್ಟು,
ನೀರಿಲ್ಲದ ನದೀಲಿ ಮುಳುಗಿಸಿ, ಛೇಡಿಸಿ,
ರೇಗಿಸಿ, ರೇಜಿಗೆಯಿಂದ ರಾಡಿಗೊಳಿಸಿ,
ಮತ್ತೆ ಮೇಲೆತ್ತಿ ಇನ್ನು ಉರಿತಿರೂ ಬೆಂಕಿಲಿ ನೊಂದು ಬೆಂದು
ಅಂಗಾಂಗವೆಲ್ಲ ಸುಟ್ಟು, ಜೀವಕಣಗಳು ಸುಡೋ ಗಬ್ಬು ನಾತ.
ನಾವು ಹೊತ್ತಿಸೋ ಬೆಂಕಿಲಿ ನಾವೆ ಸುಟ್ಟು ಸಾಯಬೇಕೇನು ?

ಯೋಗವಲ್ಲಿ ವೇದವಲ್ಲಿ ಕೋಟೆ ಮೇಲೆ ಕೂತಿದಾಳೆ
ಎರಡೂ ಕಡೇ ಹೋಗೋಬರೋವರಿಗೆ ತಾನು ಒಂಟಿ
ಅಂತ ಟೆಲಿಪತೀಲೆ ಹೇಳೊಕ್ಕೆ ಪ್ರಯತ್ನ ಮಾಡ್ತಾಳೆ
ನನಗದು ಸರಿಯಾಗಿ ಕೇಳಿಸ್ತೋ ಇಲ್ಲವೋ.
ಎಲ್ಲೆಲ್ಲು ಹಸಿರಾದ ಹುಲ್ಲು , ಮಧ್ಯದಲ್ಲೊಂದು ಪಿಚ್ಚು
ಕೋಟೆ ಆಕಡೆಯಿಕಡೆ ಬಾಲ್‌ ನಾವೂ ಹೊಡೆದಿದ್ದುಂಟು
ವರಹನೂ ನೋಡಿದಾನೆ ಮಾರಮ್ಮನೂ. ಇವಳಿಗೋ
ಆಡೋಕ್ಕಿಷ್ಟ ; ಬೂಂದಿನು ಬೇಕು ಪಣ್ಯಾರವೂ;
ವಿಪರೀತ ಆಸೆಯೇನೋ ನಿಜ ಇವಳಿಗೆ.
ಆದರೆ ಬೇಗ ಸುಸ್ತು ಆಗುತ್ತೆ ಇವಳಿಗೆ.

ನಿಶಬ್ದದ ಚೀರು - ಬೆಚ್ಚಿ ನಡುಗಿ ಕಂಪಿಸಿ ಎದ್ದೆ.
ಅದೆ ದೇಗುಲ, ಅದೆ ಗುಡಿ; ಸಾವಿನ ಚೀತ್ಕಾರ ಕಣ್ಣೆದುರಿಗೆ
ಓಡೋಡಿ ಹೋದೆ, ಕೇರಿ ಕುರಿ - ಕಾಲು ಕಟ್ಟಿದೆ
ಮರಣಭಯದ ಭೀತಿ ಕಣ್ಣಲ್ಲಿ ತುಂಬಿದೆ
ಸಾವಿನ ರೋದನೆ ಗಾಳಿಯಲ್ಲಿ ಕರಗಿದೆ
ಬರಿ ಲಂಗೋಟಿ; ಮೈಯೆಲ್ಲ ಇಜ್ಜಲು
ನಾಕು ಮಂದಿ ಕತ್ತಿ ಮಸೀತಾರೆ
ರೋದನೆನೂ ಕೇಳಿಸೊಲ್ಲ ಇವರಿಗೆ
ಕುರಿ ಕಣ್ಣೂ ಕಾಣಿಸೊಲ್ಲ ಇವರಿಗೆ
ಹೆಂಡತಿ ಮಕ್ಕಳಿಗೆ ಮಾಂಸ ಬೇಡವೇ!
ಕತ್ತು ಕುಯ್ಯತ್ತಾರೆ, ಬಲಿ ಕೊಡ್ತಾರೆ, ಚರ್ಮ ಸುಲಿಯುತ್ತಾರೆ.
ಈವೋತ್ತು ಗೋಕಲಾಷ್ಟ್ಮಿ ಉಪವಾಸ ಧ್ಯಾನ ನನಗೆ
ಮನಸ್ಸು ಕುರಿ ಆತ್ಮದೊಂದಿಗೆ ಬೆರೆತು ನಿಲ್ಲೋಲ್ಲ
ಅಲ್ಲಿಯಿಲ್ಲಿ ಜಾರುತ್ತ , ಪರಮಾತ್ಮನಂದನ ಮಗಳು
ಭಾಗಿರಥಿ ಹತ್ತಿರ ನಿಲ್ಲುತ್ತೆ - ನನ್ನ ಸ್ಪರ್ಶಕ್ಕೆ
ಸ್ಪಂದಿಸಿ ತಾಳ್ಮೆಯಿಂದ ಕೇಳ್ತಾಳವಳು, ಅದಕ್ಕೆ
ಜೀವನದ ಇರುವಿನ ಮಾಯೆ, ನನ್ನ ಶೂನ್ಯದ
ಗುಟ್ಟು , ಎಲ್ಲ ಹೇಳೇ ಬಿಡುತ್ತೀನಿ.
ಕೇಳಿ ಸುಮ್ಮನೆ ನಗುತ್ತಾಳೆ ಅಷ್ಟೆ.

ಈ ಕವಿತೆಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಮುಖಪುಟ / ಸಾಹಿತ್ಯ ಸೊಗಡು / ಕವನ ಸಿಂಚನ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X