ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ...

By Staff
|
Google Oneindia Kannada News
  • ಲಕ್ಷ್ಮೀನಾರಾಯಣ ಗಣಪತಿ
    CARY, NC 27513,USA
ಕನ್ನಡ ಎನೆ ನಾವು ನೀವಲ್ಲ ಆನು ತಾನಲ್ಲಇಂದು ನಾಳೆಯಷ್ಟೆ ಅಲ್ಲ ನಿನ್ನೆ ಮೊನ್ನೆಯೂ ಸಾಲಲ್ಲ
ಪಾಟೀಲ ಪುಟ್ಟ ವಾಟಾಳ ಸಿಂಹರಷ್ಟೇ ರಾಜರಲ್ಲ
ಕಾರಂತ ಯಶವಂತ ಕುವೆಂಪು ಗೋಕಾಕ
ಜೋಷಿ ಬೇಂದ್ರೆಯಷ್ಟೇ ಅನಂತವೆಂದಲ್ಲ
ಅನಕೃ ಪುತಿನ ಗೋರೂರು ಕಾರ್ನಾಡ
ಬಿಎಂಶ್ರೀ ನರಸಿಂಹರೇ ಸ್ವಾಮಿಯರಲ್ಲ
ತ್ರಿವೇಣಿ, ಸಾಯಿಸುತೆ, ಕಲ್ಪನಾ
ಭಾರತಿ, ಉಷೆಯರಷ್ಟೆ ನವರತ್ನಗಳಲ್ಲ
ಈಚನೂರು ಶಾಂತ ಕಾಕೋಳು ಸರೋಜ
ಬೆಂಗ್ಳೂರಲ್ಲೇ ಬರ್ಯಾಲ್ವ ನೋಡೀ ನಿಂ ಸುಧಾ
ಮಾಲತೀ ವಸುಮತಿ ಪಾರ್ವತೀ ಪದ್ಮಜಾ
ನೋಡ್ರಿ ಇವ್ರುಗಳು ಮಾತ್ರ ಕನ್ನಡಗಿತ್ತೀರಲ್ಲ
ಅಡಿಗ ಕಂಬಾರ ಭಟ್ಟ ಬರಗೂರ
ಲಂಕೇಶ ಶಾನಭಾಗ ಸಿದ್ಧಲಿಂಗಯ್ಯರಿಗೇ ಪಟ್ಟಿ ನಿಲ್ಲೊಲ್ಲ
ಡಿಸೋಜ ರಾಮಾನುಜ ಹರಿಹರೇಶ್ವರ
ಚಂದ್ರಶೇಖರ ಬರೆದರೆ ಬರೇ ನಾಗತಿಹಳ್ಳಿಗಲ್ಲ
ಹೆಗ್ಗೋಡಿನ ಸುಬ್ಬಣ್ಣ ಬೆಂಗ್ಳೂರ ಶಂಕ್ರಣ್ಣ
ಆಡ್ಕೊಂತ ಸಿನಿಮಾ ನಾಟ್ಕಾನ ಪರದ್ಯಾಗ
ಬೀದ್ಯಾಗ ಕಾರಂತ, ಕಾಸರವಳ್ಳಿ ಗಿರೀಶ
ಅಯ್ಯರ್ರಾ ಹಂಸಗೀತ ಶ್ರಿಧರ್ರ ನಾಟ್ಯಲೋಕ
ಸಾರಾ, ನಿಸ್ಸಾರ, ಮಾದೇವ ದ್ಯಾವನೂರ
ಮರ್ತೇ ಬಿಟ್ರಲ್ಲಾ ಇವ್ರು ಬರ್ದದ್ದು ಹೇಳಿದ್ದೆಲ್ಲಾ
ಮತ್ತೆ ತಿರುಗಿ ಇನ್ನೊಬ್ಬರ ಬಾಲ ಮೂಸುತ್ತೀರಲ್ಲಾ
ಮಧ್ವ ಬಸವಣ್ಣ ಕನಕರಷ್ಟೇ ದಾಸರಲ್ಲ
ಅಕ್ಕಮಹಾದೇವಿಗೋ ಶತಮಾನಗಳೇ ಆಯಿತಲ್ಲ
ಕಿತ್ತೂರಿಗೊಬ್ಬ ರಾಣಿ ಚೆನ್ನಮ್ಮಳಿದ್ದಳಲ್ಲ
ಚಿತ್ರದುರ್ಗಕ್ಕೊಬ್ಬಳೇ ಓಬವ್ವ ಸಾಲಲ್ಲ
ವಿಶ್ವೇಶ್ವರರೊಬ್ಬರೇ ಅಯ್ಯರೆಂದಲ್ಲ
ರಾಮಚಂದ್ರರೊಬ್ಬರೇ ರಾಯರೆಂದಿಲ್ಲ
ರನ್ನ ಪಂಪ ಗದುಗಿನ ನಾರಣಪ್ಪ ಮುದ್ದಣ್ಣ
ಇದ್ರಲ್ಲ ಬಹಳ ಮೊದಲೇ ನಮಗಿನ್ನ
ಬರದ್ರಲ್ಲ ರಾಮಾಯಣ ಮಹಾಭಾರತಾನ
ನಮಗ್ಯಾಕ್ರಿ ಸುಂನೆ ಈ ಬೊಗಳೆ ಬಿಗುಮಾನ
ಆಗಿಲ್ರಿ ನಮಗಿನ್ನೂ ಒಂದೂ ಶತಮಾನ
ಹ್ಯಾಂಗ್ರಿ ಹೇಳ್ತೀರಾ ನಂದೇ ಕನ್ನಡದ ಅಭಿಮಾನ

ನಿಮ್ಮೂರ ಬಿಸಿಲ್ಕೋಲು ನಮಗೆಲ್ಲಾ ತಲುಪೈತಿ

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X