ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ರಿಕೆಟ್‌ ಜ್ವರ

By Staff
|
Google Oneindia Kannada News
  • ಶಿವಮೂರ್ತಿ, ನವದೆಹಲಿ
Shivamurthy, New Delhiಮತ್ತೆ ಬಂದಿತು ತಿರುಗಿ ಬಂದಿತು
ಕಾತರದಿ ಕಾಯುತಿದ್ದ ದಿನವದು ಬಂದಿತು
ವಿಶ್ವಕಪ್‌ ಕ್ರಿಕೆಟ್‌ ತಿರುಗಿ ಬಂದಿತು.

ಕೆಲಸ ನಡೆಯುವುದಿಲ್ಲ ಕಛೇರಿಗಳಲ್ಲಿ
ಬಿಸಿನೆಸ್‌ ಇಲ್ಲ ಬಾರ್‌ ಹೋಟೆಲ್‌ಗಳಲ್ಲಿ
ಪಾರ್ಕ್‌ ಸಿನಿಮ ಮಂದಿರಗಳೆಲ್ಲ ಖಾಲಿ ಖಾಲಿ
ಬಿಕೋ ಎನ್ನುತಿವೆ, ಜನಸಂಚಾರವಿಲ್ಲ ರಸ್ತೆಗಳಲ್ಲಿ

ಬಾಲ್‌ ಬಾಲಿಗೂ ಕುತೂಹಲ ಕೆರಳಿಸುವ ಕ್ಷಣಗಳು
ಕ್ಷಣ ಕ್ಷಣಕೂ ಚಡಪಡಿಸುವ ಮನಸುಗಳು
ಉಗುರು ಕಚ್ಚುವ ಟೆನ್ಶನ್‌ನೊಂದಿಗೆ
ಕ್ರಿಕೆಟ್‌ನೆಡೆಗೆ ನೆಟ್ಟ ನೋಟಗಳು

ದೇವರ ನಾಮ ಜಪಿಸುವವರು ಕೆಲವರು
ಅಲ್ಲಾನಲ್ಲಿ ಮೊರೆಯಿಡುವವರು ಹಲವರು
ಎಲ್ಲರದು ಒಂದೇ ಕೋರಿಕೆ, ಭಾರತದ ಜಯಕೆ

ಎಲ್ಲರ ಬಾಯಲ್ಲೂ ಚರ್ಚೆ ಕ್ರಿಕೆಟ್‌ದೆ
ಎಲ್ಲರ ಮೊಗದಲಿ ಚಿಂತೆ ಒಂದೇ
ಭಾರತ ಕಪ್‌ ಗೆಲ್ಲುವುದೆ?

ರೇಡಿಯೋವನು ಕಿವಿಗಾನಿಸಿ
ಟಿವಿಯಲಿ ನೋಟವನು ಕೇಂದ್ರೀಕರಿಸಿ
ಮಗ್ನರು ಆಟದಿ, ಜಗದ ಪರಿವೆಯೆ ಇಲ್ಲದೆ

ಮಕ್ಕಳಿಂದ ಮುದುಕರವರೆಗೂ
ಬಡವನಿಂದ ಬಲ್ಲಿದರವರೆಗೂ
ವಯಸು, ಅಂತಸ್ತಿನ ಅಭ್ಯಂತರವಿಲ್ಲ
ಈ ಆಟದ ಮೋಡಿಗೊಳಗಾಗದವರಿಲ್ಲ

ವಿಶ್ವಕಪ್‌ ಕ್ರಿಕೆಟ್‌ ತಿರುಗಿ ಬಂದಿತು.
ಜನಮನವನು ಹುಚ್ಚೆಬ್ಬಿಸಿ,
ಕುತೂಹಲವನು ಹೆಚ್ಚಿಸಿತು.

ವಿಶ್ವಕಪ್‌ ಕ್ರಿಕೆಟ್‌ : ಭಾರತೀಯ ಕಾಲಮಾನ ದರ್ಶಿನಿ

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X