ಯುದ್ಧ-ಶಾಂತಿ ಮತ್ತು ಬೇವು-ಬೆಲ್ಲ
-
ಸುಪ್ತದೀಪ್ತಿ
E-mail : [email protected]
ಬೇವು-ಬೆಲ್ಲ ಬೊಗಸೆಯಲ್ಲಿ , ಪಕ್ಕದಲ್ಲಿ ತಾಂಡವ ;
ಇಹದ ಸುಖದ ಚಿಂತೆಯಲ್ಲಿ ಪರರ ತರಿದ ಮಾನವ,
ತನ್ನ ದೇವ-ಶಿಲುಬೆಯನ್ನೆ ರಕ್ತಸಿಕ್ತ ಮಾಡುವ.
ಯಾವ
ತಾಯ
ಮಡಿಲು
ಬರಿದು,
ತಂದೆ
ಎದೆಯು
ಒಡೆಯಿತು,
ಯಾವ
ಪ್ರೀತಿ-ಹಕ್ಕಿ
ತನ್ನ
ಜೀವಕಾಗಿ
ಅರಸಿತು;
ಯಾವ
ಕಂದ
ಅಮ್ಮನಿಂದ
ಕಣ್ಣನೀರನುಂಡಿತು,
ಯಾವ
ಭೂಮಿಯಾಡಲು
ತಪ್ತ
ನೆತ್ತರಿಂದ
ನೆನೆಯಿತು.
ಅರ್ಥವಿಲ್ಲ
,
ಸ್ವಾರ್ಥವೆಲ್ಲ
;
ಬದುಕು
ಬವಣೆ
ಹಬ್ಬಿದೆ,
ತನ್ನ
ಊಟದೆಲೆಯಲಿರುವ
ಕೆಸರು
ಗೌಣವಾಗಿದೆ;
ಅರಗಲಾರದಂಥ
ತುತ್ತು
,
ಛಲದಿ
ಬಾಯಾಳಿಟ್ಟಿದೆ,
ತಮದ
ಮದದ
ಅಟ್ಟದಲ್ಲಿ
ಏಣಿ
ಮೆಟ್ಟಿ
ನಿಂತಿದೆ.
ಜಗದ
ಮಾನ-ಪ್ರಾಣ-ಧನವ
ಕಾವ
ದೇವನಾವನು?
ಯಾವ
ಜಾತಿ-ಜೀವನಕ್ಕೆ,
ಯಾವ
ಬಣ್ಣ
ಆತ್ಮನು?
ಇರುಳು
ಕಂಡ
ಬಾವಿಯಲ್ಲಿ
ಹಗಲು
ಬೀಳ್ವನಾತನು!
ಬಿಲದ
ಸರ್ಪವನ್ನು
ಹಿಡಿದು
ಮನೆಗೆ
ತಂದನೀತನು!
ಕರಿಮೋಡದ
ಮರೆಯಲ್ಲಿಹ
ಬೆಳ್ಳಿಚಂದ್ರನಂತಿರೆ,
ಮುಗ್ಧ
ಮನದ
ಕನಸುಗಳು,
ಧೂಮ್ರಾಕ್ಷನ
ಕೈಸೆರೆ;
ಹರಡಿ
ನಿಂತ
ಮರದ
ನೆರಳಿನಂತೆ
ಇರಲಿ
ಆಸರೆ,
ಬಿರು
ಬೇಸಗೆ
ತಂಪಾಗಲಿ,
ಕರಗಲೆಲ್ಲ
ತೊಂದರೆ.
ಹೊಸ
ಚೇತನ
ಪಲ್ಲವಿಸಲಿ,
ಹೊಸ
ಚಿಂತನ
ಮೂಡಲಿ,
ಹೊಸ
ಚಿಲುಮೆಯ
ಒಸರಿಂದ
ಹೊಸ
ನೀರು
ಚಿಮ್ಮಲಿ;
ಹೊಸ
ವರುಷದ
ಪ್ರತಿಘಳಿಗೆಯು
ಹಸಿರಾಗಿ
ಹೊಮ್ಮಲಿ,
ಹೊಸ
ಗಾಳಿಯು
ಉಸಿರಾಡಲಿ,
ಜಗಜೀವನ
ನಲಿಯಲಿ.
ಯುದ್ಧ
ಭಯದ
ನೆರಳಿನಲ್ಲಿ
ಹಬ್ಬದೊಂದು
ಪಲ್ಲವ,
ಬೇವು-ಬೆಲ್ಲ
ಬೊಗಸೆಯಲ್ಲಿ
,
ಸ್ನೇಹ-ಪ್ರೀತಿ
ಹಂಚುವ;
ಮರುಳು
ಭ್ರಾಂತಿ
ಹೊರಳಿ
ನಿಲಲಿ,
ಕಳೆಯಲೆಲ್ಲ
ರೌರವ,
ಭೀತಿ
ಕಳಚಿ,
ನೀತಿ
ಉಳಿಸಿ,
ಮರಳಿ
ಶಾಂತಿ
ಕಾಣುವ.
ಹೇಳು ಮನಸೇ
ಜಾಗತಿಕ ಕವನ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದ ಕವಿತೆ
ಯುದ್ಧ ಸಂಬಂಧಿ ಇನ್ನೊಂದು ಕವಿತೆ; ಸದ್ದಾಮನ ನಿಶ್ಯಸ್ತ್ರೀಕರಣ