ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಲವೆಂಬ ಹೊತ್ತಿಗೆಯ ಬೆಲೆಯೆಷ್ಟು ಎಂದು ಕೇಳುತಿರುವೆ...

By Staff
|
Google Oneindia Kannada News

*ವಾಸುದೇವ ಯರಗಟ್ಟಿ , ಯಶವಂತಪುರ, ಬೆಂಗಳೂರು.
E-mail: [email protected]

ಪ್ರಿಯೆ ನಾನಿಲ್ಲವೆ ನಿನ್ನ ಮನದ ಬಯಕೆಗಳಲ್ಲಿ ಗರಿಗರಿ
ಮೂಡಿಸಿರುವೆ ನಾ ನಿನ್ನ ಮನದ ಹೂ ಬನದಲ್ಲಿ ಪ್ರೇಮದೈಸಿರಿ
ಸುಮ್ಮನೇ ತಿಳಿಯಬೇಡ ನಾ ನಿನಗೆ ನೀಡುತ್ತಿರುವೆನೆಂದು ಕಿರಿಕಿರಿ
ನನ್ನ ಕಲ್ಪನಾ ಲೋಕದೆ ನೀ ಕುಣಿದು ಕುಪ್ಪಳಿಸುತ್ತಿರುವೆ ಹಿಗ್ಗಿ ಹಿರಿಹಿರಿ
ಉದ್ಯಾನವನದಲ್ಲಿ ಮೆತ್ತನೆ ಹುಲ್ಲ ಮೇಲೆ ಕುಳಿತು ತಿನ್ನುವ ನಾವು ಚುರುಮುರಿ
ಹಂಚಿಕೊಳ್ಳುತ್ತ ನನ್ನ ನಿನ್ನ ಮನದ ಭಾವನೆಗಳ ಗರಿಕೆದರಿ
ನಿಲ್ಲ ಬೇಡ ನೀ ಬಳಿ ಬಂದು ನನಗಾಗಿ ಹೆದರಿ
ನೀನಾಗು ನನ್ನ ಈ ಕವಿತೆಯ ಪ್ರೇರಣೆಯ ಮಾದರಿ.

*

ಸುಳಿದಾಡಿದೆ ನಾ ನಿನ್ನ ಸುತ್ತ ಮುತ್ತ
ನೀಡಲು ನಿನಗೆ ನನ್ನ ಸವಿ ಮುತ್ತ
ನನ್ನ ಕೈಗೆ ಸಿಗದೆ ಮೆಲ್ಲನೆ ಓಡುತ್ತಿರುವೆ ಎತ್ತ
ನಿಲ್ಲು ನೀ ಬೇಗನೆ ಮುಖ ತಿರುಗಿಸಿ ಇತ್ತ
ನೀಡುವೆ ಎಡಬಿಡದೆ ನನ್ನ ಎಲ್ಲಾ ಮುತ್ತ
ಜೀವನದಲ್ಲಿ ಮರೆಯದಿರು ಎಂದೂ ನನ್ನ ಈ ಪ್ರೇಮ ತುತ್ತ
ಕನ್ನಡಿಯಲ್ಲಿ ನೋಡಿಕೋ ನಿನ್ನ ಮೂಗ ನತ್ತ
ಬಿದ್ದಿರಬಹುದೆಂದು ನನ್ನ ಮನದ ಜೇಬಿನ ಸುತ್ತ .

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X