ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ನಿವೇದಿಸಿಯಾಗಿದೆ. ನೋಡಬೇಕು
-
ಅಶೋಕ,
ಬೆಂಗಳೂರು
Email : [email protected]
ಲೇಖನಿ, ಅಕ್ಷರ ಇವೆಲ್ಲಾ ನಿವೇದನೆಗಾಗಿ ತಾನೆ ?
ಆಕಾಶವನ್ನೆ ಹಾಳೆಯಾಗಿಸಿ, ಹಿಮಾಲಯವನ್ನೆ
ಲೇಖನಿಯಾಗಿಸಿ, ಸಮುದ್ರವನ್ನೇ ಶಾಯಿಯಾಗಿಸಿ
ಬರೆಯಬೇಕು ಪ್ರೇಮಸಂದೇಶವನ್ನು. ಹರಡಬೇಕು
ಹ್ರದಯ ಪರಿಮಳವನ್ನು.
ಛೆ!
ಹೊಳೆಯುತ್ತಿಲ್ಲ
.
ಇಟ್ಟ
ಚುಕ್ಕಿ
ಅಲ್ಲೆ
ದೃಢ.
ಮುಂದೆ
ಪದವಿಲ್ಲ
.
ಚಡಪಡಿಕೆ.
ನಿಟ್ಟುಸಿರು.
ಇತ್ಯಾದಿ.
ಏಯ್!
ಪ್ರೀತಿ
ನೀನಿರಬಾರದಿತ್ತು
.
ಇದ್ದರೆ
ತಿಳಿ
ಯುವಂತಿರಬೇಕು.
ಮಧ್ಯೆ
ಚಂದ್ರನಿದ್ದಾನೆ
ಭುವಿ-ಬಾನಿಗೆ
ನಡು
ಧೂತನಾಗಿ.
ಜಲವಿದೆ,
ಬಲವಿದೆ,
ಹಸಿರು
ಹೊನ್ನಿದೆ.
ಹೃದಯದ
ತುಂಬ
ಕನಸಿದೆ.
ಛೆ!
ತೆೇಚುತ್ತಿಲ್ಲ.
ಬರೀ
ಚುಕ್ಕೆಗಳೇ
ಹಾಳೆಯ
ತುಂಬೆಲ್ಲಾ.
ಆಶ್ಚರ್ಯ!!
ಹೊಳೆಯುತ್ತಿವೆ
ನನ್ನ
ಚುಕ್ಕಿಗಳು
ದೂರ
ದೂರದಿ
ಹೊಳೆಯುವ
ಚುಕ್ಕಿಗಳು.
ಮೀನ-ಮೇಷವಾಯಿತು.
ಸಪ್ತಋಷಿ
ಮಂಡಲವಾಯಿತು.
ಯೋಚಿಸಿ
ಇಟ್ಟ
ಬಿಂದು
ಧ್ರುವವಾಯಿತು.
ರೋಹಿಣಿ
ಯಾಯಿತು.
ನನ್ನ
ಪ್ರೀತಿಯ
ನಕ್ಷತ್ರಗಳು.
ಸಂದೇಶಬಿಂದುಗಳು.
ನನ್ನ
ಹೃದಯಚಂದ್ರನ
ಸುತ್ತ
ಹೊಳೆವ
ನನ್ನ
ಭಾವಗಳು.
ಮೋಡ
ಮರೆಯಾಗದಿರಲಿ.
ರಾಹುಕೇತು
ತಾಕದಿರಲಿ.
ಗ್ರಹಣವಾಗದಿರಲಿ
ಒಂದು
ಚುಕ್ಕಿಗೂ
ಕೂಡ.
ನನ್ನ
ಪ್ರಿಯತಮೆ
ಮೀನ-ಮೇಷ
ಎಣಿಸದಿರಲಿ.
ಮೋಡ
ಅಡ್ಡ
ಬಂದಲ್ಲಿ
ಮಳೆಯಾಗಿ
ಪ್ರೀತಿಯ
ಹ್ರುದಯ
ತಣಿಯಲಿ.
ಪ್ರೀತಿಯ
ಬೆಳೆ
ಬೆಳೆಯಲಿ,
ನನ್ನ
ಪ್ರೀತಿ
ಬೆಳಗಲಿ.
ಈ ಕವಿತೆಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ
Comments
Story first published: Wednesday, March 5, 2003, 5:30 [IST]