ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೇಡಿಕೆ

By Staff
|
Google Oneindia Kannada News
Sandhya Ravindranathಬದುಕು ನೀರಂತಾಗಲಿ
ಬಿಂದು ಸಿಂಧುವ ಸೇರಲಿ
ಬಾಳು ಸಾರ್ಥಕವಾಗಲಿ

ಹೂವಿನೆಸಳಿನ ಮೇಲೆ ಕುಳಿತ
ಮಂಜಿನ ಹನಿಯಾಲು
ರಾಗ ಭಾವದ ಬಂಧವಿಲ್ಲದ
ಜೀವನ ಭುವಿಯಾಳು
ತಾಕಿ ಸೋಂಕದೆ
ಮೆಲ್ಲಗುರುಳುವ
ಬೆಸುಗೆಯ ಕರುಣಿಸು
ಸಫಲವಾಗಲಿ ಜೀವನ

ಕಸವ ಸೋಸಿ ತಿಳಿಯ ಜಲವ
ನೀಡುವ ಕೊಳದೊಲು
ಗಸಿಯ ಕದಡದೆ ಸಾರ ಹೀರುವ
ಚೇತನ ಮನದೊಳು
ಬೆರೆತೂ ಬೆರೆಯದೆ
ಮೇಲಕೇಳುವ
ಬಾಳುವೆ ಕರುಣಿಸು
ಸಫಲವಾಗಲಿ ಜೀವನ

ಬಂಡೆ ಮೇಲೆ ಹರಿದು ನದಿಯು
ಸಾಗರನ ಸೇರಲು
ಹರಿಸಿ ಹಸಿರಿನ ಪೈರ ಹೊನಲು
ಸಾಗುವ ಪರಿಯಾಳು
ದಂಡೆಗಂಟದೆ
ಗುರಿಯ ಸೇರುವ
ಭಾಗ್ಯವ ಕರುಣಿಸು
ಸಫಲವಾಗಲಿ ಜೀವನ

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X