ನೆನೆಪ ದೀಪಿಕೆ ಉರಿಸಿ ಕಾದಿಹರು...
- ಸಂಧ್ಯಾ ರವೀಂದ್ರನಾಥ್
ವಿಜಯದ ಗುರುತು ವಾಣಿಜ್ಯ ಕೇಂದ್ರ
ಹಂತ ಹಂತ ಕನಸೆಲ್ಲ ಇಂದು
ಚಿಂದಿ ಚಿಂದಿ ಛಿದ್ರ ಛಿದ್ರ
ನರನಾರಿ ತನುಮನವೆಲ್ಲ
ನೊಂದು ಬೆಂದು ಸೀಯಿತಲ್ಲಾ !
ಯಾರ ದ್ವೇಷಕೆ ಯಾರ ಸಾವು-ನೋವು ?
ಧಾರ್ಮಿಕ
ಯುದ್ಧವಂತೆ
ಸ್ವರ್ಗಕೆ
ಸೋಪಾನವಂತೆ
ಮುಗ್ಧಜೀವಿಗಳ
ಹತ್ಯೆ
ಅಲ್ಲಾ
ಅದೆಂತು
ಮೆಚ್ಚುವನಂತೆ
?
ಕಾದು
ಕುಳಿತಿಹರು...
ಮರಳಿ
ಬಂದೇ
ಬರುವರೆಂದು
ಕಾದು
ಕುಳಿತಿಹರು...
ಎಂದಿನಂತೆ
ಹಗಲಲ್ಲಿ
ದುಡಿಯ
ಹೋದವರು
ಪ್ರೇಮದ
ತೆಕ್ಕೆಗೆ
ಓಡೋಡಿ
ಬರುವರೆಂದು
ಕಾಯುತ್ತ
ಕುಳಿತಿಹರು....
ನೆನಪಿನ
ದೀಪಿಕೆಯ
ಉರಿಸಿ
ಭರವಸೆಯ
ನೂಲೇಣಿಯನೇರಿ
ಅರಸಿ
ಚಡಪಡಿಸಿ
ಕ್ಷಣಕ್ಷಣವೆಣಿಸುತ
ಕಾಯುತ್ತ
ಕುಳಿತಿಹರು...
ತಂದೆ
ತಾಯಿ
ಬಂಧುಬಳಗವನೇಕ
ಕಳೆಗುಂದಿದ
ಮುಖ
ನಾಶವಾಯಿತೆ
ಇಂದಿವರ
ಶಾಂತಿ
ಸುಖ
!
ಹೊತ್ತಿ
ಉರಿದು
ಬೆಂದು
ಭಸ್ಮವಾಗುತ್ತಿದ್ದರೂ
ಮೃತ್ಯು
ತಾಂಡವ
ಹುಚ್ಚೆದ್ದು
ಕುಣಿಯುತ್ತಿದ್ದರೂ
ಕೇಳಿದ್ದು
ನಂಬಲಾರದೆ,
ಕಂಡದ್ದು
ಮನ
ಒಪ್ಪದೆ
ಪ್ರೀತಿ
ಪಾತ್ರರೆಲ್ಲ
ಎಂತೋ
...
ಹೇಗೋ...
ಹಿಂತಿರುಗಿ
ಬಂದೇ
ಬರುವರೆಂದು
ಕಾಯುತ್ತಾ..
ಕುಳಿತಿಹರು...
ನೈನ್
ಒನ್
ಒನ್
ಮಾನವ
ಕುಲಕೋಟಿಯ
ಆರ್ತನಾದವಿದು
ಧರ್ಮದ
ರಕ್ಷಣೆಗೆ
ದೀನರ
ಮೊರೆಯಿದು
ದುಷ್ಟರ
ಶಿಕ್ಷೆಗೆ
ಹೀನರ
ಅಳಿವಿಗೆ
ಆಹ್ವಾನವಿದು
ನವಯುದ್ಧರಂಗದ
ರಣಭೇರಿಯಿದು
(ಸೆಪ್ಟೆಂಬರ್ 11, ಅಮೆರಿಕನ್ನರು ಬರೆಯುವಂತೆ 9/ 11 ಅಮೆರಿಕದ ಮೇಲೆ ದಾಳಿಯಾದ ದಿನ, ವರ್ಲ್ಡ್ ಟ್ರೇಡ್ ಸೆಂಟರ್ ಉರುಳಿ ಬಿದ್ದ ದಿನ. 911 ಎಮರ್ಜೆನ್ಸಿ ನಂಬರ್ ಕೂಡ. ಆಪತ್ತು ಒದಗಿದಾಗ ಪೊಲೀಸ್, ಮೆಡಿಕಲ್ ಹೆಲ್ಪ್ ಇತ್ಯಾದಿ ಪಡೆಯಲು / ಸಂಪರ್ಕಿಸಲು, ಡಯಲ್ ಮಾಡಬೇಕಾದ ಫೋನ್ ನಂಬರ್ 911)ಮುಖಪುಟ / ಸಾಹಿತ್ಯ ಸೊಗಡು