ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಧುನಿಕ ವಚನ ಪರಂಪರೆಗೆ ಕನ್ನಡದಲ್ಲಿ ಪರಂಪರೆಯೇ ಇದೆ. ವಿಮಲಾ ಚನ್ನಬಸಪ್ಪ ಕನ್ನಡದ ಆಧುನಿಕ ವಚನಕಾರರಲ್ಲಿ ಎದ್ದುಕಾಣುವ ಹೆಸರು. ಸುಲಿದ ಬಾಳೆಯ ಹಣ್ಣಿನಂದದ ತಿಳಿಗನ್ನಡ, ಕಗ್ಗಂಟಲ್ಲದ ವಿಚಾರ- ವಿಮಲಾ ಅವರ ವಚನಗಳನ್ನು ಆಕರ್ಷಕವಾಗಿಸಿದೆ. ಓದುಗರಲ್ಲಿ ವಿಚಾರದ ಕಿಡಿಯನ್ನ , ಅಧ್ಯಾತ್ಮದ ಕುಡಿಯನ್ನ ಅರಳಿಸಬಹುದೆನ್ನುವ ನಂಬುಗೆಯಿಂದ ವಿಮಲಾ ಅವರ ಆಯ್ದ ವಚನಗಳನ್ನು ದಿನಕ್ಕೆ ನಾಲ್ಕರಂತೆ ವಾರಕಾಲ ನಿಮ್ಮ ಗಮನಕ್ಕೆ ತರುತ್ತಿದ್ದೇವೆ. ಒಪ್ಪಿಸಿಕೊಳ್ಳಿ.

By Staff
|
Google Oneindia Kannada News

ವಿಮಲ ವಚನಗಳು

  • ವಿಮಲಾ ಚನ್ನಬಸಪ್ಪ (ಅಲೆಕ್ಸಾಂಡ್ರಿಯಾ, ವರ್ಜೀನಿಯಾ)
33
ಹರಿಯುವ ನೀರು ಉರಿಯುವ ಸೂರ್ಯ
ನೆಲದಲಿ ಇಬ್ಬನಿ ಮುಗಿಲಲಿ ತಾರೆ
ಅರಳುವ ಹೂವು ಕೆರಳುವ ಹುಲಿಯು
ಬೇವಿನ ಕಹಿಯು ಜೇನಿನ ಸಿಹಿಯು
ಹಸುರಿನ ತಂಪು ತಾವರೆಗಂಪು
ನವಿಲಿನ ನಾಟ್ಯಕೆ ಕೋಗಿಲೆ ಇಂಪು
ಗುಡುಗಿನ ಅಬ್ಬರ ಮಿಗೆ ಕೋಲ್ಮಿಂಚು
ಕಡಲಿನ ಹೆದ್ದೆರೆ ಮರಳಿನ ಅಂಚು
ಹಗಲಿನ ಬೆಳಕು ಇರುಳಿನ ಕತ್ತಲು
ಓಂಕಾರದ ಬೀಜವ ನೀ ಬಿತ್ತಲು
ತಿರುಗತಲಿದೆ ಈ ಜಗವೆತ್ತೆತ್ತಲು
ವಿಶ್ವದಂಗಳವು ವಿಸ್ಮಯದ ಅಪಾರ
ನಿನ್ನ ವರವಿದು ಚನ್ನಬಸವೇಶ್ವರ

34

ಚಿತ್ರಗಳು ಕಣ್ಣ ಮುಂದೆ, ಕಲಾವಿದನು ಕಣ್ಣ ಮರೆಯಲ್ಲಿ
ಪುಸ್ತಕವು ಕಣ್ಣ ಮುಂದೆ, ಲೇಖಕನು ಕಣ್ಣ ಮರೆಯಲ್ಲಿ
ಹೂವುಗಳು ಕಣ್ಣ ಮುಂದೆ, ತೋಟಗಾರ ಕಣ್ಣ ಮರೆಯಲ್ಲಿ
ವಿಮಲೇಶ ಚನ್ನಬಸವ ಕೇಳಯ್ಯ
ಈ ಜಗದಾಟ ಕಣ್ಣ ಮುಂದೆ, ಜಗದೀಶ ಕಣ್ಣ ಮರೆಯಲ್ಲಿ

35
ಪಕ್ವಾನ್ನಕ್ಕೆ ಮೊದಲು ರಸಪಾಕಿಯಲ್ಲವೇ
ಮದ್ದಿಗೆ ಮೊದಲು ರಸಾಯನಿಕವಲ್ಲವೇ
ಚಿತ್ರಕ್ಕೆ ಮೊದಲು ಚಿತ್ರಕಾರನಲ್ಲವೇ
ಪುಸ್ತಕಕ್ಕೆ ಮೊದಲು ಲೇಖಕನಲ್ಲವೇ
ವಿಮಲೇಶ ಚನ್ನಬಸವೇಶ
ಜಗದ ಲೀಲೆಗೆ ಮೊದಲು ಜಗದೀಶ ನೀನಲ್ಲವೇ?

36
ಊಟ ಮಾಡದೆ ಕಾಲು ಏಳಲಿಲ್ಲ
ಪೆಟ್ರೋಲ್‌ ಹಾಕದೆ ಚಾರು ನಡೀಲಿಲ್ಲ
ಬೀಜ ಬಿತ್ತದೆ ಗದ್ದೆ ಬೆಳೆಯಲಿಲ್ಲ
ನೀರು ಹಾಕದೆ ಹೂವು ಅರಳಲಿಲ್ಲ
ಚನ್ನಬಸವಾ ನಿನ್ನ ಚರಣದಲ್ಲಿ
ಭಕ್ತಿಯಿಲ್ಲದೆ ಮುಕ್ತಿ ದೊರೆಯಲಿಲ್ಲ

ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X