ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಧುನಿಕ ವಚನ ಪರಂಪರೆಗೆ ಕನ್ನಡದಲ್ಲಿ ಪರಂಪರೆಯೇ ಇದೆ. ವಿಮಲಾ ಚನ್ನಬಸಪ್ಪ ಕನ್ನಡದ ಆಧುನಿಕ ವಚನಕಾರರಲ್ಲಿ ಎದ್ದುಕಾಣುವ ಹೆಸರು. ಸುಲಿದ ಬಾಳೆಯ ಹಣ್ಣಿನಂದದ ತಿಳಿಗನ್ನಡ, ಕಗ್ಗಂಟಲ್ಲದ ವಿಚಾರ- ವಿಮಲಾ ಅವರ ವಚನಗಳನ್ನು ಆಕರ್ಷಕವಾಗಿಸಿದೆ. ಓದುಗರಲ್ಲಿ ವಿಚಾರದ ಕಿಡಿಯನ್ನ , ಅಧ್ಯಾತ್ಮದ ಕುಡಿಯನ್ನ ಅರಳಿಸಬಹುದೆನ್ನುವ ನಂಬುಗೆಯಿಂದ ವಿಮಲಾ ಅವರ ಆಯ್ದ ವಚನಗಳನ್ನು ದಿನಕ್ಕೆ ನಾಲ್ಕರಂತೆ ವಾರಕಾಲ ನಿಮ್ಮ ಗಮನಕ್ಕೆ ತರುತ್ತಿದ್ದೇವೆ. ಒಪ್ಪಿಸಿಕೊಳ್ಳಿ.

By Staff
|
Google Oneindia Kannada News

ವಿಮಲ ವಚನಗಳು

  • ವಿಮಲಾ ಚನ್ನಬಸಪ್ಪ (ಅಲೆಕ್ಸಾಂಡ್ರಿಯಾ, ವರ್ಜೀನಿಯಾ)
29
ಭಕ್ತಿ ಚಿತ್ತದ ದೀಪ, ಭಾವ ಸುರಿಯುವ ಎಣ್ಣೆ
ದೇಹ ಮಣ್ಣಿನ ಪಣತೆ, ಬಾಳೆಲ್ಲ ಹೊಸೆದ ಬತ್ತಿ
ವಿಮಲೇಶ ಚನ್ನಬಸವೇಶ ಜ್ಯೋತಿಲಿಂಗವೇ
ನೀ ಸೊಡರನಿಕ್ಕಿ ಕತ್ತಲೆಯ ಕಳೆಯಬೇಕಯ್ಯಾ

30
ಕಲ್ಲಾಗಿ ಒಂದೆಡೆಗೆ ಕುಳಿತುಕೊಳ್ಳದಿರಯ್ಯ
ನನ್ನ ಹೃದಯದಲಿ ನೀನು ಸ್ಥಿರವಾಗಿರು
ವಿಮಲೇಶ ಚನ್ನಬಸವೇಶ ದೇವನೇ
ನೀನು ಉತ್ಸವಮೂರ್ತಿ ನಾನು ತೇರು

31
ಕಬ್ಬನ್ನು ಹಿಂಡಿ ರಸ ಕುಡಿಯಬೇಕು
ತೆಂಗಿನ ಕಾಯನ್ನು ಒಡೆದು ರಸವೀಂಟಬೇಕು
ಬಾಳೆಯ ಮಿದು ಸಿಪ್ಪೆ ಸುಲಿದು ತಿನ್ನಲುಬೇಕು
ದ್ರಾಕ್ಷಿ ಹಣ್ಣನು ಮಾತ್ರ ಹಾಗೇ ಸವಿಯಬಹುದು
ಎನ್ನರಸ ವಿಮಲೇಶ ಚನ್ನಬಸವದೇವ
ನನ್ನ ಭಕ್ತಿಯನು ದ್ರಾಕ್ಷಿಯಾಗಿ ಸ್ವೀಕರಿಸು

32
ಇರುಳ ತಾರೆಗಳನೆಣಿಸಿ ದಣಿದು ಹೋದೆ
ಧರೆಗೆ ನೀನಿತ್ತ ಹೂಗಳ ಬಣ್ಣದೂಟವನುಂಡೆ
ಕಂಪು ಸೊಂಪಿನ ಸೊಬಗನುಂಡು ಮರುಳಾದೆ
ಇಂಪಿನ ವೈಖರಿಗೆ ನಾ ಬೆರಗಾಗಿ ಬಂದೆ
ವಿಮಲೇಶ ಚನ್ನಬಸವೇಶದೇವನೆ
ಕಣಕಣದಿ ತುಂಬಿರುವ ನಿನ್ನ ಕರುಣೆಗೆ
ನಾನು ತಲೆಬಾಗಿ ನಿಂದೆ

ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X