ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಧುನಿಕ ವಚನ ಪರಂಪರೆಗೆ ಕನ್ನಡದಲ್ಲಿ ಪರಂಪರೆಯೇ ಇದೆ. ವಿಮಲಾ ಚನ್ನಬಸಪ್ಪ ಕನ್ನಡದ ಆಧುನಿಕ ವಚನಕಾರರಲ್ಲಿ ಎದ್ದುಕಾಣುವ ಹೆಸರು. ಸುಲಿದ ಬಾಳೆಯ ಹಣ್ಣಿನಂದದ ತಿಳಿಗನ್ನಡ, ಕಗ್ಗಂಟಲ್ಲದ ವಿಚಾರ- ವಿಮಲಾ ಅವರ ವಚನಗಳನ್ನು ಆಕರ್ಷಕವಾಗಿಸಿದೆ. ಓದುಗರಲ್ಲಿ ವಿಚಾರದ ಕಿಡಿಯನ್ನ , ಅಧ್ಯಾತ್ಮದ ಕುಡಿಯನ್ನ ಅರಳಿಸಬಹುದೆನ್ನುವ ನಂಬುಗೆಯಿಂದ ವಿಮಲಾ ಅವರ ಆಯ್ದ ವಚನಗಳನ್ನು ದಿನಕ್ಕೆ ನಾಲ್ಕರಂತೆ ವಾರಕಾಲ ನಿಮ್ಮ ಗಮನಕ್ಕೆ ತರುತ್ತಿದ್ದೇವೆ. ಒಪ್ಪಿಸಿಕೊಳ್ಳಿ.

By Staff
|
Google Oneindia Kannada News

ವಿಮಲ ವಚನಗಳು

  • ವಿಮಲಾ ಚನ್ನಬಸಪ್ಪ (ಅಲೆಕ್ಸಾಂಡ್ರಿಯಾ, ವರ್ಜೀನಿಯಾ)
25
ಮಾತಿಗೆ ಮೊದಲು ಶಿವನಾಮ
ಪ್ರೀತಿಗೆ ಮೊದಲು ಶಿವಭಕ್ತಿ
ಜ್ಯೋತಿಗೆ ಮೊದಲು ಪರಂಜ್ಯೋತಿ
ಪುರುಷಗೆ ಮೊದಲು ಪರಾಶಕ್ತಿ
ವಿಮಲೇಶ ಶ್ರೀ ಚನ್ನಬಸವೇಶ್ವರ
ಸಚ್ಚಿದಾನಂದದಲಿ ಚಿರಂತನ ಮುಕ್ತಿ

26
ಪ್ರೀತಿ ಮಾಡಿದರೆ ಪ್ರೀತಿ ಹೊರಳಿ ಬಂದಾವು
ಸಿಟ್ಟು ಮಾಡಿದರೆ ಸಿಟ್ಟು ತಿರುಗಿ ಬಂದಾವು
ಆಟವಾಡಿದರೆ ಚಂಡು ಪುಟಿದು ಬಂದಂತೆ
ಕಾಟ ಮಾಡಿದ್ದೆಲ್ಲ ತಿರುಗಿ ಬಂದಾವು
ವಿಮಲೇಶ ಶ್ರೀ ಚನ್ನಬಸವೇಶ್ವರ
ನಿನ್ನ ಭಕ್ತಿಯೆಲ್ಲ ವರವಾಗಿ ಬಂದಾವು

27
ವಿದ್ಯೆಯಾಂದಿಗೆ ವಿನಯವಿರಬೇಕು
ಸಿರಿಯಾಂದಿಗೆ ಉದಾರತೆಯಿರಬೇಕು
ಸಾಮರ್ಥ್ಯದೊಂದಿಗೆ ಅನುಕಂಪವಿರಬೇಕು
ನ್ಯಾಯದೊಂದಿಗೆ ಕರುಣೆಯಿರಬೇಕು
ಚೆಲುವಿನೊಂದಿಗೆ ಸದ್ಗುಣಗಳಿರಬೇಕು
ಚನ್ನಬಸವೇಶ್ವರನ ವರಗಳಿಂದ
ನಿತ್ಯವೂ ಮನದಲ್ಲಿ ಮಮತೆಯಿರಬೇಕು

28
ನಡೆವಾಗ ನಲಿದು ಕುಣಿವಾಗ
ನುಡಿವಾಗ ನಗುವಾಗ ಹಾಡುವಾಗ
ಶಿವ ನಿನ್ನ ನೆನಪು ಎಲ್ಲಿಯೋ ಅಡಗಿತ್ತು
ಅಡಗಿಹೋಗಿತ್ತು ಮನದ ಕಡಲಿನ ಆಳದಲ್ಲಿ
ಮರಳಿನಲಿ ಸಿಕ್ಕ ಸಿಂಪಿನೊಳಗಣ ಮುತ್ತಿನಂತೆ !
ನಡೆವ ಕಾಲಿಗೆ ಪೆಟ್ಟು ತಗಲಿದಾಗ
ಏನೋ ಎಂತೋ ನೋವನುಂಡಾಗ
ಅಯ್ಯೋ ಶಿವನೇ ಎಂದೆ, ನಿನ್ನ ನೆನಪಾಗಿತ್ತು
ಸಂಭ್ರಮದ ಜಾತ್ರೆಯಲಿ ಅಗಲಿ ತಪ್ಪಿಸಿಕೊಂಡು
ಮರಳಿ ತಾಯಿಯ ಹುಡುಕುತಿರುವ ಮಗು ನಾನಾದೆ
ಶಿವ ಬಂದು ಕೈ ಹಿಡಿಯೋ
ವಿಮಲ ಶ್ರೀ ಚನ್ನಬಸವೇಶ್ವರ

ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X