ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಆಧುನಿಕ ವಚನ ಪರಂಪರೆಗೆ ಕನ್ನಡದಲ್ಲಿ ಪರಂಪರೆಯೇ ಇದೆ. ವಿಮಲಾ ಚನ್ನಬಸಪ್ಪ ಕನ್ನಡದ ಆಧುನಿಕ ವಚನಕಾರರಲ್ಲಿ ಎದ್ದುಕಾಣುವ ಹೆಸರು. ಸುಲಿದ ಬಾಳೆಯ ಹಣ್ಣಿನಂದದ ತಿಳಿಗನ್ನಡ, ಕಗ್ಗಂಟಲ್ಲದ ವಿಚಾರ- ವಿಮಲಾ ಅವರ ವಚನಗಳನ್ನು ಆಕರ್ಷಕವಾಗಿಸಿದೆ. ಓದುಗರಲ್ಲಿ ವಿಚಾರದ ಕಿಡಿಯನ್ನ , ಅಧ್ಯಾತ್ಮದ ಕುಡಿಯನ್ನ ಅರಳಿಸಬಹುದೆನ್ನುವ ನಂಬುಗೆಯಿಂದ ವಿಮಲಾ ಅವರ ಆಯ್ದ ವಚನಗಳನ್ನು ದಿನಕ್ಕೆ ನಾಲ್ಕರಂತೆ ವಾರಕಾಲ ನಿಮ್ಮ ಗಮನಕ್ಕೆ ತರುತ್ತಿದ್ದೇವೆ. ಒಪ್ಪಿಸಿಕೊಳ್ಳಿ.
ವಿಮಲ ವಚನಗಳು
- ವಿಮಲಾ ಚನ್ನಬಸಪ್ಪ (ಅಲೆಕ್ಸಾಂಡ್ರಿಯಾ, ವರ್ಜೀನಿಯಾ)
ಎನ್ನಸುವ ಮೋಡವ ಮಾಡಿ ನೋಡಯ್ಯ
ಕಣ್ಣೀರೆ ಮಳೆಯಾಗಿ ಸುರಿಯಲಯ್ಯ
ಮಳೆಬಂದು ಬೆಳೆ ತುಂಬಿ ಬರಲಿ ಭೂಮಿ
ಎಲೆ ಹೂವು ಮಿಡಿಯಾಗಿ ಬೆಳೆದೇನು ಸ್ವಾಮಿ
ಹಾರವಾಗುವೆ ನಾನು ಸುಮ ಕುಸುಮ ಸೇರಿ
ಧನ್ಯಳಾಗುವೆ ನಿನ್ನ ಕೊರಳನ್ನು ಸೇರಿ
ಹೂವಾಗದಿದ್ದರೆ ಹುಡಿ ಮಾಡು ನನ್ನ
ನಿನ್ನ ಪಾದದ ಬಳಿಗೆ ನಾನಿರುವುದೇ ಚೆನ್ನ
ನಿನ್ನಡಿಯ ಗೆಜ್ಜೆಯ ಮಾಡಿ ನೋಡಯ್ಯ
ಹೆಜ್ಜೆ ಹೆಜ್ಜೆಗೆ ಶಂಕರ ಎಂಬೆನಯ್ಯ
ಶಂಕರನ ಕಿಂಕರನ ಕಿರಿಮಗಳು ನಾನೆಂದು
ಕರುಣಿಸೈ ಶ್ರೀ ಚನ್ನಬಸವೇಶ್ವರ
2
ಸುಖದಲ್ಲಿ
ಇರುವಾಗ
ಶಿವನೆಂದು
ಪೂಜಿಸಿದೆ
ದುಃಖ
ಬರದಿರಲೆಂದು
ಮೊರೆಯಿಟ್ಟು
ಪೂಜಿಸಿದೆ
ನಂಬಿದ್ದೆ
ನಚ್ಚಿದ್ದೆ
ನಂಬಿಯೇ
ಕರೆದಿದ್ದೆ
ಕರೆದರೆ
ಬಂದೆಯಾ
?
ಎದೆ
ಹೊತ್ತಿ
ಉರಿದರೆ
ಬಂದೆಯಾ
?
ಹಂಬಲವು
ಅಳಿದು,
ಬೆಂಬಲವು
ಕಳೆದು
ನಂಬಿಕೆಯೂ
ಇಳಿದು
ಹೋದುತ್ತಿದೆಯಯ್ಯಾ
ವಿಮಲೇಶ
ಶ್ರೀ
ಚನ್ನಬಸವ
ಪ್ರಭುವೇ.
3
ನಾನು
ನುರಿತವಳಲ್ಲ
,
ಅರಿದ
ಬಲ್ಲಿದಳಲ್ಲ
ಬಿದ್ದಿರುವೆ
ಕೆಳಗೆ
ನಾ
ಕಲ್ಲಿನಂತೆ
ಎದ್ದು
ಏಳುವ
ಬಗೆಯ
ತಿಳಿಯಲಿಲ್ಲ
ಎಲ್ಲ
ಬಲ್ಲವ
ನೀನೆ,
ಸಲಹುವನು
ನೀನೆ
ಎನ್ನ
ಕೈ
ಹಿಡಿದೇಕೆ
ಎಬ್ಬಿಸಲಿಲ್ಲ
?
ನನಗಂತೂ
ಈ
ಪ್ರಶ್ನೆಗುತ್ತರವೆ
ಇಲ್ಲ
ವಿಮಲೇಶ
ಚನ್ನಬಸವೇಶಾ
ಇನ್ನು
ಮುಂದಾದರೂ
ಮರೆಯದಿರು
ಎನ್ನ
!
4
ಹೂವು
ಅರಳುವುದೂ
ನಿನ್ನಿಂದ
ಸಾವು
ನರಳಿಕೆಯೂ
ನಿನ್ನಿಂದ
ಯಾವುದ
ನೆನೆದು
ಯಾವುದ
ಮರೆಯಲಿ
?
ವಿಮಲೇಶ
ಚನ್ನಬಸವಾ
ನೀನೆ
ಹೇಳಯ್ಯ?
.ಮುಖಪುಟ / ಸಾಹಿತ್ಯ ಸೊಗಡು
Comments
Story first published: Monday, October 7, 2002, 5:30 [IST]