ರಕ್ತ ಬೀಜರು
ಹಿರಿಯ
ಬುಡದ
ದೊಡ್ಡಾಲದ
ನೂರು
ಶಾಖೆಗಳು
-
ಚಾಚಿ
ಹರಡಿ
ದಿಕ್ಕು
ದಿಕ್ಕು
ನೀಡೆ
ತಂಪು
ನೆರಳು.
ಗೆಲ್ಲು-ಗೆಲ್ಲು,
ರೆಂಬೆ-ಕೊಂಬೆ,
ಹೂ-ಹಣ್ಣುಗಳು-
ಅರ್ಥಪೂರ್ಣವಾದ
ಬದುಕು,
ಆಸರೆ
ಆಧಾರಗಳು.
ತಾಯಿ
ಬೇರಿನಿಂದ
ಬೆಳೆದ
ಒಂದು
ಮೂಲ
ಕಾಂಡ-
ಅತ್ತ
ಇತ್ತ
ಹಂಚಿ
ಸರಿದು
ವಿಸ್ತಾರ,
ಪ್ರಚಂಡ.
ಬೇರೆ
ಬೇರೆ
ಬೇರುಗಳಲಿ
ನೀರು
ಹೀರುವಲ್ಲೂ-
ಮೂಲದೆಲ್ಲ
ಛಾಯೆ
ಕಂಡು,
ಅಖಂಡತೆಯೆ
ಎಲ್ಲೂ.
ಹಸಿರು-ಹಸಿರು-ಹಚ್ಚನುಸಿರು,
ಜೀವ
ಜಾಲ
ತಾಣ-
ಒಂದೆ
ಬಾನ
ಅಡಿಯಲೊಂದು
ಸುಂದರ
ಭುವಿ
ಕಾಣ.
ಅಣ್ಣ-ಅಕ್ಕ-ತಮ್ಮ-ತಂಗಿ,
ಹಿರಿಯ-ಕಿರಿಯರೆಲ್ಲ-
ಒಂದೇ
ಮೂಲ
ಆಲದೊಲವು
ಹೀರಿ
ಬೆಳೆದರಲ್ಲ
!
ದೇಶ-ದೇಶ-ಭಾಷೆ-ವೇಷ,
ಮನುಜ
ಮುಖ
ಹಲವು
-
ಬಣ್ಣ-ರೂಪ-ರೇಖೆಗಳಿಗೆ
ನಾಮಕರಣ
ನೆಪವು.
ಸೂರಿನಡಿಯೆ
ಸಾರ
ಹೀರಿ
ರೆಕ್ಕೆ
ಬಲಿತ
ಕೂಸು-
ಗಾಳಿಗೊಡ್ಡಿ
ಬಾನ
ಭಿತ್ತಿ
ಸೇರಲದುವೆ
ಸೊಗಸು.
ಕರುಳಭಾವ
ಮೆಟ್ಟಿ
ನಿಂತು
ತಾಯ
ಬೆನ್ನಿಗಿರಿದ-
ಏರಿದೇಣಿ
ಮರೆತ
ಧೂರ್ತ-ತನ್ನ
ತನದಿ
ಮೆರೆದ.
ನಂಟುತನವದಾರ
ಗಂಟು
?ಮಾನವತೆಗೆ
ದುಃಸ್ಥಿತಿ-
ಸದನುಕೂಲದಾವಿಷ್ಕಾರ
ಬಾಣವಾದ
ದುರ್ಮಿತಿ.
''
ವಿಶ್ವವೊಂದು
ಪುಟ್ಟ
ನಗರಿ’’-
ತಾಂತ್ರಿಕತೆಯ
ಕೊಡುಗೆ-
ನಗುವ
ಮೇಲೆ
ಹೊಡೆದ
ನೋವು,
ಕೆಡವಿ,
ಘೋರ
ಬಲೆಗೆ.
ಯಾರ
ರಕ್ತದಾಹ
ತಣಿಸೆ
ಜೀವ
ತೆತ್ತರಾರು-
ನೋವನುಂಡು,
ನೋವ
ಹಂಚಿ,
ಯಮರೆ
ಆದ
ರೂಕ್ಷರು.
ಅಡಗಿ
ಕುಳಿತ
ಹೇಡಿನರಿ-
ಎಷ್ಟು
ಬಾಳಬಹುದು
?
ಸಾವಿರಾರು
ನಿಡುಸುಯ್ಲಿಗೆ
ಬೇಯದೆ
ಇರಲಾರದು.
ಬೌದ್ಧಿಕತೆಯ
ದುಷ್ಪ್ರಯೋಗ,
ಬಲಿಪಶುವೂ
ಮನುಜ-
ಮೂಲ
ಆಲವನ್ನೆ
ಮರೆತ
ಜೀವೋತ್ತಮ
ವಂಶಜ.