ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಹರಿದದ್ದು ಪುಟವಲ್ಲ
- ಆಶಾ ಬಾಲಕೃಷ್ಣ ಭಟ್, ಫ್ರೀಮಾಂಟ್, ಕ್ಯಾಲಿಫೋರ್ನಿಯಾ
,
ಹರಿದದ್ದು ತೊರೆ !
ಸುಧೆಯಾಗಿ ಇನ್ನೂ ಹರಿಯಬೇಕೆಂಬ
ಭಾವವಿದ್ದ ಅದಕೆ,
ಇರಲಿಲ್ಲ ಅವಕಾಶ
ಹೊರಗೆ ಇಣುಕುವುದಕ್ಕೆ.
ಎಷ್ಟೋ ಮಳೆಗಾಳಿಗಳ ಹೊಡೆತಕ್ಕೆ,
ಗಟ್ಟಿಯೇ ಇದ್ದ ನಿನ್ನ ಕಟ್ಟುಪಾಡುಗಳ
ಅಣೆಕಟ್ಟಿನ ಒಂದೊಂದು ಇಟ್ಟಿಗೆಗಳು,
ಅಲುಗಾಡೆ ಕಾಲಚಕ್ರದ ಗತಿಯಡಿಗೆ
ಸಿಲುಕಿ, ಸಿಕ್ಕ ಅವಸರದಿ
ಹರಿಯ ಹೊರಡೆ,
ಸೇರೆ ಸಮಾನ ಮನ ಝರಿಗಳು
ಧ್ವನಿಯೇರಿಸೆ ಒಪ್ಪಾಗಿ
ಹರಿಯುವುದು ಪ್ರಕೃತಿ,
ಅದಕಿರಲಿ ಅವಕಾಶ ಎಂದಾಗ
ತಿಳಿಯಬೇಡ ತಪ್ಪಾಗಿ,
ಹರಿದದ್ದು ಪುಟವೆಂದು.
ಎಲ್ಲವೂ
ಬ್ರಹ್ಮ
ಸೃಷ್ಟಿ
ಸಹಜ
ಎಂದರೂ,
ತಾರತಮ್ಯ
ಮನುಜ
ಸೃಷ್ಠಿಯೇ
ನಿಜ.
ನೀನು
ಬಳಸುವ
ಉತ್ತಮ
ನಾನು
ಬಳಸಿದರೇಕೆ
ಅಧಮ?
ನೀನು
ಬಳಸುವ
ನೀನು
ನಾನು
ಬಳಸಿದರೇನು
?
ನಾ
ಮಾಡುವ
ಕಾಯಕ
ನಿನಗೆ
ಯಾತಕ್ಕೆ
ನರಕ
?
ಬೇಡ
ನನಗೊಂದು
ನೀತಿ,
ನಿನಗೊಂದು
ನೀತಿ,
ಇರಲಿ
ಸಮಾನ
ರೀತಿ,
ನೀತಿ
ಬಳಸದೆಯೇ
ಬೆಳೆಸಿಕೋ
ವಿಶಾಲ
ಮನೋಸ್ಥಿತಿ.
ಕವಿತೆಗೆ ಸ್ಫೂರ್ತಿ : ಮುಖಪುಟ / ಸಾಹಿತ್ಯ ಸೊಗಡು
Comments
Story first published: Thursday, October 17, 2002, 5:30 [IST]