ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಮರಣೆ

By *ಜ್ಯೋತಿ ಮಹಾದೇವ್
|
Google Oneindia Kannada News

Jyothi Mahadev
ಹೊನಲಿನಲೆಯಂತೆ ನಲಿವ ಕೇಶ ಗಂಗೆ,
ತೆನೆಯ ತೂಗುವ ಬಯಲಂಥ ನಗೆ ತುಂಗೆ;
ಮುಗಿಲು-ಸಾಗರ ಪರಿಧಿ ಹೃದಯ ವೈಶಾಲ್ಯ,
ಅಗಲಿದಾಗಲೆ ಅರಿವು; ಮನವು ನೈರ್ಮಾಲ್ಯ.

ನೆರೆಹೊರೆಯ ಸುಂದರಿಯ ಸೌಂದರ್ಯ ಸೆಳೆದು,
ಅರೆಬಿರಿದ ಕಣ್ಣಲ್ಲೆ ಅವಳತ್ತ ನಡೆದು;
ಮತ್ತು-ಮೆತ್ತೆಗಳ ರಾಜ್ಯದಲಿ ಮೈ ಮರೆಯೆ,
ಸುತ್ತುವುದು ನುಣ್ಣನೆಯ ರೇಶ್ಮೆ ಎಳೆಯೆಳೆಯೆ.

ಹೊಳೆವ ತಿಳಿನೀರ ಕೊಳ ಎಷ್ಟಿದ್ದರೇನೀಗ,
ನಲಿವ ಹೊಂದಾವರೆಗಳಿಲ್ಲವಾದಾಗ;
ಸವೆದ ದಾರಿಯ ಕೊನೆಯ ತಿರುವಿನಲಿ ನಿಂತು,
ಅವಲೋಕಿಸಿದರೊಂಟಿತನ ಜಿಗಿದೆದ್ದು ಬಂತು.

ಮತ್ತೆ ಮರುಕಳಿಸುವುದು ಹೊತ್ತವಳ ನೆನಹು,
ಅತ್ತು ಅತ್ತರು ಸಿಗದು, ಮತ್ತವಳ ಮಡಿಲು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X