ಸ್ವರ್ಣ ಮಕುಟವ ಧರಿಸಿದವಗೆ, ಗೌರವರ್ಣದ ಸುಗಜವದನಗೆ...
ಅಷ್ಟೇ ಅಲ್ಲ, ‘ಇಂಚರ’ ಎಂಬ ಸಂಗೀತಗಾರರ ಸಮೂಹದಲ್ಲೂ ರಾಘವೇಂದ್ರ ತೊಡಗಿಕೊಂಡಿದ್ದಾರೆ. ಅರ್ಥಾತ್ ರಾಘವೇಂದ್ರ ಸಂಗೀತಗಾರರೂ ಹೌದು. ಹ್ಯೂಸ್ಟನ್ ವಿಶ್ವ ಕನ್ನಡ ಸಮ್ಮೇಳನ- 2000 ಮತ್ತು ಡೆಟ್ರಾಯಿಟ್ ವಿಶ್ವ ಕನ್ನಡ ಸಮ್ಮೇಳನ- 2002ರಲ್ಲಿ ‘ಇಂಚರ’ದ ಕಾರ್ಯಕ್ರಮಗಳಲ್ಲಿ ರಾಘವೇಂದ್ರ ತೊಡಗಿಕೊಂಡಿದ್ದರು. ನೀವು ಈವರೆಗೆ ಓದಿದ್ದು ಎಂಜಿನಿಯರ್, ಸಂಸ್ಕೃತ ವಾಗ್ಮಿ ಹಾಗೂ ಸಂಗೀತಗಾರ ರಾಘವೇಂದ್ರರ ಬಗ್ಗೆ. ಈಗ ಅವರೊಳಗಿನ ಕವಿ ಮಾತಾಡಿದ್ದಾನೆ. ಈ ಕವಿಯ ಆಲಾಪನೆಯನ್ನೂ ಕೇಳಿ...
ಬೆನಕ ನಮನ*ರಾಘವೇಂದ್ರ ಹೆಬ್ಬಳಲು, ಸನಿವೇಲ್, ಕ್ಯಾಲಿಫೋರ್ನಿಯಾ
ನಮಿಸಿ
ಬೆನಕಗೆ
ನಮಿಸಿ
ಗಣಪಗೆ
ನಮಿಸಿ
ಹಿಮದೊರೆಕುವರಿಕುವರಗೆ
।
ನಮಿಸಿ
ತಡೆಗಳ
ಹೊಡೆವ
ಶಕ್ತಗೆ
ನಮಿಸಿ
ಪರಶಿವ
ಪ್ರಣವರೂಪಗೆ
।।1।।
ಸ್ವರ್ಣ
ಮಕುಟವ
ಧರಿಸಿ
ಮೆರೆವಗೆ
ಗೌರವರ್ಣದ
ಸುಗಜವದನಗೆ
।
ರತ್ನಮಣಿಮಯ
ಹಾರಕಂಠಗೆ
ನಮಿಸಿ
ಆತ್ಮಾರಾಮ
ಹೃದಯಗೆ
।।2।।
ವಿಶ್ವವನ್ನೇ
ಒಳಗೆ
ಸೇರಿಸಿ
ನಾಗಸೂತ್ರದಿ
ಉದರ
ಕಟ್ಟಿದ
।
ವಿಧಿಸುರಾಸುರವಿನುತಪಾದಗೆ
ನಮಿಸಿ
ಪಾಶಾಂಕುಶಧರನಿಗೆ
।।3।।
ಪ್ರೇಮದಿಂದಲಿ
ನತರ
ಪೊರೆವಗೆ
ನಿಮಿಸಿ
ಷಣ್ಮುಖಸೋದರನಿಗೆ
।
ಅದ್ವೆ
ೖತ
ಪ್ರಿಯ
ಪರಾತ್ಪರನಲಿ
ಭಕ್ತಿಯಿಂದಲಿ
ಶರಣುಹೊಕ್ಕುವ
।।
4।।