ವಸಂತ ಬಂದ, ಕೂವೂ , ಜಗ್ ಜಗ್, ಪುವ್ವೀ, ಟೂವಿಟ್ಟವೂ !
ವಸಂತನ
ಆಗಮನವೆಂದರೆ
ಪ್ರಕೃತಿಯ
ಹೊಸ
ಹುಟ್ಟು
.
ಹೊಸತು
ಜನುಮ
ಪಡೆದ
ಪ್ರಕೃತಿ
ಹಸುರುಟ್ಟು
ನಲಿಯುತ್ತಿದ್ದರೆ
ಗಿಡಗಂಟೆಗಳ
ಕೊರಳು
ಹಕ್ಕಿಗಳಿಗೆ
ಹಬ್ಬ
.
ಕೃಷಿಕನಿಗೂ
ವಸಂತದಲ್ಲಿ
ತುಸು
ಬಿಡುವು.
ಆ
ಕಾರಣದಿಂದಲೇ
ವಸಂತ
ಋತುವಿನಲ್ಲಿ
ಉತ್ಸವ-
ಜಾತ್ರೆಗಳು
ಸಾಲು
ಸಾಲು
.
ಮೊಗೆದಷ್ಟೂ
ಉಕ್ಕುವ
ಉತ್ಸಾಹದ
ಚಿಲುಮೆಯ
ಗರ್ಭದಲ್ಲಿ
ಅಡಗಿಸಿಕೊಂಡ
ವಸಂತ
ಕಾಲದಲ್ಲಿ
ಅರಸಿಕನೆದೆಯಲ್ಲೂ
ಸೌಂದರ್ಯೋಪಾಸನೆಯ
ಮೊಗ್ಗು.
ಈ
ನಮ್ಮ
ವಸಂತ
ಋತುಗಳ
ರಾಜ
!
ಕನ್ನಡ
ಕವಿಗಳ
ಕಣ್ಣಿಗಂತೂ
ವಸಂತ
ಚಿತ್ತಾಕರ್ಷಕ.
ಕನ್ನಡದ
ಕಣ್ವ
ಬೆಳ್ಳೂರು
ಮೈಲಾರಯ್ಯ
ಶ್ರೀಕಂಠಯ್ಯನವರ
ಕಣ್ಣಿಗೆ
ವಸಂತ
ದರ್ಶನದ
ಅಭಿವ್ಯಕ್ತಿಯೇ
ಕೆಳಗಿನ
‘ವಸಂತ’
ಜನಪ್ರಿಯ
ಕವಿತೆ.
ಅಂದಹಾಗೆ,
‘ಕವಿಗಳ
ದೃಷ್ಟಿಯಲ್ಲಿ
ವಸಂತ!’
ಎನ್ನುವ
ಎಸ್.ಕೆ.ಹರಿಹರೇಶ್ವರರ
ವಿದ್ವತ್ಪೂರ್ಣ
ಲೇಖನ
ಸದ್ಯದಲ್ಲೇ
ಪ್ರಕಟವಾಗಲಿದೆ,
ನಿರೀಕ್ಷಿಸಿ.
ಸದ್ಯಕ್ಕೆ
ಇದೋ
ಬಂದ
ವಸಂತ...!
ವಸಂತ
*ಬಿ.ಎಂ. ಶ್ರೀ
ವಸಂತ
ಬಂದ,
ಋತುಗಳ
ರಾಜ
ತಾ
ಬಂದ
ಚಿಗುರನು
ತಂದ,
ಹೆಣ್ಗಳ
ಕುಣಿಸುತ
ನಿಂದ,
ಚಳಿಯನು
ಕೊಂದ,
ಹಕ್ಕಿಗಳುಲಿಗಳೆ
ಚೆಂದ,
ಕೂವೂ
,
ಜಗ್
ಜಗ್,
ಪುವ್ವೀ,
ಟೂವಿಟ್ಟವೂ
!
ಕುರಿ
ನೆಗೆದಾಟ,
ಕುರುಬರ
ಕೊಳಲಿನೂದಾಟ,
ಇನಿಯರ
ಬೇಟ;
ಬನದಲಿ
ಬೆಳದಿಂಗಳೂಟ,
ಹೊಸ
ಹೊಸ
ನೋಟ,
ಹಕ್ಕಿಗೆ
ನಲಿವಿನ
ಪಾಟ,
ಕೂವೂ
,
ಜಗ್
ಜಗ್,
ಪುವ್ವೀ,
ಟೂವಿಟ್ಟವೂ
!
ಮಾವಿನ
ಸೊಂಪು,
ಮಲ್ಲಿಗೆ
ಬಯಲೆಲ್ಲ
ಕಂಪು
ಗಾಳಿಯ
ತಂಪು,
ಜನಗಳ
ಜಾತ್ರೆಯ
ಗುಂಪು,
ಕಿವಿಗಳಿಗಿಂಪು
ಹಕ್ಕಿಗಳುಲುಹಿನ
ಪೆಂಪು,
ಕೂವೂ
,
ಜಗ್
ಜಗ್,
ಪುವ್ವೀ,
ಟೂವಿಟ್ಟವೂ
!
ಬಂದ ವಸಂತ - ನಮ್ಮಾ ರಾಜ ವಸಂತ !