ಆರು ದಳದ ನಗೆಹೂವು : ಹಾಸ್ಯೋಲ್ಲಾಸವಾದ ‘ಚೈತ್ರೋಲ್ಲಾಸ’!
ಚೈತ್ರೋಲ್ಲಾಸ
!
ಚಿತ್ರಭಾನು
ಸ್ವಾಗತಕ್ಕೆ
ಉತ್ತರ
ಕ್ಯಾಲಿಫೋರ್ನಿಯಾ
ಕನ್ನಡ
ಕೂಟ
ಮೇ
4
ರ
ಸಂಜೆ
ಹಮ್ಮಿಕೊಂಡಿದ್ದ
ಕಾರ್ಯಕ್ರಮ
ವಿಶೇಷವೇ‘ಚೈತ್ರೋಲ್ಲಾಸ’.
500
ಕ್ಕೂ
ಹೆಚ್ಚು
ಕನ್ನಡಿಗರು
ಭಾಗವಹಿಸಿದ್ದ
ಈ
ಕಾರ್ಯಕ್ರಮದ
ಹೈಲೈಟ್
‘ಕವಯತ್ರಿಯರ
ಹಾಸ್ಯ
ಕವಿಗೋಷ್ಠಿ
’.
ಶ್ರೀಮತಿಯರಾದ
ನಾಗಲಕ್ಷ್ಮಿ
ಹರಿಹರೇಶ್ವರ,
ಮಂಗಳಾ
ಕುಮಾರ್,
ಜ್ಯೋತಿ
ಮಹಾದೇವ,
ಆಶಾ
ಬಾಲಕೃಷ್ಣ
ಭಟ್,
ಸಂಧ್ಯಾ
ರವೀಂದ್ರನಾಥ್
ಹಾಗೂ
ಅಲಮೇಲು
ಅಯ್ಯಂಗಾರ್
ಯುಗಾದಿ
ಸಂಜೆಗೆ
ಹಾಸ್ಯದ
ಘಮಲೇರಿಸಿದರು.
ಅಲಮೇಲು
ಅವರ
ಅಧ್ಯಕ್ಷತೆಯಲ್ಲಿ
ನಡೆದ
ಈ
ಗೋಷ್ಠಿಯನ್ನು
ನಾಗಲಕ್ಷ್ಮಿ
ಅವರು
ಕವಿತೆ
ಓದುವುದರೊಂದಿಗೆ
ಉದ್ಘಾಟಿಸಿದರು.
ಚೈತ್ರೋಲ್ಲಾಸ ಸಂಜೆಯ ಆರು ಹಾಸ್ಯ ಕವಿತೆಗಳನ್ನು ದಿನಕ್ಕೊಂದರಂತೆ ನಿಮ್ಮ ಓದಿಗೆ ನೀಡುತ್ತಿದ್ದೇವೆ. ಮೊದಲಿಗೆ ನಾಗಲಕ್ಷ್ಮಿ ಅವರ ‘ತಿರುಪತಿಯ ತಿಮ್ಮಪ್ಪ ಏಕೆ ನಕ್ಕ ?’ ನೀವೂ ನಕ್ಕುಬಿಡಿ!
ತಿರುಪತಿಯ ತಿಮ್ಮಪ್ಪ ಏಕೆ ನಕ್ಕ ?*ನಾಗಲಕ್ಷ್ಮಿ ಹರಿಹರೇಶ್ವರ, ಸ್ಟಾಕ್ಟನ್, ಕ್ಯಾಲಿಫೋರ್ನಿಯಾ
ನಮ್ಮ
ಅಯ್ಯಂಗಾರರ
ಮನೆಯಲ್ಲಿ
ಅವತ್ತು
ಗಡಿಬಿಡಿಯೋ,
ಗಡಿಬಿಡಿ!
ಹೊಸದಾಗಿ
ಹಾಕಿಸುತ್ತಿದ್ದಾರೆ,
ಹುಷಾರ್,
ಎಚ್ಚರಿಕೆ,
ಇನ್ಸ್ಟಾಲ್
ಮಾಡುತ್ತಿದ್ದಾರೆ-
ಸೆಕ್ಯುರಿಟಿ
ಅಲಾರಮ್!
ಕಳ್ಳ
ಕನ್ನ
ಹಾಕುವುದಿರಲಿ,
ಬೀಗ
ಮುರಿಯುವುದಿರಲಿ,
ಕಿಟಕಿ
ಗಾಜನು
ಒಡೆದು
ಒಳಗೆ
ನುಸುಳುವುದಿರಲಿ-
ರೀ,
ಬರೀ
ಮುಟ್ಟಿದರೆ
ಸಾಕು
ಸ್ವಲ್ಪ
ಹೀಗೆ-
ಹೊಡೆದುಕೊಂಡೀತು
‘ಲಬೋ
ಲಬೋ’
;
ಅಲ್ಲ
,
‘ಕುಯ್ಯೋ
ಮರ್ರೋ’,
‘ಬನ್ರೋ
ಬನ್ರೋ’
;
ಅಲ್ಲ
,
ಕಿಟಾರನೆ
ಕಿರಿಚಿಕೊಳ್ಳುವ
ಆ
ಕರ್ಕಶದ
ಕೂಗು
;
ಬೆಚ್ಚಿ
,
ಚುಚ್ಚಿ
,
ಚಚ್ಚಿ.
ಕೊಚ್ಚಿ
,
ಕಿವಿ
ಮುಚ್ಚಿಕೊಳ್ಳುವ
ಹಾಗೆ
ಮಾಡುವ
ತಾರಕ
ಸ್ಥಾಯಿಯ
ಸೈರನ್!
ಪರೀಕ್ಷಿಸಿದ್ದಾಯ್ತು
,
ಅದೇ,
ಟೆಸ್ಟು
ಮಾಡಿದ್ದೂ
ಆಯ್ತು
;
ಕೊಂಚವೂ
ರೆಸ್ಟಿಗೆ
ಟೈಮು
ವೇಸ್ಟುಉ
ಮಾಡದೆ,
ಏನು
ಬೆಸ್ಟ್ಉ,
ಆಹಾ
ಎಂಥ
ಲೇಟೆಸ್ಟ್ಉ?-
ಅಂತೆಲ್ಲ
ತುಂಬ
ಹೊಗಳಿ,
ಕೈಪಿಡಿ
ಪುಟ
ಪುಟ
ತಿರುವಿ,
ಅಲ್ಲಲ್ಲಿ
‘ಯಾರೋ
ಬರೆದ
ಅಧ್ವಾನದಿಂಗ್ಷೀಷು’-
ಅಂತ
ಸ್ವಲ್ಪ
ಬೈದಿದ್ದೂ
ಆಯ್ತು
!
ಈಗ
‘ಪಾಸ್
ವರ್ಡ್’
ಥರಾನೇ
ಯಾವುದಾದರೂ
ಸಂಖ್ಯೆ,
ಅದನ್ನ
ಇದರ
ಮೆದುಳಿಗೆ
ತುರುಕಿ,
ಅದ
ನೆನಪಿಟ್ಟುಕೊಳ್ಳಲು
ಅಲಾರಮ್ಗೆ
ಹೇಳಿ,
ರಾತ್ರೆ
ಮಲಗುವ
ಮುನ್ನ
ಆ
ಸಂಖ್ಯೆಯನ್ನೊಮ್ಮೆ
ಒತ್ತಬೇಕಂತೆ-
‘ಅ್ಯಕ್ಟಿವೇಟ್
ಮಾಡಬೇಕಂತೆ!’
‘ಸರಿ,
ಮೂರು
ಅಂಕೆಯ
ಒಂದು
ನಂಬರು
ತಾನೆ?
ಅದೇನು
ಮಹಾ!’-
ಎಂದಿರಾ,
ಸುಮ್ಮನಿರಿ!
ಆಗ
ಆದ
ಗಲಾಟೆ,
ಈಗ
ಹೇಳುವೆ
ಕೇಳಿ!
‘ಪಾಸ್
ವರ್ಡ್ನ
ನಂಬರ್
ಯಾವುದಾದರೊಂದು
ಹೇಳಿ’
-
ಎಂದು
ಕೇಳಿದಳು
ಮುದ್ದಣನ
ಮನದನ್ನೆ
.
‘ಜುಲೈ
ಇಪ್ಪತ್ತು’-
ಎಂದನಾ
ಗಂಡ
ಧಡಧಡನೆ,
ಒಡನೆ.
‘ಅದೇಕೆ
ಏಳೂ
ಇಪ್ಪತ್ತು
?’-
ಬಂತವಳ
ಪ್ರಶ್ನೆಯ
ಬಾಣ
;
‘ನಮ್ಮ
ಮದುವೆಯಾದದವತ್ತೆ
!’
-
ಉತ್ತರಿಸಿದಾ
ಜಾಣ.
‘ತಲೆ
ಕೆಟ್ಟು
ಹೋಗಿರಬೇಕು,
ನಿಮಗದೂ
ಸರಿ
ನೆನಪಿಲ್ಲ
!’
‘ಇರಲಿ
ಬಿಡು,
ನಿನ್ನ
ಹುಟ್ಟಿದ
ಹಬ್ಬ
ಮಾರ್ಚ್
ಹತ್ತು
?’
‘ನನ್ನ
ಹಣೇ
ಭಾರ!
ನಿಮಗದೂ
ಜ್ಞಾಪಕವಿಲ್ಲ
;
‘ಫೆಬ್ರವರಿ
ಮೂವತ್ತು’
ಅಂತ
ಪೆದ್ದು
ಪೆದ್ದಾಗಿಯೇ
ನೀವು
ಹೇಳಲಿಲ್ಲವಲ್ಲ
,
ಅದೆ
ನನ್ನ
ಪುಣ್ಯ!’
ಮುನಿಸಿಕೊಂಡಳು,
ಮಡದಿ.
‘ಮಗಳು
ಹುಟ್ಟಿದ
ದಿನಾಂಕ?
ಅದು
ಸುಲಭ,
ಅದು
ಸುಲಭ’
-
ಎಂದು
ತಲೆ
ಕೆರೆದರು;
‘ಅವತ್ತು
ಭಾರಿ
ಮಳೆ
ಬಂದಿತ್ತು
ಅಲ್ವೆ,
ಅಲ್ವೆ’
‘ಬಿಡಿ,
ಬಿಡಿ,
ಮಾತ
ಮರೆಸಲು
ಬೇಡಿ;
ನಿಮಗೆ
ಅದೂ
ಜ್ಞಾಪಕವಿಲ್ಲ
!
’
‘ಹೋಗಲಿ
ಬಿಡಿ,
ನಿಮಗೆ
ಸರಿಯಾಗಿ
ನೆನಪಲ್ಲಿರುವ,
ಏನೂ
ಯೋಚಿಸದೆ,
ಥಟ್ಟನೆ
ಹೊಳೆವ
ಒಂದು
ದಿನಾಂಕವ
ಹೇಳಿ;
ಅದೆ
ಸಾಕು,
ಅದೇ
ಸಾಕು’-
ಎನಲು
ಆ
ಮನೋರಮೆ,
‘ಕನ್ನಡ
ರಾಜ್ಯೋತ್ಸವದ
ದಿನಾಂಕ
‘ನವಂಬರ್
ಒಂದು’
ಆದರೆ
ಹೇಗೆ?’
-
ಎಂದನಾ
ಪತಿರಾಯ.
ತಿರುಪತಿಯ ತಿಮ್ಮಪ್ಪ ನಕ್ಕುಬಿಟ್ಟ !!!
ವಾರ್ತಾ
ಸಂಚಯ
ಮುಖಪುಟ
/
ಸಾಹಿತ್ಯ
ಸೊಗಡು