ತಮಿಳು ಭಾಷಿಗರ 'ಅಮ್ಮ' ಕು. ಜಯಲಲಿತಾ ವ್ಯಕ್ತಿಚಿತ್ರ
ಅಪ್ಪಟ ಕಲಾವಿದೆಯಾಗಿ, ಛಲಬಿಡದ ರಾಜಕಾರಣಿಯಾಗಿ, ಬಡವರ ಪಾಲಿನ ಪ್ರೀತಿಯ ಅಮ್ಮನಾಗಿ, ಅಭಿಮಾನಿಗಳ ನೆಚ್ಚಿನ ಪುರಚ್ಚಿ ತಲೈವಿಯಾಗಿ, ಜೀವನದಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡ ಜಯಲಲಿತಾ ಅವರ ವರ್ಣರಂಜಿತ ಜೀವನದ ಸಂಕ್ಷಿಪ್ತ ನೋಟ ಇಲ್ಲಿದೆ.
ಭಾರತದ ಪ್ರಭಾವಿ ಮಹಿಳೆ, ಎಐಎಡಿಎಂಕೆ ಪ್ರಶ್ನಾತೀತ ನಾಯಕಿ ಜಯರಾಮ್ ಜಯಲಲಿತಾ ಬದುಕಿನ ಕಥೆ ಮುಗಿದಿದೆ. ಸಿನಿಮಾದಷ್ಟೇ ರೋಚಕವಾದ ಜೀವನಗಾಥೆಯೊಂದರ ಕೊನೆ ರೀಲು ಆಸ್ಪತ್ರೆಯಲ್ಲೇ ಮುಗಿದಿದ್ದು, ಆಕೆ ಜೀವನದ ಕೊನೆ ಎಪ್ಪತ್ನಾಲ್ಕು ದಿನವನ್ನು ತಮಿಳುನಾಡಿನ ಜನರ್ಯಾರೂ ನೋಡದೆ ಮುಗಿದು ಹೋಗಿದೆ.
[ಗ್ಯಾಲರಿ: ಶೋಕಸಾಗರದಲ್ಲಿ 'ಅಮ್ಮ'ನ ಮಕ್ಕಳು]
ಛಲದೋಳ್ ಧುರ್ಯೋಧನ ಎಂಬಂತೆ ಛಲದಿಂದಲೇ ರಾಜಕೀಯಕ್ಕೆ ಬಂದು ಸಾಧಿಸಿ ತೋರಿಸಿದವರು ಜಯಲಲಿತಾ. ಹಲವಾರು ಹಗರಣಗಳಲ್ಲಿ ಭಾಗಿಯಾದರೂ 6 ಬಾರಿ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದು ವ್ಯಕ್ತಿತ್ವದ ಹಿಂದಿನ ಶಕ್ತಿಯನ್ನು, ಆಕೆಯಲ್ಲಿರುವ ಛಲವನ್ನು ತೋರಿಸುತ್ತದೆ.
ಅಯ್ಯಂಗಾರಿ ಕುಟುಂಬದಲ್ಲಿ ಹುಟ್ಟಿದ ಹೆಣ್ಣು ಮಗಳು ಕೋಮಲವಲ್ಲಿಯನ್ನು ಯಾರಾದರೂ ಟೀಕಿಸಿದರೆ, ಅವಮಾನಿಸಿದರೆ ಕಣ್ಣಿನಲ್ಲಿ ನೀರು ತುಂಬಿಕೊಂಡು ಮನೆಗೆ ಬರುತ್ತಿದ್ದಳು. ಆ ಹಂತದಿಂದ ತಮಿಳರ ಪಾಲಿನ ಪುರುಚ್ಚಿ ತಲೈವಿ ಆಗಲು ಜಯಲಲಿತಾ ಸವೆಸಿದ ಹಾದಿ ಹೂವಿನ ಹಾಸಿಗೆ ಆಗಿರಲಿಲ್ಲ. ನಿರಾಸೆ, ಹತಾಶೆ, ಹೋರಾಟ, ಸೇಡು ಪ್ರತಿ ಹೆಜ್ಜೆಗೂ ಗಾಜಿನ ಚೂರಿನಂತೆ ಆಕೆಯ ದಾರಿಯುದ್ದಕ್ಕೂ ಅಡ್ಡವಾದವು.
ತನ್ನ ಯಾವ ಸಿನಿಮಾದಲ್ಲೂ ತಾಯಿಯ ಪಾತ್ರ ನಿರ್ವಹಿಸದ ಜಯಲಲಿತಾ ತಮಿಳರ ಪಾಲಿಗೆ 'ಅಮ್ಮ'. ಆಕೆ ಮದುವೆಯಾಗದಿದ್ದರೂ ಕೋಟ್ಯಂತರ ಮಕ್ಕಳಿಗೆ ಅಮ್ಮನ ಅಂತಃಕರಣ ಹಂಚಿದ ಮಹಾತಾಯಿ. ಕನ್ನಡದಲ್ಲಿ ಶ್ರೀಶೈಲ ಮಹಿಮೆ, ಚಿನ್ನದ ಗೊಂಬೆ, ಬದುಕುವ ದಾರಿ, ಮಾವನ ಮಗಳು, ನನ್ನ ಕರ್ತವ್ಯ, ಮನೆ ಅಳಿಯ ಮುಂತಾದ ಚಿತ್ರಗಳಲ್ಲಿ ನಟಿಸಿದ್ದ ಜಯಲಲಿತಾ ಬದುಕು ಅನೇಕ ಏರು-ಇಳಿತಗಳನ್ನು ಕಂಡಿದೆ.
ಅಪ್ಪಟ ಕಲಾವಿದೆಯಾಗಿ, ಛಲಬಿಡದ ರಾಜಕಾರಣಿಯಾಗಿ, ಬಡವರ ಪಾಲಿನ ಪ್ರೀತಿಯ ಅಮ್ಮನಾಗಿ, ಅಭಿಮಾನಿಗಳ ನೆಚ್ಚಿನ ಪುರಚ್ಚಿ ತಲೈವಿಯಾಗಿ, ಜೀವನದಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡ ಜಯಲಲಿತಾ ಅವರ ವರ್ಣರಂಜಿತ ಜೀವನದ ಸಂಕ್ಷಿಪ್ತ ನೋಟ ಇಲ್ಲಿದೆ.
ಆಕೆಗೆ ಇಟ್ಟಿದ್ದು ಮೈಸೂರು ರಾಜ ಮನೆತನದ ಹೆಸರು
*
1948ರ
ಫೆಬ್ರವರಿ
24ರಂದು
ಮೇಲುಕೋಟೆಯ
ಜಯರಾಮ್,
ಸಂಧ್ಯಾ
ದಂಪತಿಗೆ
ಜನಿಸಿದ
ಜೆ.ಜಯಲಲಿತಾ
ಹುಟ್ಟು
ಹೆಸರು
ಕೋಮಲವಲ್ಲಿ.
ಹುಟ್ಟಿದ್ದು
ಮೈಸೂರಿನ
ಚೆಲುವಾಂಬ
ಆಸ್ಪತ್ರೆಯಲ್ಲಿ.
*
ಮೈಸೂರು
ಒಡೆಯರ್
ಬಳಿ
ಕೆಲಸ
ಮಾಡುತ್ತಿದ್ದರಿಂದ
ಅಜ್ಜ
(ತಂದೆಯ
ತಂದೆ)
ಅರಸರ
ಮೇಲಿನ
ಗೌರವಕ್ಕೆ
ಜಯಲಲಿತಾ
ಎಂದು
ಮರುನಾಮಕರಣ
ಮಾಡಿದರು.
*
ಜಯಾಗೆ
ಎರಡು
ವರ್ಷವಿದ್ದಾಗಲೇ
ಪಿತೃ
ವಿಯೋಗ.
*
ತವರು
ಮನೆಗೆ
ತೆರಳಿದ
ಸಂಧ್ಯಾ,
ಜತೆಗೆ
ಮಗಳು
ಜಯಾ
ಬೆಂಗಳೂರಿಗೆ.
*
ತಾತ-
ಅಜ್ಜಿ
ಕಣ್ಣಳತೆಯಲ್ಲಿ
ಜಯಾ
ಕಲಿತದ್ದು
ಬೆಂಗಳೂರಿನ
ಬಿಷಪ್
ಕಾಟನ್
ಗರ್ಲ್ಸ್
ಶಾಲೆಯಲ್ಲಿ.
ಜೊತೆಗೆ
ಸಂಗೀತ,
ಭರತನಾಟ್ಯ
ಅಭ್ಯಾಸ.
ಮೊದಲು ನಟಿಸಿದ್ದು ವಯಸ್ಕರ ಚಿತ್ರದಲ್ಲಿ
*
ಬಣ್ಣದ
ಬದುಕಿನ
ಆಕರ್ಷಣೆಗೆ
ಸಂಧ್ಯಾ
ಮದ್ರಾಸ್
ಪಯಣ.
*
1961ರಲ್ಲಿ
ಬಿಡುಗಡೆಯಾದ
ಎಪಿಸ್ಟಟ್
ಎಂಬ
ಇಂಗ್ಲಿಷ್
ಚಿತ್ರದಲ್ಲಿ
ಮೊದಲ
ಬಾರಿಗೆ
ನಟನೆ.
ಅದು
ವಯಸ್ಕರ
ಚಿತ್ರವಾದ್ದರಿಂದ
ಅದನ್ನು
ಜಯಲಲಿತಾ
ನೋಡಲು
ಕೂಡ
ಸಾಧ್ಯವಾಗಲಿಲ್ಲ
*
ಮೊದಲ
ಬಾರಿಗೆ
ನಾಯಕಿಯಾಗಿದ್ದು
15
ವರ್ಷದಲ್ಲಿ.
1964ರಲ್ಲಿ
ಬಿಡುಗಡೆಯಾದ
ಕನ್ನಡ
ಚಿತ್ರ
'ಚಿನ್ನದ
ಗೊಂಬೆ'ಯಲ್ಲಿ
ಅಭಿನಯ,
ಕಲ್ಯಾಣ್ಕುಮಾರ್
ನಾಯಕ.
*
ತಮಿಳು
ಚಿತ್ರರಂಗದಲ್ಲಿ
1964ರಿಂದ
ಅಭಿನಯ
ಪಯಣ
ಪ್ರಾರಂಭ
*
1964ರಿಂದ
1971ರ
ಅವಧಿಯಲ್ಲಿ
ಎಂಜಿಆರ್
ಜೊತೆ
ಇಪ್ಪತ್ತಕ್ಕೂ
ಹೆಚ್ಚು
ಚಿತ್ರದಲ್ಲಿ
ನಟನೆ
ಡಿಎಂಕೆ ಮೊದಲ ರಾಜಕೀಯ ಹೆಜ್ಜೆ
*
ದ್ರಾವಿಡ
ಮುನ್ನೇತ್ರ
ಕಳಗಂ
ಪಕ್ಷಕ್ಕೆ
ಸೇರ್ಪಡೆ
*
1972ರಲ್ಲಿ
ಕರುಣಾನಿಧಿ
ಜತೆ
ಭಿನ್ನಾಭಿಪ್ರಾಯ.
ಎಂಜಿಆರ್
ಅಣ್ಣಾ
ಡಿಎಂಕೆ
ಸ್ಥಾಪಿಸಿದಾಗ
ಜಯಾ
ಆ
ಪಕ್ಷಕ್ಕೆ
ಸೇರ್ಪಡೆ.
*
1977ರ
ಚುನಾವಣೆಯಲ್ಲಿ
ಜಯ
ಗಳಿಸಿ
ಮುಖ್ಯಮಂತ್ರಿಯಾದ
ಎಂಜಿಆರ್
1980ರಲ್ಲಿ
ಜಯಲಲಿತಾರನ್ನು
ಪಕ್ಷದ
ಪ್ರಚಾರ
ಕಾರ್ಯದರ್ಶಿಯಾಗಿ
ನೇಮಿಸಿದರು.
*
1984ರಲ್ಲಿ
ರಾಜ್ಯಸಭೆಗೆ
ಆಯ್ಕೆಯಾದ
ಜಯಾ,
ಸಂಸತ್ನಲ್ಲಿ
ಮಾಡಿದ
ನಿರರ್ಗಳ
ಭಾಷಣಕ್ಕೆ
ಅಂದಿನ
ಪ್ರಧಾನಿ
ಇಂದಿರಾ
ತಲೆದೂಗಿದ್ದರು.
*
1987ರ
ಡಿಸೆಂಬರ್
24ರ
ನಸುಕಿನಲ್ಲಿ
ಎಂಜಿಆರ್
ಕೊನೆಯುಸಿರೆಳೆದಿದ್ದರು.
ಯಾವಾಗಲೂ
ಜೊತೆಯಲ್ಲಿರುತ್ತಿದ್ದ
ಜಯಾ
ಅಂದು
ಎಂಜಿಆರ್
ಮುಖವನ್ನೂ
ಸಹ
ನೋಡಲಾಗಲಿಲ್ಲ.
ಎಂಜಿಆರ್ ಉತ್ತರಾಧಿಕಾರಿ ಯಾರು?
*
ಎಂಜಿಆರ್
ಉತ್ತರಾಧಿಕಾರಿಯೆಂದು
ಘೋಷಿಸಿಕೊಂಡ
ಜಾನಕಿ
ರಾಮಚಂದ್ರನ್
ಮುಖ್ಯಮಂತ್ರಿಯಾದರು.
ಆದರೆ
ಪಕ್ಷ
ಹೋಳಾಯಿತು.
*
ಹೋಳಾಗಿದ್ದ
ಪಕ್ಷ
1988ರಲ್ಲಿ
ಜಯಾ
ನೇತೃತ್ವದಲ್ಲಿ
ಮತ್ತೆ
ಸಂಘಟನೆಯಾಯಿತು.
*
ವಿಧಾನಸಭೆ
ವಿಸರ್ಜನೆ
ನಂತರದ
ಚುನಾವಣೆಯಲ್ಲಿ
ಡಿಎಂಕೆ
ಅಧಿಕಾರ
ಪಡೆಯಿತು.
*
ವಿರೋಧ
ಪಕ್ಷದ
ನಾಯಕಿಯಾದ
ಜಯಾ
ಸೀರೆಯನ್ನು
ಡಿಎಂಕೆ
ಶಾಸಕರು
ಸೆಳೆದ
ದುಶ್ಶಾಸನ
ಪ್ರಸಂಗ
ಜಯಾ
ಮೇಲಂಗಿಯನ್ನು
ಹಾಕಲು
ಕಾರಣವಾಯಿತು.
ಎಂಜಿಆರ್
ರಾಜ್ಯವನ್ನು
ತರುತ್ತೇನೆ
ಎಂದು
ಜಯಾ
ಪಣ
ತೊಟ್ಟರು.
ಸಿಎಂ ಆದ ಜಯಲಲಿತಾ
*
1991ರ
ಚುನಾವಣೆಯಲ್ಲಿ
ತಮಿಳು
ಮತದಾರರು
ಕೈಬಿಚ್ಚಿ
ಮತ
ನೀಡಿ
ಹಾರೈಸಿದರು.
ಜಯಾ
ಸಿಎಂ
ಆದರು.
*
1991-1996ರ
ಅವಧಿ
ತಮಿಳುನಾಡಿಗಿಂತ
ಜಯಾ
ರಾಜಕೀಯವಾಗಿ
ಹೆಚ್ಚು
ಬೆಳೆದ
ಕಾಲ,
ಜಯಾ
ಅಮ್ಮಾ
ಆಗಿ
ಮಾರ್ಪಟ್ಟಿದ್ದು
ಆ
ವೇಳೆಯಲ್ಲಿಯೇ.
*
ದತ್ತುಪುತ್ರನ
ಮದುವೆ
ಆಡಂಬರ
ಜಯಾ
ಕುಖ್ಯಾತಿಯನ್ನು
ಪರಿಚಯಿಸಿತು.
*
ಗೆಳತಿ
ಶಶಿಕಲಾ
ಖರೀದಿಸಿದ್ದ
ಆಭರಣ,
ಲೆಕ್ಕವಿಲ್ಲದಷ್ಟು
ಸೀರೆ,
ಚಪ್ಪಲಿ,
ಚಿರಾಸ್ತಿ,
ಚರಾಸ್ತಿ
ಭ್ರಷ್ಟಾಚಾರ
ಅವರ
ಮೈಗಂಟಿತು.
ಏರಿಳಿತದ ಸುದೀರ್ಘ ಸರಕಾರ
*
1998ರ
ಲೋಕಸಭಾ
ಚುನಾವಣೆಯಲ್ಲಿ
ಅತಿ
ಹೆಚ್ಚು
ಸ್ಥಾನ
ಗೆದ್ದ
ಜಯಾ,
ವಾಜಪೇಯಿ
ಸರ್ಕಾರಕ್ಕೆ
ನೀಡದ
ಬೆಂಬಲ
13
ತಿಂಗಳಲ್ಲಿ
ವಾಪಸ್
ಪಡೆದು
ಸರ್ಕಾರವನ್ನೇ
ಬೀಳಿಸಿದರು.
*
2001ರಲ್ಲಿ
ಮತ್ತೆ
ತಮಿಳುನಾಡಿನಲ್ಲಿ
ಅಮ್ಮಾ
ಅಧಿಕಾರ
ಹಿಡಿದರು.
2006ರವರೆಗೆ
ಸುದೀರ್ಘ
ಸರಕಾರ
ನಡೆಯಿತು.
*
2006ರ
ಚುನಾವಣೆಯಲ್ಲಿ
ಕರುಣಾನಿಧಿಗೆ
ಮೇಲುಗೈ.
ಅದೂ
ಟಿವಿ,
ಫ್ಯಾನ್,
ರೆಫ್ರಿಜರೇಟರ್
ಗಳ
ಉಚಿತ
ಕೊಡುಗೆ
ನೀಡಿ
ಪಡೆದ
ಮತ.
*
2011ರ
ಚುನಾವಣೆಯಲ್ಲಿ
ಅಮ್ಮಾಗೆ
ಗೆಲವು.
ಇಲ್ಲಿ
ಅಮ್ಮಾ
ಕ್ಯಾಂಟೀನಿನಿಂದ
ಹಿಡಿದು
ಉತ್ಪನ್ನಗಳು
ಜನರಿಗೆ
ಕಡಿಮೆ
ಬೆಲೆಯಲ್ಲಿ
ಸಿಗತೊಡಗಿದವು.
ಅಮ್ಮನ ಕೊನೆಯ ಹೆಜ್ಜೆಗಳು
*
2015ರಲ್ಲಿ
22
ದಿನಗಳ
ಕಾಲ
ಅಕ್ರಮ
ಆಸ್ತಿ
ಗಳಿಕೆ
ಪ್ರಕರಣದಲ್ಲಿ
ಬೆಂಗಳೂರಿನ
ಪರಪ್ಪನ
ಅಗ್ರಹಾರ
ಸೇರಬೇಕಾಯಿತು.
ಅಲ್ಲಿಯ
ವರೆಗೆ
ಸಹಚರ
ಪನ್ನೀರು
ಸೆಲ್ವಂ
ಅಧಿಕಾರದಲ್ಲಿದ್ದರು.
*
2016
ಸೆಪ್ಟೆಂಬರ್
22ರಂದು
ನಿರ್ಜಲೀಕರಣ
ಮತ್ತು
ಜ್ವರದ
ಕಾರಣಕ್ಕೆ
ಜಯಾ
ಆಸ್ಪತ್ರೆ
ಸೇರಿದರು.
*
2016
ಡಿಸೆಂಬರ್
5ರಂದು
ಅಮ್ಮ
ಕೊನೆಯುಸಿರೆಳೆದರು.