ಕುಕ್ಕೆಯಿಂದ ಹರಿದುಬಂದ ಪ್ರತಿಭೆ ಅಲಕಾ ಸುಬ್ರಮಣ್ಯ
ಚಲನಚಿತ್ರ ಸಂಗೀತವಿರಲಿ, ಹಿಂದೂಸ್ತಾನಿ ಗಾಯನವಿರಲಿ, ರಂಗಗೀತೆಯಿರಲಿ, ಹರಿದಾಸ ಸಾಹಿತ್ಯವಿರಲಿ, ಭಾವಗೀತೆಯಿರಲಿ, ನಶೆಯೇರಿಸುವ ಗಝಲುಗಳಿರಲಿ ಅಲಕಾ ಸುಬ್ರಮಣ್ಯ ಕಂಠದಿಂದ ಕೇಳಿಬರುತ್ತಿದ್ದರೆ ಸಾಕ್ಷಾತ್ ಸರಸ್ವತಿಯೇ ಈಕೆಯ ನಾಲಿಗೆಯಲ್ಲಿ ನಲಿದಾಡುತ್ತಿದ್ದಾಳೆ ಎಂಬಂತೆ ಭಾಸವಾಗುತ್ತದೆ. ಅಂತಹ ದೈತ್ಯ ಪ್ರತಿಭೆಯ ಅಲಕಾ 'ಭ್ರಮೆ'ಯ ಅಲಂಕಾರ, ಭ್ರಮೆಯ ಜೀವಾಳ.
ಭ್ರಮೆಯ ಉಳಿದವರೆಲ್ಲ ಬೆಂಗಳೂರಿನ ಗಾಳಿ ನೀರು ಕುಡಿದು ಸಂಗೀತದ ಆರಾಧನೆ ಮಾಡುತ್ತಿದ್ದರೆ, ಅಲಕಾ ಸುಬ್ರಮಣ್ಯ ಅವರು ಕುಕ್ಕೆ ಸುಬ್ರಮಣ್ಯದ ನಿರ್ಮಲ ಪರಿಸರದಲ್ಲಿ, ಪ್ರಕೃತಿಯ ಮಡಿಲಲ್ಲಿ ಸಂಗೀತದ ಸಾಧನೆಯಲ್ಲಿ ತೊಡಗಿದ್ದಾರೆ. ಸುಸಂಸ್ಕೃತ ಮನೆತನದ ಧಾರ್ಮಿಕ ವಾತಾವರಣದಲ್ಲಿ ಬೆಳೆದ ಅಲಕಾ ಅವರಿಗೆ ಬಾಲ್ಯದಿಂದಲೇ ಸಂಗೀತ ಒಲಿದುಬಂದಿದೆ.
ಶ್ರೀಮತಿ ಶಾರದಾ ಮೂರ್ತಿ ಅವರ ಬಳಿ ಸಂಗೀತ ಕಲಿಯಲು ಆರಂಭಿಸಿದ ಅಲಕಾ ಸುಬ್ರಮಣ್ಯ ಅವರು ಶ್ರೀಮತಿ ಪೂರ್ಣಿಮಾ ಮಾಡಪ್ಪಾಡಿ ಅವರ ಬಳಿ ಮುಂದುವರಿಸಿದರು. ತಮ್ಮ ಸಂಗೀತ ಸಾಧನೆಗೆ ನೀರು, ಗೊಬ್ಬರ ಎರೆಯುತ್ತಿರುವವರು ತಂದೆ ತಾಯಿಯಾದ ಗೋವಿಂದ್ ಕುಮಾರ್ ಮತ್ತು ಇಂದುಮತಿ ಅವರು ಎಂದು ವಿನಮ್ರವಾಗಿ ಹೇಳಲು ಅಲಕಾ ಮರೆಯುವುದಿಲ್ಲ.
ಕರ್ನಾಟಕ ಮತ್ತು ಹಿಂದೂಸ್ತಾನಿ ಪ್ರಕಾರಗಳಲ್ಲಿ ತರಬೇತಿ ಪಡೆದಿರುವ ಅಲಕಾ ಅವರು, ಹಲವಾರು ವೇದಿಕೆಗಳಲ್ಲಿ ತಮ್ಮ ಪ್ರತಿಭೆ ಮೆರೆದಿದ್ದಾರೆ. ಕನ್ನಡದಲ್ಲಿ ಮಾತ್ರವಲ್ಲ, ಮಲಯಾಳಂ, ತುಳು, ಹಿಂದಿ, ತಮಿಳು ಭಾಷೆಗಳಲ್ಲಿಯೂ ಅಷ್ಟೇ ಮಾಧುರ್ಯವಾಗಿ ಹಾಡುವ ಪರಿಣತಿಯನ್ನು ಅಲಕಾ ಬೆಳೆಸಿಕೊಂಡಿರುವುದು ಅವರ ಪ್ರತಿಭೆಗೆ ಸಾಕ್ಷಿ. ಆಕಾಶವಾಣಿಯಲ್ಲಿಯೂ ಕಲಾವಿದೆಯಾಗಿರುವ ಅಲಕಾ ಭರತನಾಟ್ಯದಲ್ಲಿಯೂ ವಿಧುಷಿಯಾಗಿದ್ದಾರೆ.
ಸಂಗೀತ ದಿಗ್ಗಜರಾದ ಪುತ್ತೂರು ನರಸಿಂಹ ನಾಯಕ್, ವಿಜಯ್ ಯೇಸುದಾಸ್, ಅನೂಪ್ ಶ್ರೀಧರ್, ರತ್ನಮಾಲಾ ಪ್ರಕಾಶ್, ಕಸ್ತೂರಿ ಶಂಕರ್ ಜೊತೆ ವೇದಿಕೆ ಹಂಚಿಕೊಂಡಿರುವ ಅಲಕಾ, ಕೊಲ್ಲೂರಿನ ಮೂಕಾಂಬಿಕಾ ದೇವಸ್ಥಾನ, ಬೆಂಗಳೂರಿನ ಮ್ಯೂಸಿಕಾನಾ ಸೂಪರ್ ಸ್ಟಾರ್, ಕೇರಳದ ಕಣ್ಣೂರು, ತ್ರಿಸ್ಸೂರು ಮತ್ತಿತರ ಪ್ರದೇಶಗಳಲ್ಲಿನ ಪ್ರಸಿದ್ಧ ದೇವಸ್ಥಾನಗಳಲ್ಲಿ ಸಂಗೀತದ ಮೋಡಿಯಲ್ಲಿ ಮುಳುಗಿಸಿದ್ದಾರೆ. [ಅಲಕಾ ಸುಬ್ರಮಣ್ಯ ಫೇಸ್ ಬುಕ್ ಪುಟ]
ಭ್ರಮೆ
ತಂಡಕ್ಕೆ
'ಸಿಂಪಲ್'
ನಾಯಕಿ
ಶ್ವೇತಾ
ಶ್ರೀವಾಸ್ತವ್
ಶುಭ
ಹಾರೈಕೆ