ಆಚಾರ್ಯ ವಿ.ಸೀ ಗೆ ನಮೋ ನಮ:
ವಿ.ಸೀ. ಅವರ ಆರು ಕವನಸಂಗ್ರಹಗಳು ಈ ರೀತಿಯಾಗಿವೆ: ದೀಪಗಳು, ಗೀತಗಳು, ನೆಳಲು-ಬೆಳಕು, ದ್ರಾಕ್ಷಿ-ದಾಳಿಂಬೆ, ಹೆಜ್ಜೆ ಪಾಡು, ಅರಲು-ಬರಲು. (ಅರಲು-ಬರಲು ಕೃತಿಗೆ 1973 ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಲಭಿಸಿದೆ.)
ಲಲಿತ ಪ್ರಬಂಧಗಳ ಸಂಕಲನಗಳು: ಬೆಳದಿಂಗಳು, ಸೀಕರಣೆ
ನಾಟಕಗಳು: ಆಗ್ರಹ, ಸೊಹ್ರಾಬ್ ರುಸ್ತುಮ್, ಶ್ರೀಶೈಲ ಶಿಖರ ( ಈ ನಾಟಕವು ' ಪಾಪ ಪುಣ್ಯ" ಹೆಸರಿನ ಚಲನಚಿತ್ರವಾಗಿದೆ.)
ಸೃಜನಾತ್ಮಕ ರಚನೆಗಳು: ಮಹನೀಯರು, ಕಾಲೇಜು ದಿನಗಳು, ಅಶ್ವತ್ಥಾಮನ್, ಕವಿ ಕಾವ್ಯ ದೃಷ್ಟಿ, ಹಣಪ್ರಪಂಚ, ಸಾಹಿತ್ಯ ಮತ್ತು ಮೌಲ್ಯ, ಸಾಹಿತ್ಯಾವಲೋಕನ, ಕಲಾನುಭವ (ಇದು ವಿ.ಸೀ.ಯವರ ಕೆಲವು ಉಪನ್ಯಾಸಗಳ ಸಂಗ್ರಹ).
ಅನುವಾದಿತ ಕೃತಿಗಳು: ಪಿಗ್ಮ್ಯಾಲಿಯನ್, ಮೇಜರ ಬಾರ್ಬರ, ಬಂಗಾಳಿ ಸಾಹಿತ್ಯ ಚರಿತ್ರೆ.
ಸಂಪಾದಿತ ಕೃತಿಗಳು: ಕವಿರಾಜಮಾರ್ಗ, ವಡ್ಡಾರಾಧನೆ, ವ್ಯಾಕರಣಗಳು, ಯಕ್ಷಗಾನ, ಜನಪದ ಸಾಹಿತ್ಯ.
*1954 ರಲ್ಲಿ ಕುಮಟೆಯಲ್ಲಿ ಜರುಗಿದ 36 ನೆಯ ಸಾಹಿತ್ಯಸಮ್ಮೇಳನಕ್ಕೆ ವಿ.ಸೀ.ಯವರು ಅಧ್ಯಕ್ಷರಾಗಿದ್ದರು.
*1983ರಂದು ಕನ್ನಡ ಸಾಹಿತ್ಯ ಲೋಕ ಪರಿಚಾರಕ ಇಹಲೋಕದ ವ್ಯಾಪಾರ ಮುಗಿಸಿದರು.
ಮಾಹಿತಿ ಕೃಪೆ : ಸುಜನ್ ಕುಮಾರ್ ಶೆಟ್ಟಿ