ಮತ್ತೆ ಹುಟ್ಟಿ-ದ ಪಟೇ-ಲ್‌

  • ಎಸ್‌. ಎಂ. ಕೃಷ್ಣ ಅವರು ಸುಸಂಸ್ಕೃತರು. ಆದರೆ ವೀರಪ್ಪನ್‌ಗೆ ಪಾಠ ಕಲಿಸಿ ರಾಜ್‌ಕುಮಾರ್‌ ಬಿಡುಗಡೆ ಮಾಡುವಲ್ಲಿ ಸೋತವರು.
  • ರಾಜ್ಯದಲ್ಲಿ ಹಲವು ಹತ್ತು ಗಂಭೀರ ಸಮಸ್ಯೆಗಳಿರುವಾಗ ಬಿಲ್‌ಗೇಟ್ಸ್‌ ಅಂತೆ ಅವನಂತೆ ಇವನಂತೆ ಅಂತ ಬೆಂಗಳೂರನ್ನು ಐಟಿ, ಸಾಫ್ಟ್‌ವೇರ್‌ ಸಿಟಿ ಮಾಡಲು ಹೊರಟಿದ್ದಾರೆ ಕೃಷ್ಣ. ನಮ್ಮ ದೇಶದಲ್ಲಿ ಶೇ. 46 ಮಂದಿ ಹೆಬ್ಬೆಟ್ಟಿನ ಪ್ರಜೆಗಳಿದ್ದಾರೆ.
  • ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮುನ್ನವೇ ಜನತಾದಳದ ಉಭಯ ಬಣಗಳ ವಿಲೀನವಾಗುತ್ತದೆ.
  • ಮೊದಲು ಭಿನ್ನಾಭಿಪ್ರಾಯ ಬಗೆಹರಿಸಿ, ಭದ್ರವಾದ ಮನೆ ಕಟ್ಟಿಕೊಳ್ಳೋಣ. ಆನಂತರ ಕುರ್ಚಿಯ ಮೇಲೆ ಯಾರು ಕುಳಿತುಕೊಳ್ಳಬೇಕು ಎಂದು ತಲೆ ಕೆಡಿಸಿಕೊಳ್ಳೋಣ.
  • ಆಗಿನ ಕಾಲದಲ್ಲಿ ( ಗೋಪಾಲಗೌಡರು ಇದ್ದಾಗ ?) ಚಳವಳಿ, ಪ್ರತಿಭಟನೆಗಳಿಗೆ ಒಂದು ಪರ್‌ಪಸ್‌ ಇರುತ್ತಿತ್ತು. ಈಗ ಸುಮ್ಮನೆ ಮಾಡ್ತಾರೆ.
  • ನಾನು ಹಿರಿಯನೂ ಅಲ್ಲ, ಕಿರಿಯನೂ ಅಲ್ಲ . ರಾಜ್ಯದ ಹಿತದೃಷ್ಟಿಯಿಂದ ಆಲೋಚಿಸುವಷ್ಟು ಸಮರ್ಥ.
70ನೆ ವರ್ಷದ ಹುಟ್ಟುಹಬ್ಬದ ಸಂದರ್ಭದಲ್ಲಿ ಪಟೇಲರು ಆಡಿದ ಮಾತುಗಳನ್ನು ಆಲಿಸಿದ ಮೇಲೆ ಇವತ್ತು ಕರ್ನಾಟಕದ ಜನ ಏನು ಮಾತಾಡಿಕೊಳ್ಳುತ್ತಿದ್ದಾರೆ ? ಕೇಳುವಂಥವರಾಗಿ....

  • ರಾಜ್‌ ಅಪಹರಣವಾಗಿ 60 ದಿನ ಸುಮ್ಮನಿದ್ದ ಪಟೇಲರು ಅನಿಸಿಕೆಗಳನ್ನು ಹಂಚಿಕೊಳ್ಳಲು ತಮ್ಮ ಹುಟ್ಟುಹಬ್ಬದ ದಿನದವರೆವಿಗೂ ಕಾದರು.
  • ಮತ್ತೆ ಜನತಾದಳದ ಭಿನ್ನಮತ ರಾಜಕಾರಣ ಉಣ್ಣಲು ರಾಜ್‌ ಅಪಹರಣ ವಿಷಯವನ್ನು ಸೂಪ್‌ ಥರ ಬಳಸಿಕೊಂಡರು.
  • ಕಾವೇರಿ ಜಲ ವಿವಾದ ಮುಂತಾದ ಗಂಭೀರ ಸವಾಲುಗಳು ಎದುರಾದಾಗ ನಡೆಯುತ್ತಿದ್ದ ಮಾಜಿ ಮುಖ್ಯಮಂತ್ರಿಗಳ ಚಿಂತನಗೋಷ್ಠಿ ನಡೆಸುವುದಕ್ಕೆ ಒತ್ತಾಯಿಸುವುದನ್ನು ಮರೆತುಬಿಟ್ಟರು.
ಇದು ಪಟೇಲರನ್ನು ಕುರಿತ ಸಂಗತಿ ಮಾತ್ರ ಎಂದು ನೀವು ಭಾವಿಸಿದರೆ ಖಂಡಿತ ಕೆಟ್ಟಿರಿ. ಮುಂದೊಂದು ದಿನ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಆಗಲು ಸಾಲುಗಟ್ಟಿ ನಿಂತವರ ದೊಡ್ಡ ದಂಡೇ ಇದೆ. ನಾಳೆ ಬೆಂಗಳೂರಿನಲ್ಲಿ ಸಭೆ ಸೇರಲಿರುವ ಕರ್ನಾಟಕದ ಎಲ್ಲ ಸಂಸದರ ಮುಖಗಳು ಆ ಸಾಲಿನಲ್ಲಿ ಎದ್ದು ಕಾಣಿಸುತ್ತಿದೆ.

backಮುಖಪುಟ / ಸಾಹಿತ್ಯ ಸೊಗಡು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+