ಸತ್ತು ಬದುಕಿದ ನನ್ನ ಮೂರು ವರ್ಷದ ಮಗ
ಮದುವೆ ಆಗಿದೆ. ಹೆಂಡತಿ ವಿದ್ಯಾವಂತೆ. ನೌಕರಿಗೆ ಸೇರಿಕೊ ಎಂದು ನಾನು ಅವಳಿಗೆ ಹೇಳುವುದಿಲ್ಲ. ಅವಳಿಗೂ ಕೆಲಸಕ್ಕೆ ಹೋಗುವುದು ಇಷ್ಟವಿಲ್ಲ. ಮನೆ, ಮಗು, ಹೋಗುವವರು ಬರುವವರು, ಸಂಸಾರ, ಸಂಬಂಧಿಕರನ್ನು ನಿಭಾಯಿಸುವುದೇ ಅವಳು ಸಂತೋಷದಿಂದ ಮಾಡುವ ದೊಡ್ಡ ಕೆಲಸ. ಅವಳು ನನ್ನ ಮನೆಯ COO.
ನಮಗೊಬ್ಬ ಮಗ. ಎರಡೂವರೆ ವರ್ಷ. ಈಗ ಶಿಶುವಿಹಾರಕ್ಕೆ ಹೋಗುತ್ತಿದ್ದಾನೆ. ಹೈಪರ್ ಆಕ್ಟಿವ್. ಈ ವಯಸ್ಸಿಗೇ ಕ್ಲಾಸಿನಲ್ಲಿ ಇಬ್ಬರು ಗರ್ಲ್ ಫ್ರೆಂಡ್ಸ್ ಗಳನ್ನು ಗಳಿಸಿರುವ ಭೂಪ. ಅವನು ನಾನು ಮತ್ತು ನನ್ನ ಹೆಂಡತಿ ಇತ್ತೀಚೆಗೆ ಶಿವಮೊಗ್ಗಕ್ಕೆ ಹೋಗಬೇಕಾಗಿ ಬಂತು. ಅಲ್ಲೊಂದು ಮದುವೆ ಕಾರ್ಯಕ್ರಮವಿತ್ತು.
ಮದುವೆ ಕಾರ್ಯಕ್ರಮ ಮುಗಿದ ಕೂಡಲೇ ಮಗ ಹುಷಾರು ತಪ್ಪಿದ. ವಾಂತಿ, ಬೇಧಿ, ವಿಪರೀತ ಜ್ವರ. ಎಲ್ಲಾ ಕೆಲಸ ಬಿಟ್ಟು ದಡಬಡ ಓಡಿ ಶಿವಮೊಗ್ಗದ ವಾತ್ಸಲ್ಯ ನರ್ಸಿಂಗ್ ಹೋಂಗೆ ಸೇರಿಸಿದೆವು. ಮೂರು ದಿನ ಐಸಿಯುನಲ್ಲಿ ಚಿಕಿತ್ಸೆ ಪಡೆದು ನಾಲಕ್ಕನೇ ದಿನ ಜನರಲ್ ವಾರ್ಡ್ ಗೆ ಬಂದ. ಅಲ್ಲಿನ ವೈದ್ಯರ ಸಹಕಾರ ಮತ್ತು ಚಿಕಿತ್ಸೆಗಳಿಗೆ ನಾವು ಚಿರಋಣಿ.
ಮಗ ಹುಷಾರಾದ. ನನಗೆ, ಅವಳಿಗೆ ಮತ್ತು ನಮ್ಮ ಪರಿವಾರಕ್ಕೆ ಹೋದ ಜೀವ ಬಂದಂತಾಯಿತು. ದೇವರು ದೊಡ್ಡವನು ಎಂದು ಕೃತಾರ್ಥಭಾವ ಹೊತ್ತುಕೊಂಡು ಬೆಂಗಳೂರಿಗೆ ವಾಪಸ್ಸು ಬಂದೆವು. ಇದು ಇಷ್ಟೇ ಆಗಿದ್ದಿದ್ದರೆ ನನ್ನ ಕತೆಗಳನ್ನು ನಿಮಗೆ ಹೇಳುವ ಅಗತ್ಯವಿರಲಿಲ್ಲ. [ಮುಂದೆ : ಮಗನ ಜಾತಕದಲ್ಲಿ ನಾಗದೋಷ]