ಉತ್ತರ ಕನ್ನಡದ ಜೇನುಗಳ ಜಾತ್ರೆಗೆ ಹೋಗಿದ್ರಾ?
ನೀವು
ಎಣಿಸುತ್ತಿರುವಂತೆಯೇ
ಕನಿಷ್ಠವೆಂದರೂ
ಎರಡು
ಹೊಸ
ಜೇನು
ಸಂಸಾರಗಳು
ಅದೇ
ಮರದ
ಯಾವುದೋ
ಟೊಂಗೆಯಲ್ಲಿ
ಗೂಡು
ಹೆಣೆಯಲು
ಜಾಗವರಸುತ್ತಿರುತ್ತವೆ.
ನಂಬಿ,
ಉತ್ತರ
ಕನ್ನಡ
ಜಿಲ್ಲೆಯ
ಯಲ್ಲಾಪುರ
ತಾಲೂಕಿನಲ್ಲಿ
ಶತಶತಮಾನಗಳಿಂದ
ಬೇಡ್ತಿ
ಸೇತುವೆಯ
ಸಮೀಪದ
ಈ
ಮರಕ್ಕೆ
ಅಸಂಖ್ಯಾತ
ಜೇನು
ಗೂಡುಗಳು
ಕಟ್ಟುತ್ತವೆ.
ಸೋಜಿಗವೆಂದರೆ,
ಬಿಡುವೇ
ಇಲ್ಲದಂತೆ
ವರ್ಷಪೂರ್ತಿ
ಗೂಡು
ಹೆಣೆಯುತ್ತಲೇ
ಇರುತ್ತವೆ!
ಪ್ರಕೃತಿ
ವೈಚಿತ್ರ್ಯ
:
ಬೇಡ್ತಿ
ಸೇತುವೆಯನ್ನು
ದಾಟಿ
ಶಿರಸಿಯೆಡೆಗೆ
ಸಾಗುವಲ್ಲಿ
ಸೇತುವೆಯಿಂದ
ಸ್ವಲ್ಪೇ
ದೂರದಲ್ಲಿ
ರಸ್ತೆಯ
ಎಡ
ಭಾಗದಲ್ಲಿಯೇ
ಗೋಚರಿಸುತ್ತದೆ
ಈ
"ಜೇನ್ಮರ"ದ
ಸೋಜಿಗ.
ಅಲ್ಲಿ
ಸಂಸಾರ
ಹೂಡಿರುವ
ನೂರಕ್ಕೂ
ಅಧಿಕ
ಜೇನುಗೂಡುಗಳನ್ನು
ನೋಡಿ
ಕಣ್ತುಂಬಿಕೊಳ್ಳುವುದೇ
ಮುದ.
ಸುತ್ತಲಿನ
2-3
ಕಿ.ಮೀ
ವ್ಯಾಪ್ತಿಯಲ್ಲಿಯೂ
ಜೇನಿನ
ಮಧುರ
ಘಮಘಮ.
ಇದರೊಟ್ಟಿಗೆ
ಪಕ್ಕದಲ್ಲಿಯೇ
ಇರುವ
ಇನ್ನೊಂದು
ಮರವನ್ನು
ಕೂಡ
ಜೇನುಗಳು
ಆಶ್ರಯಿಸಿ
ಗೂಡು
ಕಟ್ಟುತ್ತವೆ.
ಅಂತೆಯೇ
ತಾಲೂಕಿನ
ಸವಣಗೇರಿ,
ಕಮ್ಮಾಣಿ,
ಲಾಲಗುಳಿಯ
ಕಗ್ಗಾಡುಗಳಲ್ಲಿಯೂ
ಇಂಥಹುದೇ
ಜೇನ್ಮರಗಳು
ಕಂಡುಬರುತ್ತವೆಯಾದರೂ
ಜೇನುಗಳ
ಸಂಖ್ಯೆ
ಕಡಿಮೆ.
ಈ
ಜೇನುಗಳು
ಸೇಫ್!
:
ಕಳೆದೊಂದು
ದಶಕದೀಚೆಗೆ
ಜೇನುಕಂದುಗಳಿಗೆ
ಕಳ್ಳರ
ಕಾಟ
ಹೆಚ್ಚೆಂದೇ
ಹೇಳಬೇಕು.
ಚಿಕ್ಕಪುಟ್ಟ
ಜೇನುಗಳನ್ನೂ
ಅವೈಜ್ಞಾನಿಕವಾಗಿ
ಕೊಯ್ದು
ಸಂಗ್ರಹಿಸುತ್ತಾರೆ.
ಆದರೆ
ಈ
ಮರವನ್ನಾಶ್ರಯಿಸಿದ
ಜೇನುಗಳಿಗೆ
ಜೀವಭಯವಿಲ್ಲ.
ಕಾರಣ,
ಮರದ
ಏರಲಾಗದ
ಎತ್ತರ
ಹಾಗೂ
ಮರದ
ಆಕಾರ.
ಉಪಾಯದಿಂದ
ಅಕ್ಕ-ಪಕ್ಕದ
ಮರವನ್ನೇರಿ
ಮುಖ್ಯ
ಜೇನು
ಮರಕ್ಕೆ
ಹಗ್ಗ
ಎಸೆದು
ಸರ್ಕಸ್
ಮಾಡುವವರೂ
ಇಲ್ಲ.
ಸುತ್ತಲಿನ ಪ್ರದೇಶಗಳಲ್ಲಿ ಈ ಮರವನ್ನು ದೇವರ ಮರವೆಂದೇ ಕರೆಯಲಾಗುತ್ತದೆ. ಹಾಗಾಗಿ ಎಂಥಹ ಅನುಭವೀ ಜೇನು ಕೊಯ್ಲುಗಾರನೂ ಈ ಮರವನ್ನು ಕತ್ತೆತ್ತಿ ನೋಡಿಯಾನೇ ಹೊರತು ಗೂಡಿಗೆ ಕೈಹಾಕುವ ಸಾಹಸ ಮಾಡಲಾರ. ಹಿರಿಯರು ನೆನಪಿಸಿಕೊಳ್ಳುವಂತೆ ಹಿಂದೊಮ್ಮೆ ವ್ಯಕ್ತಿಯೊಬ್ಬ ಈ ಮರವನ್ನೇರಿ ಜೇನು ಕೊಯ್ಯಲು ಪ್ರಯತ್ನಿಸಿದ್ದ. ಇದಕ್ಕಾಗಿ ಆತ ತೆತ್ತ ಬೆಲೆ ಆತನದೇ ಪ್ರಾಣ! ಈ ಎಲ್ಲಾ ಕಾರಣಗಳಿಂದ ಈ ಜೇನುಗಳು ಸೇಫ್! ಇತ್ತೀಚಿನ ದಿನಗಳಲ್ಲಿ ಅರಣ್ಯ ಲಾಖೆ ಗುತ್ತಿಗೆ ಆಧಾರದಲ್ಲಿ ಈ ಜೇನುಗಳ ಕೊಯ್ಲಿಗೆ ಅನುಮತಿ ನೀಡಿದೆ.
ಹಾಗೆಯೇ ಈ ಮರಕ್ಕೆ ವರ್ಷದ ಎಲ್ಲ ಕಾಲದಲ್ಲಿಯೂ ಜೇನುಗಳ ಆಗಮನವಾಗುವದೂ ಮತ್ತೊಂದು ವಿಶೇಷ. ಹತ್ತಿರವೇ ನೀರಿನ ಲಭ್ಯತೆ, ಅನುಕೂಲಕರವಾದ ವಾತಾವರಣ, ದಟ್ಟ ಕಾಡು ಇವೆಲ್ಲವೂ ಈ ಮರಕ್ಕೆ ಇಷ್ಟೊಂದು ಜೇನುಗಳು ಗೂಡು ಕಟ್ಟಲು ಕಾರಣವೆಂದು ಹೇಳಬಹುದು. ಹಾಗಾಗಿಯೇ ಇಲ್ಲಿ ಪ್ರತೀ ವರ್ಷವೂ ಜೇನುಗಳ ಹಬ್ಬ. ಜೊತೆಗೆ ನೋಡಿ ಆಸ್ವಾದಿಸಿ ಕಣ್ತುಂಬಿಕೊಳ್ಳುವ ಕಂಗಳಿಗೂ!