ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುರುವಾರ ಬೆಂಗಳೂರಲ್ಲಿ ಜಾಕಿರ್‌ ಹುಸೇನ್‌ ಸಂಗೀತ

By Staff
|
Google Oneindia Kannada News

ಬೆಂಗಳೂರು : ತಬಲಾ ಮಾಂತ್ರಿಕ ಉಸ್ತಾದ್‌ ಜಾಕಿರ್‌ ಹುಸೇನ್‌ ಸೇರಿದಂತೆ ನಾಲ್ವರು ಸಂಗೀತಗಾರರು ಬೆಂಗಳೂರಿನ ಅರಮನೆ ಮೈದಾನದಲ್ಲಿ ಜನವರಿ 30, ಗುರುವಾರ ಸಂಗೀತ ಕಛೇರಿ ನಡೆಸಿಕೊಡಲಿದ್ದಾರೆ.

‘ರಿಮೆಂಬರ್‌ ಶಕ್ತಿ’ ಎಂಬ ಈ ಕಾರ್ಯಕ್ರಮದಲ್ಲಿ ಜಾಕಿರ್‌ ಹುಸೇನ್‌ ಜೊತೆಗೆ ಜಾನ್‌ ಮ್ಯಾಕಗ್ಲಿನ್‌, ವಿ. ಸೆಲ್ವ ಗಣೇಶ್‌, ಯು.ಶ್ರೀನಿವಾಸ್‌ ಭಾಗವಹಿಸಲಿದ್ದಾರೆ. ಚೆನ್ನೈ, ಪುಣೆ ಹಾಗೂ ಮುಂಬಯಿ ಸಹೃದಯರ ಮುಂದೆ ಈಗಾಗಲೇ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟು, ಈ ತಂಡ ಶಹಭಾಸ್‌ಗಿರಿ ಪಡೆದಿದೆ.

ಜಾಕಿರ್‌ ಹುಸೇನ್‌ ಪ್ರಮೋಷನ್ಸ್‌ ಪ್ರೆೃವೇಟ್‌ ಲಿಮಿಡೆಟ್‌ ಆಯೋಜಿಸಿರುವ ಈ ಸಂಗೀತ ಕಾರ್ಯಕ್ರಮವನ್ನು ಪಂಚಮ್‌ ನಿಶಾದ್‌ ಕ್ರಿಯೇಟಿವ್ಸ್‌ ಹಾಗೂ ವಿಂಡ್ಸರ್‌ ಮತ್ತು ಶೆರಟಾನ್‌ ಹೊಟೇಲ್‌ಗಳು ಪ್ರಾಯೋಜಿಸಿವೆ.

(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X