ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಗಮ ಸಂಗೀತ ಪರಿಷತ್ತಿಗೆ ಮುದ್ದುಕೃಷ್ಣ ಸಾರಥ್ಯ

By Staff
|
Google Oneindia Kannada News

Y. K. Muddu Krishnaಬೆಂಗಳೂರು: ಕನ್ನಡ ಸುಗಮ ಸಂಗೀತ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲಾಗಿ ಕರ್ನಾಟಕ ಸುಗಮ ಸಂಗೀತ ಪರಿಷತ್ತು ಅಸ್ತಿತ್ವಕ್ಕೆ ಬಂದಿದೆ.

ಜನಪ್ರಿಯ ಸುಗಮ ಸಂಗೀತ ಕಲಾವಿದ ವೈ. ಕೆ. ಮುದ್ದುಕೃಷ್ಣ ಸುಗಮ ಸಂಗೀತ ಪರಿಷತ್ತಿನ ಪ್ರಥಮ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಏಪ್ರಿಲ್‌ 20ರಂದು ಹಿರಿಯ ಕವಿ ಡಾ.ಜಿ. ಎಸ್‌. ಶಿವರುದ್ರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಾಂದರಲ್ಲಿ ಕರ್ನಾಟಕ ಸುಗಮ ಸಂಗೀತ ಪರಿಷತ್ತು ಸ್ಥಾಪನೆಯ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.

ಸುಗಮ ಸಂಗೀತದ ಏಳ್ಗೆಗಾಗಿ ರೂಪುಗೊಂಡಿರುವ ಈ ಪರಿಷತ್ತು , ಸುಗಮ ಸಂಗೀತ ಕ್ಷೇತ್ರಕ್ಕೆ ಸಂಬಂಧಿಸಿದ ಎಲ್ಲ ಸಂಘ ಸಂಸ್ಥೆಗಳನ್ನು ಒಳಗೊಳ್ಳಲಿರುವುದಾಗಿ ಮುದ್ದುಕೃಷ್ಣ ಹೇಳಿದ್ದಾರೆ.

ಪರಿಷತ್ತಿನ ಪದಾಧಿಕಾರಿಗಳ ಪಟ್ಟಿಯಲ್ಲಿ ಎಸ್‌. ಬಾಲಿ ಹಾಗೂ ಎಚ್‌. ಫಲ್ಗುಣ ಅವರುಗಳಿದ್ದು - ಡಾ. ಜಿ.ಎಸ್‌.ಶಿವರುದ್ರಪ್ಪ , ಡಾ. ಎಚ್‌.ಎಸ್‌. ವೆಂಕಟೇಶ ಮೂರ್ತಿ, ಸಿ. ಅಶ್ವತ್ಥ್‌, ಶ್ರೀನಿವಾಸ್‌ ಜಿ. ಕಪ್ಪಣ್ಣ ಹಾಗೂ ಶಿವಮೊಗ್ಗ ಸುಬ್ಬಣ್ಣ ಅವರನ್ನೊಳಗೊಂಡ ಸಲಹಾ ಸಮಿತಿ ಸುಗಮ ಸಂಗೀತ ಪರಿಷತ್ತಿಗೆ ನೆರವು ನೀಡಲಿದೆ.

ಪರಿಷತ್ತಿನ ಸಂಘಟನಾ ಕಾರ್ಯದರ್ಶಿಗಳಾಗಿ ಕಿಕ್ಕೇರಿ ಕೃಷ್ಣ ಮೂರ್ತಿ ಹಾಗೂ ಸದಸ್ಯರಾಗಿ ರಾಜು ಅನಂತಸ್ವಾಮಿ ಮತ್ತು ಡಾ. ರೋಹಿಣಿ ಮೋಹನ್‌ ಆಯ್ಕೆಯಾಗಿದ್ದಾರೆ.

(ಇನ್ಫೋ ವಾರ್ತೆ)


ಸ ರಿ ಗ ಮ ...
ಮುದ್ದುಕೃಷ್ಣ, ನಂ. 10, 8 ನೇ ಬಡಾವಣೆ, ಜಯನಗರ,ಬೆಂ-82
ಕವಿತೆಗಳೆಲ್ಲಕ್ಕೂ ರಾಗ, ಎಲ್ಲವೂ ಭಾವಗೀತೆಗಳಲ್ಲ- ಜಿಎಸ್‌ಎಸ್‌

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X