ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಲ್ಲಿ ಹೊಸ ವರ್ಷ ಸ್ವಾಗತಕ್ಕೆ ಉಷಾ ಸಂಗೀತ

By Staff
|
Google Oneindia Kannada News

ಬೆಂಗಳೂರು : ಸೀರೆತೊಟ್ಟು, ಕಾಸಿನಗಲದ ಕುಂಕುಮ ಇಡುವ ಪಾಪ್‌ ಗಾಯಕಿ ಉಷಾ ಉತ್ತುಪ್‌ ಕಂಠದಲ್ಲಿ ‘ಹುಟ್ಟಿದರೇ ಕನ್ನಡ ನಾಡಲಿ ಹುಟ್ಟಬೇಕು’ ಹಾಡು ಹೇಗಿರಬಹುದು?
ಉತ್ತರ ಸಿಗಬೇಕಾದರೆ, ಡಿಸೆಂಬರ್‌ 31ನೇ ತಾರೀಖು ರಾತ್ರಿ ಅರಮನೆ ಆವರಣಕ್ಕೆ ಹೋಗಿ. ಹೊಸ ವರ್ಷ 2003ನ್ನು ಸ್ವಾಗತಿಸಲು ‘ದಿ ಕಂಟ್ರಿ ಕ್ಲಬ್‌’ ಈಗಿನಿಂದಲೇ ಸಜ್ಜಾಗುತ್ತಿದೆ. ಇದರ ನಿಮಿತ್ತ ಉಷಾ ಉತ್ತುಪ್‌ ಸಂಗೀತ ಕಾರ್ಯಕ್ರಮವನ್ನು ಕ್ಲಬ್‌ ಆಯೋಜಿಸಿದೆ. ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಈ ವಿಷಯವನ್ನು ಖುದ್ದು ಉಷಾ ಉತ್ತುಪ್‌ ತಿಳಿಸಿದರು.

ಮುಖ್ಯಮಂತ್ರಿ ಕೃಷ್ಣ, ಇನ್ಫೋಸಿಸ್‌ನ ನಾರಾಯಣ ಮೂರ್ತಿ, ವಿಪ್ರೋದ ಅಜೀಂ ಪ್ರೇಜಿ- ಇವರೆಲ್ಲರನ್ನೂ ಬಳಸಿಕೊಂಡು ಉಷಾ ಹಾಡೊಂದನ್ನು ಕಟ್ಟಿ, ಅದಕ್ಕೆ ರಾಗವನ್ನೂ ಹಾಕಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಹಾಡಿನ ಸ್ಯಾಂಪಲ್ಲನ್ನು ಹಾಡಿಯೇ ರಂಜಿಸಿದರು.

ಆಗಿಂದಾಗ್ಗೆ ಬೆಂಗಳೂರಿನಲ್ಲಿ ಅವರು ಕೊಟ್ಟಿರುವ ಕಾರ್ಯಕ್ರಮಗಳನ್ನು ಮೆಲುಕು ಹಾಕಿದ ಉಷಾ ಉತ್ತುಪ್‌ ಅವರ ಹೊಸ ಆಲ್ಬಂ ಕೂಡ ಬೆಂಗಳೂರಲ್ಲೇ ಬಿಡುಗಡೆಯಾಯಿತು. ಕಂಟ್ರಿ ಕ್ಲಬ್‌ ವ್ಯವಸ್ಥಾಪಕ ನಿರ್ದೇಶಕ ವೈ.ರಾಜೀವ ರೆಡ್ಡಿ ಆಲ್ಬಂನ್ನು ಬಿಡುಗಡೆ ಮಾಡಿದರು.

(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X