ರಿಬಾಬ್ಬರಿ ಅರ್ಚನಾ ಉಡುಪಾಗೆ ಜಿ.ವಿ. ಅತ್ರಿ ಸಂಗೀತ ಪ್ರಶಸ್ತಿ
ಬೆಂಗಳೂರು : ಜೂನಿಯರ್ ಪಿ.ಬಿ. ಶ್ರೀನಿವಾಸ್ ಎಂದು ಜನಪ್ರಿಯರಾಗಿದ್ದ ಸಿನಿಮಾ ಹಾಗೂ ಸುಗಮ ಸಂಗೀತಗಾರ ದಿವಂಗತ ಜಿ.ವಿ. ಅತ್ರಿ ಅವರ ಸ್ಮರಣಾರ್ಥ ನೀಡುವ ಜಿ.ವಿ. ಅತ್ರಿ ಪ್ರಶಸ್ತಿಗೆ ಯುವ ಗಾಯಕಿ ಅರ್ಚನಾ ಉಡುಪ ಆಯ್ಕೆಯಾಗಿದ್ದಾರೆ.
ಸಂಗೀತ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆಗೈದ ಯುವ ಗಾಯಕರಿಗೆ ಜಿ.ವಿ. ಅತ್ರಿ ಪ್ರಶಸ್ತಿಯನ್ನು ಉಪಾಸನಾ ಸಂಸ್ಥೆ ನೀಡುತ್ತಿದೆ. ಜೂನ್ ತಿಂಗಳ ಮೊದಲ ವಾರದಲ್ಲಿ ನಡೆಯುವ ಉಪಾಸನಾ ಸಂಸ್ಥೆಯ ಹುಟ್ಟು ಹಬ್ಬ ಸಮಾರಂಭದಲ್ಲಿ ಅರ್ಚನಾ ಅವರಿಗೆ ಅತ್ರಿ ಹೆಸರಿನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು. ಸಂಸ್ಥೆಯ ಅಧ್ಯಕ್ಷ ಜೆ. ಮೋಹನ್ ಅವರು ಈ ಕುರಿತು ಹೇಳಿಕೆ ನೀಡಿದ್ದಾರೆ.
ಯುವ ಪೀಳಿಗೆಯ ಸುಗಮ ಸಂಗೀತಗಾರರಲ್ಲಿ ಅರ್ಚನಾ ಉಡುಪ ಅವರದ್ದು ಮೊದಲ ಸಾಲಿನ ಹೆಸರು. ಕೆಲವು ಸಿನಿಮಾಗಳಿಗೆ ಗೀತೆಗಳನ್ನು ಹಾಡಿರುವ ಅರ್ಚನಾ, ಕ್ಯಾಸೆಟ್ಗಳಿಗೆ ನೂರಾರು ಭಾವಗೀತೆ ಹಾಗೂ ಜಾನಪದ ಗೀತೆಗಳನ್ನು ಹಾಡಿದ್ದಾರೆ. ಪ್ರಸ್ತುತ ಕಾವೇರಿ ಚಾನೆಲ್ನ ರಿಬಾಬ್ಬರಿ ಕಾರ್ಯಕ್ರಮ ನಿರ್ವಹಣೆಯ ಹೊಣೆ ಹೊತ್ತಿರುವ ಅರ್ಚನಾ, ರಿkುೕ ಟೀವಿಯ ಸರೆಗಮ ಗೀತಗಾಯನ ಸ್ಪರ್ಧೆಯಲ್ಲಿ ಬಹುಮಾನ ಗಳಿಸಿದ್ದರು.
(ಇನ್ಫೋ ವಾರ್ತೆ)