ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ನಾಡಗೀತೆಗೆ ವಿವಾದ: ಕತ್ತರಿಸಿದ ಸಾಲುಗಳನ್ನು ಅಂಟಿಸಿದ ಸರ್ಕಾರ
ಬೆಂಗಳೂರು : ನಾಡಗೀತೆಯ ಕತ್ತರಿ ಪ್ರಯೋಗ ಆದೇಶವನ್ನು ರಾಜ್ಯ ಸಚಿವ ಸಂಪುಟ ವಾಪಸು ಪಡೆದಿದ್ದು, ಕುವೆಂಪು ವಿರಚಿತ ಜಯ ಭಾರತ ಜನನಿಯ ತನುಜಾತೆ ಗೀತೆಯ ಮೂಲ ಪಠ್ಯವನ್ನು ನಾಡಗೀತೆಯಾಗಿ ಪುನಃ ಅಂಗೀಕರಿಸಿದೆ.
ಶಂಕರ ರಾಮಾನುಜ ವಿದ್ಯಾರಣ್ಯ / ಬಸವೇಶ್ವರ ರಿಹ ದಿವ್ಯಾರಣ್ಯ ಎನ್ನುವ ಚರಣಗಳು ಸೇರಿದಂತೆ ಕುವೆಂಪು ಅವರ ಜಯ ಭಾರತ ಜನನಿಯ ತನುಜಾತೆ ಕವಿತೆಯ ಎಲ್ಲ ಸಾಲುಗಳನ್ನೂ , ಆ ಸಾಲುಗಳ ಮೂಲರೂಪದಲ್ಲಿಯೇ ನಾಡಗೀತೆಯನ್ನಾಗಿ ಸರ್ಕಾರ ಅಂಗೀಕರಿಸಿದೆ. ಜ.20ರ ಮಂಗಳವಾರ ನಡೆದ ಸಚಿವ ಸಂಪುಟ ಸಭೆ ಈ ಮಹತ್ವದ ತೀರ್ಮಾನ ಕೈಗೊಂಡಿತು. ಸರ್ಕಾರ ಅಂಗೀಕರಿಸಿರುವ ನಾಡಗೀತೆಯಲ್ಲಿ ಮಧ್ವಾಚಾರ್ಯರ ಹೆಸರು ಇಲ್ಲ .
ಸಂಪುಟ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವಾರ್ತಾ ಸಚಿವ ಡಾ.ಜಿ.ಪರಮೇಶ್ವರ- ಸರ್ಕಾರ ನಾಡಗೀತೆಯ ಸಾಹಿತ್ಯದಲ್ಲಿ ಹೊಸತನ್ನು ಸೇರಿಸುವುದೂ ಇಲ್ಲ , ಮೂಲರೂಪವನ್ನು ಬಿಡುವುದೂ ಇಲ್ಲ ಎಂದರು.
(ಇನ್ಫೋ ವಾರ್ತೆ)
Comments
English summary
The Karnataka Cabinet decided to retain all seven original stanzas of Kannada litterateur Kuvempus poem Jai Bharata Jananiya Tanujaate, as the State anthem, without getting into controversial aspects