ಪದ್ಮರಾಜ ದಂಡಾವತಿ ಅನುವಾದಿತ ಕೃತಿ 'ಸೀತಾ' ಶೀಘ್ರ ಮಾರುಕಟ್ಟೆಗೆ
ಬೆಂಗಳೂರು, ಮೇ 15: ಹಿರಿಯ ಪತ್ರಕರ್ತರು- ಲೇಖಕರಾದ ಪದ್ಮರಾಜ ದಂಡಾವತಿ ದೇವದತ್ತ್ ಪಟ್ಟನಾಯಕ್ ಅವರ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಸೀತಾ- ರಾಮಾಯಣದ ಸಚಿತ್ರ ಮರುಕಥನ ಎಂದು ಈ ಕೃತಿಗೆ ಹೆಸರಿಡಲಾಗಿದೆ. ಮನೋಹರ ಗ್ರಂಥ ಮಾಲೆಯಿಂದ ಈ ಪುಸ್ತಕವನ್ನು ಮುದ್ರಣ ಮಾಡಲಾಗಿದ್ದು, 374 ಪುಟಗಳಿರುವ ಈ ಪುಸ್ತಕದಲ್ಲಿ 200 ರೇಖಾಚಿತ್ರಗಳಿವೆ.
Recommended Video
ಶೀಘ್ರದಲ್ಲೇ ಈ ಪುಸ್ತಕ ಮಾರುಕಟ್ಟೆಗೆ ಬಿಡುಗಡೆ ಆಗಲಿದೆ. 700 ರುಪಾಯಿ ಬೆಲೆಯ ಪುಸ್ತಕ ಸದ್ಯಕ್ಕೆ ರಿಯಾಯಿತಿ ದರದಲ್ಲಿ ದೊರೆಯುತ್ತದೆ. 490 ರುಪಾಯಿ ಹಾಗೂ ಜತೆಗೆ ಅಂಚೆ ವೆಚ್ಚವನ್ನು ಪಾವತಿಸಿದರೆ ಮನೆ ಬಾಗಿಲಿಗೆ ಪುಸ್ತಕವನ್ನು ತಲುಪಿಸಲಾಗುತ್ತದೆ. ಅದಕ್ಕಾಗಿ ಸಮೀರ ಜೋಶಿ- ಮೊ. 9845447002ಗೆ ವಾಟ್ಸಾಪ್ ಕಳುಹಿಸಬೇಕು.
ಇನ್ನು ಆನ್ ಲೈನ್ ನಲ್ಲಿ ಖರೀದಿ ಮಾಡುವುದಕ್ಕೆ www.granthamala.com ವೆಬ್ ಸೈಟ್ ಗೆ ಭೇಟಿ ನೀಡಬಹುದು. ಇನ್ನು ಈ ಕೃತಿಯ ಬಗ್ಗೆ ಖ್ಯಾತ ವಿಮರ್ಶಕರಾದ ಪ್ರೊ.ಸಿ.ಎನ್.ರಾಮಚಂದ್ರನ್ ಅವರು ತಮ್ಮ ಅಭಿಪ್ರಾಯವನ್ನು ಹೀಗೆ ದಾಖಲಿಸಿದ್ದಾರೆ. "ಒಂದು ಪ್ರಸಿದ್ಧ, ವಿವಾದಾಸ್ಪದ ಹಾಗೂ ರೋಚಕ ರಾಮಾಯಣ ಮರುಕಥನವನ್ನು ತುಂಬಾ ಎಚ್ಚರಿಕೆಯಿಂದ ಹಾಗೂ ಅಸಾಧ್ಯ ಶ್ರಮದಿಂದ ಕನ್ನಡಕ್ಕೆ ಅನುವಾದಿಸಿರುವ ಪದ್ಮರಾಜ ದಂಡಾವತಿಯವರಿಗೆ ಹಾರ್ದಿಕ ಅಭಿನಂದನೆಗಳು".