ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಲ್ಲಾಪುರದ ಪದ್ಮನಾಭಗೆ ಛಂದ ಪುಸ್ತಕ ಬಹುಮಾನ

By Prasad
|
Google Oneindia Kannada News

ಈ ಸಾಲಿನ ಛಂದ ಪುಸ್ತಕ ಬಹುಮಾನವನ್ನು ಪದ್ಮನಾಭ ಭಟ್ ಶೇವ್ಕಾರ ಅವರು ತಮ್ಮ ಕಥಾ ಸಂಕಲನದ ಹಸ್ತಪ್ರತಿಗೆ ಪಡೆದುಕೊಂಡಿದ್ದಾರೆ. 23 ವರ್ಷದ ಪದ್ಮನಾಭ ಭಟ್ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದವರು. ಸದ್ಯ ಬೆಂಗಳೂರಿನ ಪ್ರಮುಖ ದಿನಪತ್ರಿಕೆಯಲ್ಲಿ ಉಪಸಂಪಾದಕರಾಗಿ ತರಬೇತಿ ಪಡೆಯುತ್ತಿದ್ದಾರೆ.

ಈ ಸಾಲಿನ ಬಹುಮಾನದ ನಿರ್ಣಯವನ್ನು ಹಿರಿಯ ವಿಮರ್ಶಕಿ ಎಂ.ಎಸ್. ಆಶಾದೇವಿ ಮಾಡಿದ್ದಾರೆ. ನಾಡಿನ ಯುವ ಕತೆಗಾರರನ್ನು ಗುರುತಿಸುವ ಈ ಸ್ಪರ್ಧೆಗೆ ಕರ್ನಾಟಕದ ಎಲ್ಲೆಡೆಯಿಂದ ಸುಮಾರು 48 ಹಸ್ತಪ್ರತಿಗಳು ಪ್ರವೇಶ ಕೋರಿ ಬಂದಿದ್ದವು. ಅವುಗಳ ಮೊದಲ ಸುತ್ತಿನ ಆಯ್ಕೆಯನ್ನು ಖ್ಯಾತ ಕತೆಗಾರ್ತಿ ಸುಮಂಗಲಾ ಮಾಡಿದ್ದರು. ಎಲ್ಲರಿಗೂ ಛಂದಪುಸ್ತಕವು ಧನ್ಯವಾದಗಳನ್ನು ಅರ್ಪಿಸುತ್ತದೆ.

ಛಂದ ಪುಸ್ತಕವು ಈ ಪುಸ್ತಕವನ್ನು ಪ್ರಕಟಿಸಿ, ಪ್ರತಿಭಾನ್ವಿತ ಕತೆಗಾರರಿಗೆ ಹದಿನೈದು ಸಾವಿರ ರೂಪಾಯಿ ಬಹುಮಾನ, ಪ್ರಶಸ್ತಿ ಪತ್ರ ಮತ್ತು ಪಾರಿತೋಷಕವನ್ನು ನೀಡುತ್ತದೆ. ಈ ಪರಿಪಾಠವನ್ನು ಪ್ರತಿವರ್ಷ ಪಾಲಿಸಿಕೊಂಡು ಬಂದಿದೆ ಛಂದ ಪುಸ್ತಕ. ಇದೇ ಜೂನ್ ತಿಂಗಳಿನಲ್ಲಿ ಪುಸ್ತಕ ಬಿಡುಗಡೆ ಸಮಾರಂಭವನ್ನು ಬೆಂಗಳೂರಿನಲ್ಲಿ ನಡೆಸಲಾಗುತ್ತದೆ. [ಛಂದ ಪುಸ್ತಕ ಬಹುಮಾನ 2010]

Chandra Pustaka award to Padmanabha of Yellapur

ವಸುಧೇಂದ್ರ [ನಮ್ಮ ನಡುವಿನ ಅಪರೂಪದ ಕತೆಗಾರ ವಸುಧೇಂದ್ರ]
(ಛಂದ ಪುಸ್ತಕ)
ಐ-004, ಮಂತ್ರಿ ಪ್ಯಾರಡೈಸ್
ಬನ್ನೇರುಘಟ್ಟ ರಸ್ತೆ
ಬೆಂಗಳೂರೂ 560076
ದೂ. 98444 22782
English summary
Padmanabh Bhat Shevkar of Yellapur in Uttar Kannada has been selected for Chanda Pustaka award for his short story collection. Padmanabh is working as trainee journalist in leading Kannada daily in Bangalore. The book will be released in June, 2014.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X