ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬೆಂಗಳೂರಿಗೆ ಶ್ರೀವತ್ಸ ಜೋಶಿ-ಭಾನುವಾರ ಪುಸ್ತಕ ಬಿಡುಗಡೆ
ಈ ಸ್ನೇಹಸ್ಪರ್ಶ ಕಾರ್ಯಕ್ರಮ ಭಾನುವಾರ ಜುಲೈ 3, 2011ರಂದು ಬೆಳಿಗ್ಗೆ ಹತ್ತು ಗಂಟೆಗೆ ಬೆಂಗಳೂರು ಜಯನಗರದ ಎಚ್.ಎನ್.ಕಲಾಕ್ಷೇತ್ರದಲ್ಲಿ ನಡೆಯಲಿದೆ. ಈ ಆತ್ಮೀಯ ಕಾರ್ಯಕ್ರಮದಲ್ಲಿ ಅಂಕಣಕಾರನೊಡನೆ ನೇರ ಮಾತುಕತೆಗೆ ಅವಕಾಶವಿರುತ್ತದೆ. ಲಘು ಉಪಾಹಾರದ ನಂತರ ಕಾರ್ಯಕ್ರಮ ಆರಂಭ.
ಇದೇ ಸಂದರ್ಭದಲ್ಲಿ ಅಂಕಣದ ಇತ್ತೀಚಿನ ಬರಹಗಳ ಸಂಕಲನದ ಎರಡು ಪುಸ್ತಕಗಳು ('ಗೆಲುವಿನ ಟಚ್" ಮತ್ತು 'ಚೆಲುವಿನ ಟಚ್" - ಪ್ರಕಾಶಕರು: ಗೀತಾ ಬುಕ್ ಹೌಸ್, ಮೈಸೂರು) ಬಿಡುಗಡೆಯಾಗುತ್ತಿವೆ. ಖ್ಯಾತ 'ಹನಿ"ಸಾಹಿತಿ ಎಚ್.ಡುಂಡಿರಾಜ್ ಮತ್ತು ಪತ್ರಕರ್ತ ನಾಗೇಶ ಹೆಗಡೆ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುತ್ತಾರೆ.
ಇದು ಉದ್ದುದ್ದ ಭಾಷಣಗಳ ಕಾರ್ಯಕ್ರಮವಲ್ಲ. Informal friendly get-together ಮಾದರಿಯದು. ಕಾರ್ಯಕ್ರಮದಲ್ಲಿ ಭಾಗವಹಿಸಲು ನಿಮ್ಮನ್ನೂ ಆತ್ಮೀಯವಾಗಿ ಆಹ್ವಾನಿಸುತ್ತಿದ್ದೇನೆ. ಬನ್ನಿ ಎನ್ನುತ್ತಿದ್ದಾರೆ ಇವತ್ತು ತಾನೇ ಬೆಂಗಳೂರಿಗೆ ಬಂದಿಳಿದ ಅಂಕಣಕಾರ ಜೋಶಿ.
Comments
English summary
Srivatsa Joshi has organised Friendly Get-Together for poular column Paraga Sparsha readers. Writer Srivatsa Joshi is also releasing his two new collection of book Geluvina Touch and Nalivina Touch on Jul 3,2011 at HN Kalakshetra Bangalore
Story first published: Thursday, June 30, 2011, 18:13 [IST]