ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರಿನಲ್ಲಿ ಹರಿಹರೇಶ್ವರರ ಕೃತಿ ಬಿಡುಗಡೆ

By Mahesh
|
Google Oneindia Kannada News

Late Shikaripura Harihareshwara
ಮೈಸೂರು, ಫೆ. 25 : ಸಾಹಿತಿ, ಪತ್ರಕರ್ತ ದಿವಂಗತ ಶಿಕಾರಿಪುರ ಹರಿಹರೇಶ್ವರ ಅವರ 75ನೇ ಹುಟ್ಟುಹಬ್ಬದ ಸವಿನೆನಪಿನಲ್ಲಿ ಪುಸ್ತಕ ಬಿಡುಗಡೆ ಸಮಾರಂಭವನ್ನು ಅವರ ಕುಟುಂಬದವರು ಹಾಗೂ ಅಭಿಮಾನಿಗಳು ಹಮ್ಮಿಕೊಂಡಿದ್ದಾರೆ.

ಮೈಸೂರಿನ ಕೃಷ್ಣಮೂರ್ತಿಪುರಂನ ಶಾರದಾ ವಿಲಾಸ ಶತಮಾನೋತ್ಸವ ಭವನದಲ್ಲಿ ಹರಿಹರೇಶ್ವರ ಅವರ 'ನಮ್ಮ ಕಾಶ್ಮೀರ ಮತ್ತು ತಿರುಗಾಟ', ಅವರ ಪತ್ನಿ ನಾಗಲಕ್ಷ್ಮಿ ಅವರ ಸಂಪಾದಕತ್ವದ 'ಹೊಂಬೆಳಕ ಹೊನಲು' ಪುಸ್ತಕಗಳ ಜೊತೆಗೆ 'ಸ್ನೇಹದಲ್ಲಿ ನಿಮ್ಮ ಹರಿ' ಎಂಬ ಸಂಸ್ಮರಣ ಗ್ರಂಥವನ್ನು ಲೋಕಾರ್ಪಣೆ ಮಾಡಲಾಗುತ್ತದೆ.

ಕಾರ್ಯಕ್ರಮ ವಿವರ : ದಿನ/ದಿನಾಂಕ: ಶುಕ್ರವಾರ, ಮಾರ್ಚ್ 11, 2011. ದಿವ್ಯ ಸಾನ್ನಿಧ್ಯ: ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸುತ್ತೂರು ಮಹಾ ಸಂಸ್ಥಾನ. ಸಂಜೆ 5.30ರಿಂದ. 6.00 ಲಘು ಉಪಹಾರ, 8.30ಕ್ಕೆ ಭೋಜನ.

ಪುಸ್ತಕ ಬಿಡುಗಡೆ : ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಸಿರಿಗೆರೆ ತರಳಬಾಳು ಬೃಹನ್ಮಠ 'ಸ್ನೇಹದಲ್ಲಿ ನಿಮ್ಮ ಹರಿ', 'ನಮ್ಮ ಕಾಶ್ಮೀರ ಮತ್ತು ತಿರುಗಾಟ', 'ಅಮೆರಿಕನ್ನಡ' ಅಂತರ್ಜಾಲ ಆವೃತ್ತಿ. ಆಶೀರ್ವಾದ ನುಡಿ: ವೀರೇಶಾನಂದ ಸ್ವಾಮೀಜಿ, ರಾಮಕೃಷ್ಣ ಆಶ್ರಮ, ಮೈಸೂರು. ಉಪಸ್ಥಿತಿ: ಡಾ.ಜಿಬಿ ರಾಜಪುರೋಹಿತ, ಎ.ರಮೇಶ್ ಉಡುಪ, ನವಕರ್ನಾಟಕ ಪ್ರಕಾಶನ, ಬೆಂಗಳೂರು.

English summary
RNRI Late Shikaripura Harihareshwara's two books Namma Kashmira mattu Tirugata and Hombelaka Honalu release function in Mysore on 11 March 2011. Venue: Sharada Vilas Centenary house, Krishnamurthy puram, Mysore. Sirigere Taralabalu Shivamurthy Shivacharya seer is releasing the the books.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X