ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನಲ್ಲಿ ಕವಲು ವಿಚಾರಗೋಷ್ಠಿ

By Mahesh
|
Google Oneindia Kannada News

Kavalu novel discussion Bangalore
ಬೆಂಗಳೂರು, ಆ.4: ಡಾ. ಎಸ್.ಎಲ್ ಭೈರಪ್ಪ ಅವರ ಹೊಸ ಕಾದಂಬರಿ 'ಕವಲು' ಕುರಿತ ವಿಚಾರ ಗೋಷ್ಠಿ ಹಾಗೂ ಕೃತಿಕಾರರೊಂದಿಗೆ ಸಂವಾದ ಕಾರ್ಯಕ್ರಮವನ್ನು ಸಾಹಿತ್ಯ ಭಂಡಾರ, ಸತ್ಯಾವಲೋಕನ ಹಾಗೂ ಮಂಥನ, ಜಯನಗರ ಸಂಸ್ಥೆಗಳು ಜಂಟಿಯಾಗಿ ಆಯೋಜಿಸಿವೆ.

ವಿಚಾರ ಗೋಷ್ಠಿಯಲ್ಲಿ ವಿವಿಧ ಲೇಖಕರಿಂದ ಪ್ರಬಂಧ ಮಂಡನೆ ಹಾಗೂ ಕವಲು ಕಾದಂಬರಿಯ ಎಂಟನೇ ಮುದ್ರಣದ ಪ್ರತಿ ಬಿಡುಗಡೆ ಸಮಾರಂಭವಿರುತ್ತದೆ.

ಡಾ. ಎಸ್ ಆರ್ ಲೀಲಾ, ಮೀರಾ ಫಡ್ಕೆ, ಡಾ. ಸುಮತೀಂದ್ರ ನಾಡಿಗ, ಶತಾವಧಾನಿ ಆರ್ ಗಣೇಶ್, ಸುರೇಶ್ ಕೃಷ್ಣಮೂರ್ತಿ ಅವರು ಪ್ರಬಂಧ ಮಂಡಿಸಲಿದ್ದಾರೆ. ಇದರ ಜೊತೆಗೆ ಸಾಹಿತಿ ಡಾ. ಎಸ್ ಎಲ್ ಭೈರಪ್ಪ ಅವರೊಡನೆ ಸಂವಾದ ಕಾರ್ಯಕ್ರಮವಿರುತ್ತದೆ.

ಸ್ಥಳ: ಆರ್ ವಿ ಟೀಚರ್ಸ್ ಕಾಲೇಜು, ಜಯನಗರ 2ನೇ ಬ್ಲಾಕ್, ಬೆಂಗಳೂರು
ದಿನಾಂಕ/ದಿನ: 08/08/2010, ಭಾನುವಾರ
ಸಮಯ: ಸಂಜೆ 4 ಗಂಟೆ

ಛಂದದಿಂದ ಹೊಸ ಪುಸ್ತಕಗಳು : ಎಸ್.ಸುರೇಂದ್ರನಾಥ್ ಅವರ 'ಕಟ್ಟು ಕಥೆಗಳು', ಗುರುಪ್ರಸಾದ್ ಕಾಗಿನೆಲೆ ಅವರ 'ಗುಣ' ಮತ್ತು ವಸುಧೇಂದ್ರ ಅವರ 'ಹರಿಚಿತ್ತ ಸತ್ಯ' ಕೃತಿಗಳು ಇದೀಗ ಅಂಗಡಿಗೆ ಬಂದಿದೆ. ಪುಸ್ತಕಗಳನ್ನು ಎಂದಿನಂತೆ ಪ್ರೀತಿಯಿಂದ ಕೈಗೆತ್ತಿಕೊಳ್ಳಬೇಕೆಂದು ಛಂದ ಪುಸ್ತಕ ಪ್ರಕಾಶನದ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X