ಕವರ್ ಸ್ಟಾರ್ ಯಾರು? ಊಹಿಸಿ ಬಹುಮಾನ ಗೆಲ್ಲಿ
ಛಂದ ಪುಸ್ತಕ ಪ್ರಕಟಿಸಲಿರುವ ಯುವಕವಿ ರಾಧೇಶ ತೋಳ್ಪಾಡಿಯವರ 'ಹಲೋ ಹಲೋ ಚಂದಮಾಮ' ಮಕ್ಕಳ ಕವಿತೆಗಳ ಸಂಕಲನಕ್ಕೆ ಮುಖಪುಟ ವಿನ್ಯಾಸ ರಚಿಸುವ ಸ್ಪರ್ಧೆಯನ್ನು ಛಂದ ಪುಸ್ತಕ ಪ್ರಕಾಶನ ಏರ್ಪಡಿಸಿತ್ತು. 'ಕವರ್ ಸ್ಟಾರ್' ಯಾರಾಗುವಿರಿ ಎಂಬ ಕರೆಗೆ 130ಕ್ಕೂ ಹೆಚ್ಚಿನ ಕಲಾಕಾರರು ತಮ್ಮ ಕಲಾನೈಪುಣ್ಯವನ್ನು ಒರೆಗೆ ಹಚ್ಚಿದ್ದರು.
ಈ ನೂರಾವೂವತ್ತರಲ್ಲಿ ಅತ್ಯುತ್ತಮವಾದ 30 ಕಲಾಕೃತಿಗಳನ್ನು ಈ ಸ್ಪರ್ಧೆಯ ತೀರ್ಪುಗಾರರಾದ ಕಥೆಗಾರ ಜಯಂತ್ ಕಾಯ್ಕಿಣಿ ಅವರು ಆಯ್ಕೆ ಮಾಡಿದ್ದಾರೆ. ಈ ಸ್ಪರ್ಧೆಯಲ್ಲಿ ಗೆದ್ದವರಿಗೆ 5000 ರು. ಬಹುಮಾನ ನೀಡಲಾಗುತ್ತಿದೆ.
ಈಗ ಮತ್ತೊಂದು ವಿಶೇಷವೆಂದರೆ, ಆಯ್ದ 30 ಮುಖಪುಟ ವಿನ್ಯಾಸಗಳಲ್ಲಿ ಯಾವ ಕಲಾಕೃತಿ ಬಹುಮಾನ ಗೆಲ್ಲುತ್ತದೆಂದು ಊಹಿಸಿದವರಿಗೆ ಸಾವಿರ ರು. ಗೆಲ್ಲುವ ಅವಕಾಶವನ್ನು ಛಂದ ಒದಗಿಸಿಕೊಟ್ಟಿದೆ. ಈ ಬಹುಮಾನವನ್ನು ಛಂದಪುಸ್ತಕ ಮತ್ತು ಮೇಫ್ಲವರ್ ಮೀಡಿಯಾಹೌಸ್ ಜಂಟಿಯಾಗಿ ನೀಡುತ್ತಿವೆ.
ಬಹುಮನಕ್ಕಾಗಿ ಆಯ್ಕೆಯಾಗಿರುವ 30 ಮುಖಪುಟ ವಿನ್ಯಾಸಗಳು ಯಾವುದೆಂದು ತಿಳಿಯಲು ಇಲ್ಲಿ ಕ್ಲಿಕ್ಕಿಸಿ. ಬ್ಲಾಗಿನಲ್ಲಿ ನೀಡಲಾಗಿರುವ ಒಂದು ವಿನ್ಯಾಸದ ಸಂಖ್ಯೆಯನ್ನು ಆಯ್ಕೆ ಮಾಡಿ [email protected]ಕ್ಕೆ ಕಳಿಸಬಹುದು. ಅಥವಾ ನೇರವಾಗಿ ಅಪಾರ ಬ್ಲಾಗಿನಲ್ಲಿ ಕಾಮೆಂಟ್ ವಿಭಾಗದಲ್ಲಿ ನಿಮ್ಮ ಆಯ್ಕೆಯನ್ನು ತಿಳಿಸಬಹುದು. ನೆನಪಿರಲಿ, ಒಬ್ಬರು ಒಂದು ವಿನ್ಯಾಸವನ್ನು ಮಾತ್ರ ಆಯ್ಕೆ ಮಾಡಬೇಕು. ಹೆಚ್ಚು ಆಯ್ಕೆ ಮಾಡಿದರೆ ನಿಮ್ಮ ಆಯ್ಕೆ ಅನರ್ಹವಾಗುತ್ತದೆ.
ಬರುವ ಶನಿವಾರ, ಅಂದರೆ ಜನವರಿ 16ರೊಳಗೆ ಯಾವ ಮುಖಪುಟ ವಿನ್ಯಾಸ ಬಹುಮಾನ ಗೆಲ್ಲುತ್ತದೆಂದು ಊಹಿಸಿ. ಏಕೆಂದರೆ, ಮರುದಿನ ಭಾನುವಾರವೇ ಅಂತಿಮ ಫಲಿತಾಂಶ ಹೊರಬೀಳಲಿದೆ.