ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸಂದೀಪ ನಾಯಕರಿಗೆ ಛಂದ ಪುಸ್ತಕ ಬಹುಮಾನ
ಬೆಂಗಳೂರಿನಲ್ಲಿ ಪುಸ್ತಕ ಬಿಡುಗಡೆ ಸಮಾರಂಭವನ್ನು ಜುಲೈ 2009ರಲ್ಲಿ ನಡೆಸಲಾಗುತ್ತದೆ. ಕನ್ನಡದ ಹೊಸ ಕತೆಗಾರರನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶವನ್ನು ಹೊಂದಿರುವ ಈ ಸ್ಪರ್ಧೆಯಲ್ಲಿ ರಾಜ್ಯ, ದೇಶ, ವಿದೇಶಗಳಿಂದ ಸುಮಾರು 70 ಕತೆಗಾರರು ಭಾಗವಹಿಸಿದ್ದರು. ಈ ಬಾರಿಯ ನಿರ್ಣಯವನ್ನು ಹಿರಿಯ ಕತೆಗಾರ ಅಮರೇಶ ನುಗಡೋಣಿ ಮಾಡಿದ್ದಾರೆ.
ಲೇಖಕರ ಕುರಿತು : ಬಹುಮಾನಿತ ಲೇಖಕ ಸಂದೀಪ ನಾಯಕ ಅವರು ದಿನಪತ್ರಿಕೆ ಪ್ರಜಾವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಉತ್ತಮ ಕತೆಗಾರರೂ ಆಗಿರುವ ಉತ್ತರ ಕನ್ನಡದ ಸಂದೀಪರಿಗೆ ವಿಜಯಕರ್ನಾಟಕ ನಡೆಸಿದ ಯುಗಾದಿ ಕಥಾಸ್ಪರ್ಧೆಯಲ್ಲಿ 'ಕರೆ' ಎಂಬ ಕಥೆಗೆ ಪ್ರಥಮ ಬಹುಮಾನ ಲಭಿಸಿತ್ತು.
ಛಂದ ಪುಸ್ತಕ ಪ್ರಕಾಶನ ಕಳೆದ ಐದು ವರ್ಷಗಳಿಂದ ಹೊಸ ಲೇಖಕರಿಗೆ ಪ್ರೋತ್ಸಾಹ ನೀಡಲು ಪುಸ್ತಕಗಳನ್ನು ಪ್ರಕಟಿಸುತ್ತಾ ಬಂದಿದೆ. ಈ ಬಾರಿ ಕೂಡ ಒಂದೂ ಕಥಾಸಂಕಲನ ಹೊರತಂದಿರದ ಹೊಸ ಕತೆಗಾರರಿಗೆ ಆಹ್ವಾನ ನೀಡಿತ್ತು.
(ದಟ್ಸ್ ಕನ್ನಡ ವಾರ್ತೆ)
Comments
award kannada short story vasudhendra ವಸುಧೇಂದ್ರ ಛಂದ ಪುಸ್ತಕ ಪ್ರಕಾಶನ chanda pustaka book publication ಕನ್ನಡ ಸಣ್ಣಕಥೆ ಕಥಾ ಸಂಕಲನ
Story first published: Monday, May 25, 2009, 16:23 [IST]