ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂದೀಪ ನಾಯಕರಿಗೆ ಛಂದ ಪುಸ್ತಕ ಬಹುಮಾನ

By Staff
|
Google Oneindia Kannada News

Sandeep Naik
"ಛಂದ ಪುಸ್ತಕ - 2009"ರ ಬಹುಮಾನವನ್ನು ಸಂದೀಪ ನಾಯಕರವರು ತಮ್ಮ ಕಥಾಸಂಕಲನದ ಹಸ್ತಪ್ರತಿಗಾಗಿ ಪಡೆದುಕೊಂಡಿದ್ದಾರೆ. ಈ ಬಹುಮಾನವು ಪುಸ್ತಕದ ಪ್ರಕಟಣೆ, ಹತ್ತು ಸಾವಿರ ನಗದು ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ.

ಬೆಂಗಳೂರಿನಲ್ಲಿ ಪುಸ್ತಕ ಬಿಡುಗಡೆ ಸಮಾರಂಭವನ್ನು ಜುಲೈ 2009ರಲ್ಲಿ ನಡೆಸಲಾಗುತ್ತದೆ. ಕನ್ನಡದ ಹೊಸ ಕತೆಗಾರರನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶವನ್ನು ಹೊಂದಿರುವ ಈ ಸ್ಪರ್ಧೆಯಲ್ಲಿ ರಾಜ್ಯ, ದೇಶ, ವಿದೇಶಗಳಿಂದ ಸುಮಾರು 70 ಕತೆಗಾರರು ಭಾಗವಹಿಸಿದ್ದರು. ಈ ಬಾರಿಯ ನಿರ್ಣಯವನ್ನು ಹಿರಿಯ ಕತೆಗಾರ ಅಮರೇಶ ನುಗಡೋಣಿ ಮಾಡಿದ್ದಾರೆ.

ಲೇಖಕರ ಕುರಿತು : ಬಹುಮಾನಿತ ಲೇಖಕ ಸಂದೀಪ ನಾಯಕ ಅವರು ದಿನಪತ್ರಿಕೆ ಪ್ರಜಾವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಉತ್ತಮ ಕತೆಗಾರರೂ ಆಗಿರುವ ಉತ್ತರ ಕನ್ನಡದ ಸಂದೀಪರಿಗೆ ವಿಜಯಕರ್ನಾಟಕ ನಡೆಸಿದ ಯುಗಾದಿ ಕಥಾಸ್ಪರ್ಧೆಯಲ್ಲಿ 'ಕರೆ' ಎಂಬ ಕಥೆಗೆ ಪ್ರಥಮ ಬಹುಮಾನ ಲಭಿಸಿತ್ತು.

ಛಂದ ಪುಸ್ತಕ ಪ್ರಕಾಶನ ಕಳೆದ ಐದು ವರ್ಷಗಳಿಂದ ಹೊಸ ಲೇಖಕರಿಗೆ ಪ್ರೋತ್ಸಾಹ ನೀಡಲು ಪುಸ್ತಕಗಳನ್ನು ಪ್ರಕಟಿಸುತ್ತಾ ಬಂದಿದೆ. ಈ ಬಾರಿ ಕೂಡ ಒಂದೂ ಕಥಾಸಂಕಲನ ಹೊರತಂದಿರದ ಹೊಸ ಕತೆಗಾರರಿಗೆ ಆಹ್ವಾನ ನೀಡಿತ್ತು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X