ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಪ್ರಿಲ್ 26ರಂದು ಮಣಿಕಾಂತ್ ಪುಸ್ತಕ ಬಿಡುಗಡೆ

By Staff
|
Google Oneindia Kannada News

amma hELida eMTu suLLugaLu - book by AR Manikanth
ಸಕ್ಕರೆಯ ಮಾತುಗಳ ಅಕ್ಕರೆಯ ಬರಹಗಾರ ದಟ್ಸ್ ಕನ್ನಡ ಅಂಕಣಕಾರ ಎಆರ್ ಮಣಿಕಾಂತ್ ಅವರು ಬರೆದಿರುವ 'ಅಮ್ಮ ಹೇಳಿದ ಎಂಟು ಸುಳ್ಳುಗಳು' ಎಂಬ ಪ್ರಬಂಧ ಸಂಕಲನ ಇದೇ ಭಾನುವಾರ ಏಪ್ರಿಲ್ 26ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಬಿಡುಗಡೆಯಾಗುತ್ತಲಿದೆ.

ತಮ್ಮ ಲೇಖನಿಯ ಮುಖಾಂತರವೇ ಹೇಳಬೇಕಾದ್ದನ್ನು ಹೇಳುವ ಮತ್ತು ಮಾತನಾಡುವ ಮಣಿಕಾಂತ್ ಬರಹಗಳೆಂದರೆ ಅತ್ಯಂತ ಸುಂದರವಾಗಿ ಅಕ್ಷರಗಳೆಂಬ ಹೂವುಗಳನ್ನು ಅಷ್ಟೇ ಸುಂದರವಾಗಿ ಪೋಣಿಸಿಟ್ಟ ಹೂವಿದ್ದಂತೆ.

ನಮ್ಮವರೇ ಆದರ ಖ್ಯಾತ ನಟ ಪ್ರಕಾಶ್ ರೈ ಅವರು ಪುಸ್ತಕವನ್ನು ಬಿಡುಗಡೆ ಮಾಡಲಿದ್ದಾರೆ. ವಿಜಯ ಕರ್ನಾಟಕ ದಿನಪತ್ರಿಕೆ ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಹಾಯ್ ಬೆಂಗಳೂರು ಸಂಪಾದಕ ರವಿ ಬೆಳಗೆರೆ ಕೂಡ ಮಾತಿನ ಮಳೆ ಸುರಿಸಲಿದ್ದಾರೆ.

ಈ ಮೂವರ ಮಾತುಗಳೊಂದಿಗೆ ರಮೇಶ್ಚಂದ್ರ, ಉಪಾಸನಾ ಮೋಹನ್, ಪಂಚಮ್ ಹಳಿಬಂಡಿ, ಸುರೇಖಾ, ಪಿಎ ಮಂಗಳ ಅವರ ತಂಡ ಓದುಗರನ್ನು ಭಾವಲೋಕಕ್ಕೆ ಕರೆದೊಯ್ಯಲಿದೆ.

ಕಾರ್ಯಕ್ರಮದ ವಿವರ

ದಿನಾಂಕ : 26ನೇ ಏಪ್ರಿಲ್, 2009, ಭಾನುವಾರ
ಸಮಯ : ಬೆಳಿಗ್ಗೆ 10.30
ಸ್ಥಳ : ರವೀಂದ್ರ ಕಲಾಕ್ಷೇತ್ರ, ಜೆಸಿ ರಸ್ತೆ, ಬೆಂಗಳೂರು

ಲೇಖನ ಓದಿ : ಅಮ್ಮ ಹೇಳಿದ ಎಂಟು ಸುಳ್ಳುಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X