ಫೆ. 12 ರಂದು 'ಪುಸ್ತಕ ಮಿಂಚು' ಬಿಡುಗಡೆ
ಮೈಸೂರು, ಫೆ. 11 : ಕರ್ನಾಟಕ ರಾಜ್ಯೋತ್ಸವದ ಸವಿನೆನಪಿಗಾಗಿ ಸಂವಹನ ಪ್ರಕಾಶಕರ ಸಹಯೋಗದಲ್ಲಿ ಸಂವಹನ ಕಾವ್ಯ 2008 ಮತ್ತು ಸಾಹಿತಿ ಡಾ ಎಚ್ ಜೆ ಲಕ್ಕಪ್ಪಗೌಡ ಅವರ 'ಪುಸ್ತಕ ಮಿಂಚು' ಪುಸ್ತಕ ಬಿಡುಗಡೆ ಕಾರ್ಯಕ್ರಮ ಫೆ. 12 ರಂದು ಸಂಜೆ 5 ಗಂಟೆಗೆ ನಗರದ ಎಂ ಜಿ ರಸ್ತೆಯಲ್ಲಿರುವ ಜೆಎಸ್ಎಸ್ ಆಸ್ಪತ್ರೆಯ ಆವರಣದ ಡಾ ಶಿವರಾತ್ರಿ ರಾಜೇಂದ್ರ ಭವನದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ, ನಾಡೋಜ ಡಾ ದೇ ಜವರೇಗೌಡ ವಹಿಸಲಿದ್ದಾರೆ. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ ಸಿದ್ಧಲಿಂಗಯ್ಯ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ವಿಶ್ರಾಂತ ಪ್ರಾಧ್ಯಾಪಕ ಮಳಲಿ ವಸಂತಕುಮಾರ್ ಪುಸ್ತಕ ಕುರಿತು ಭಾಷಣ ಮಾಡುವರು. ಸಂವಹನ ಕಾವ್ಯದ ಸಂಪಾದಕ ಶಿಕಾರಿಪುರ ಹರಿಹರೇಶ್ವರ ಹಾಗೂ ಎಚ್ ಜೆ ಲಕ್ಕಪ್ಪಗೌಡ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಈ ಸಂದರ್ಭದಲ್ಲಿ ಮೈಸೂರು ರಂಗಸ್ವಾಮಿ ಹಾಗೂ ಸಂಗಡಿಗರಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದು ಡಿ ಎನ್ ಪ್ರಕಾಶಪ್ಪ ತಿಳಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)