ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಕ್ರಾಂತಿ ದಿನ ಬೆಳಿಗ್ಗೆ ಜೋಗಿ ಕಾದಂಬರಿ ಬಿಡುಗಡೆ

By Staff
|
Google Oneindia Kannada News


ಹೇಗಿದ್ದರೂ ಜನವರಿ 15ರಂದು ಮಂಗಳವಾರ ಸಂಕ್ರಾಂತಿ ರಜೆ. ಅಂದು ಬನಶಂಕರಿ ಬಡಾವಣೆಯ ಮೂರನೇ ಹಂತದಲ್ಲಿರುವ ಸುಚಿತ್ರಾ ಸಭಾಂಗಣಕ್ಕೆ ಬಂದು "ನದಿಯ ನೆನಪಿನ ಹಂಗು" ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ. ಇದು ಜೋಗಿಯವರಿಂದ ಸಾವಕಾಶ ಬರೆಯಿಸಿಕೊಂಡ ಒಳಸುಳಿಗಳಿಲ್ಲದ ಕಾದಂಬರಿ.

ಬೆಳಗ್ಗೆ ಎಳ್ಳು ಬೆಲ್ಲ ಬೀರಲಾಗುವುದು. ನಿಮಗೂ ನೆರೆದಿರುವ ಪುಸ್ತಕ ಪ್ರೇಮಿಗಳಿಗೆ ಎಳ್ಳು ಬೆಲ್ಲ ಬೀರಲು ಸದವಕಾಶ. ಮೊಗ್ಗಿನ ಜಡೆಯ ಮಕ್ಕಳು ಸಿಕ್ಕರೆ ಕರೆತನ್ನಿ.

ಜತೆಗೆ ಬರಗೂರು ರಾಮಚಂದ್ರಪ್ಪ ಮತ್ತು ಎಚ್.ಎಸ್. ರಾಘವೇಂದ್ರರಾವ್ ಅವರ ಎರಡು ಭಾಷಣಗಳು ಸಭಿಕರಿಗೆ ಉಚಿತ. ಯಾವುದು ಬೆಲ್ಲ ಯಾವುದು ಎಳ್ಳು ನೀವೇ ನಿರ್ಧರಿಸುವಂಥವರಾಗಿರಿ. ಅವರೆಡೂ ಇಲ್ಲದೆ ಸಂಕ್ರಾಂತಿ ಮುಂದೆ ಸಾಗದು.

ಕಥಾನಕದಲ್ಲಿ ಹರಿದು ಬಂದ ನೆನಪುಗಳು ನಿಮ್ಮವೂ ಆಗಿರಬಹುದು. ನೆನಪಿನ ನದಿಯಗುಂಟ ಸಾಗಬಯಸುವವರಾಗಿದ್ದರೆ ಅಂದು ನೀವು ಅಲ್ಲಿರುತ್ತೀರಿ. ಕಾದಂಬರಿಯನ್ನು ನೀವೂ ಕೊಂಡುಕೊಳ್ಳಿ. ಇತರರೂ ಕೊಳ್ಳಲು ಪ್ರೋತ್ಸಾಹಿಸಿ.

ಸಂಪಾದಕ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X