ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮೇ.2ರಂದು ಪ್ರತಾಪ್ ಸಿಂಹರ ಪುಸ್ತಕ ಅನಾವರಣ
ಬೆಂಗಳೂರು, ಏ.30: ದಟ್ಸ್ಕನ್ನಡ ಅಂಕಣಕಾರ ಹಾಗೂ ವಿಜಯ ಕರ್ನಾಟಕ ಪತ್ರಿಕೆಯ ಮುಖ್ಯ ಉಪಸಂಪಾದಕ ಪ್ರತಾಪ್ ಸಿಂಹ ಅವರ 'ನರೇಂದ್ರ ಮೋದಿ' ಪುಸ್ತಕ ಮೇ.2ರಂದು ಬಿಡುಗಡೆಯಾಗಲಿದೆ.
'ನರೇಂದ್ರ ಮೋದಿ' ಪುಸ್ತಕವನ್ನು ಬಿಜೆಪಿ ಮುಖಂಡ ಅರುಣ್ ಜೇಟ್ಲಿ ಲೋಕಾರ್ಪಣೆ ಮಾಡಲಿದ್ದಾರೆ. ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ನಿವೃತ್ತ ನ್ಯಾಯಮೂರ್ತಿ ರಾಮಾಜೋಯಿಸ್, ವಿಜಯ ಕರ್ನಾಟಕ ಪತ್ರಿಕೆಯ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಆಗಮಿಸಲಿದ್ದಾರೆ. ಅವರ ಅಂಕಣ 'ಬೆತ್ತಲೆ ಜಗತ್ತು' ಈಗಾಗಲೇ ಪುಸ್ತಕ ರೂಪದಲ್ಲಿ ಬಂದಿದ್ದರೂ ಸಹ ಸ್ವತಂತ್ರವಾಗಿ ಬರೆದಿರುವ ಪ್ರಥಮ ಪುಸ್ತಕ ಇದಾಗಿದೆ.
ಸ್ಥಳ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಪಿ.ವಾಡಿಯಾ ರಸ್ತೆ, ಬಸವನಗುಡಿ, ಬೆಂಗಳೂರು.
ದಿನಾಂಕ: ಮೇ 2, ಶುಕ್ರವಾರ
ಸಮಯ: ಬೆಳಗ್ಗೆ 11 ಗಂಟೆ
(ದಟ್ಸ್ಕನ್ನಡ
ಸಭೆ-ಸಮಾರಂಭ)
Comments
Story first published: Wednesday, April 30, 2008, 18:11 [IST]