ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾ. 17 :ದಾರ್ಶನಿಕ ಕವಿ ಡಿವಿಜಿ ಜನ್ಮದಿನಕ್ಕೆಬನ್ನಿ

By Staff
|
Google Oneindia Kannada News

ಬೆಂಗಳೂರು, ಮಾ.13: ಜೀವನದ ಸಾರ್ಥಕತೆಗೆ ಸಮಾಜ ಸೇವೆಯೇ ಪೂರಕ ಎಂಬ ಧ್ಯೇಯ ವಾಕ್ಯವನ್ನು ತಮ್ಮದಾಗಿಸಿಕೊಂಡಿರುವ ಸಮಾಜ ಸೇವಕರ ಸಮಿತಿಯು, ದಾರ್ಶನಿಕ ಕವಿ ಡಿ.ವಿ. ಗುಂಡಪ್ಪ ಅವರ 121 ನೇ ಜನ್ಮದಿನವನ್ನು ನಗರದಲ್ಲಿ ಆಚರಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಡಿವಿಜಿ ಅವರ ಕೃತಿಹಾಗೂ ಸಿಡಿಗಳ ಅನಾವರಣವನ್ನು ಹಮ್ಮಿಕೊಂಡಿದ್ದಾರೆ.

ಸಮಾಜ ಸೇವಕರ ಸಮಿತಿ ಬಗ್ಗೆ :

ಐದು ವರ್ಷದ ಹಿಂದೆ ಬಿ ಎಂ ಎಸ್ ಇಂಜಿನಿಯರಿಂಗ್ ಕಾಲೇಜಿನ ಉತ್ಸಾಹಿ ಯುವಕರ ಪಡೆ, ಸಮಾಜ ಸೇವೆ ಮಾಡಲು ಮುಂದಾದರು. ಸಮಿತಿ ತಲೆ ಎತ್ತಿತು. ಸಮಿತಿ ಬೆಂಬಲಕ್ಕೆ ಐಟಿ, ಮೆಡಿಕಲ್, ಕಲೆ ಹೀಗೆ ವಿವಿಧ ರಂಗಗಳ ಅನೇಕರ ಸಹಕಾರ ದೊರೆಯಿತು. ಗಿರಿನಗರದ ಅಬಲಾಶ್ರಮಕ್ಕೆ ಸಮಿತಿ ನೆರವು ನೀಡಿದೆ. ಬಳ್ಳಾರಿ ಜಿಲ್ಲೆಯ ಹಳ್ಳಿಯೊಂದರಲ್ಲಿ ಶಾಲೆ ಪ್ರಾರಂಭಿಸಿ, ಯಶಸ್ವಿಯಾಗಿ ಸಮಿತಿ ನಡೆಸಿಕೊಂಡು ಬರುತ್ತಿದೆ.

ಮಂಕುತಿಮ್ಮನ ಕಗ್ಗದ ಸತ್ವವನ್ನು ಎಲ್ಲೆಡೆ ಹರಡುವ ಉದ್ದೇಶದಿಂದ ಡಿ.ವಿ. ಗುಂಡಪ್ಪ ಅವರ ಜನ್ಮ ದಿನಾಚರಣೆಯನ್ನು ಆಚರಿಸಿ, ಅವರ ತತ್ವ ಆದರ್ಶಗಳನ್ನು ಎಲ್ಲರಿಗೂ ತಲುಪಿಸಲು ಸಮಿತಿ ಶ್ರಮಿಸುತ್ತಿದೆ. ಸಮಿತಿ ಸದಸ್ಯರು, ವಾರಾಂತ್ಯದಲ್ಲಿ ಹಳ್ಳಿಗಳಿಗೆ ತೆರಳಿ, ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ನೀಡುತ್ತಿದ್ದಾರೆ.

ಸಮಾಜ ಸೇವಕರ ಸಮಿತಿ(ರಿ)
ನಂ 18, 8ನೇ ಮುಖ್ಯ ರಸ್ತೆ,
ಬನಶಂಕರಿ 2ನೇ ಹಂತ,
ಕೈಗಾರಿಕಾ ಪ್ರದೇಶ,
ಬೆಂಗಳೂರು-560070

ಈ ಮೇಲ್ : [email protected]

ಮೊಬೈಲ್:
ರಾಜಕುಮಾರ್:94481 71069
ರಾಘವೇಂದ್ರ:98866 83008
ರವಿಶಂಕರ್: 98448 54905

(ದಟ್ಸ್ ಕನ್ನಡವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X