ಕನ್ನಡ ಕಥಾ ಜಗತ್ತಿನಲ್ಲಿ ಮಿಂಚಲು ಹೀಗೊಂದು ಅವಕಾಶ!
ಬೆಂಗಳೂರು,
ಆಗಸ್ಟ್
29
:
ಕಳೆದ
ಮೂರು
ವರ್ಷಗಳಿಂದ
ಯಶಸ್ವಿಯಾಗಿ
ಹೊಸ
ಕಥೆಗಾರರ
ಪುಸ್ತಕಗಳನ್ನು
ಪ್ರಕಟಿಸುತ್ತಿರುವ
ಛಂದ
ಪುಸ್ತಕ,
2007ನೇ
ಸಾಲಿನಲ್ಲೂ
ಹಸ್ತಪ್ರತಿಗಳನ್ನು
ಆಹ್ವಾನಿಸಿದೆ.
ಇದುವರೆಗೂ ಒಂದೂ ಕಥಾಸಂಕಲನ ಹೊರತಂದಿರದ ಲೇಖಕರಿಗೆ ಮಾತ್ರ ಅವಕಾಶ. ಸಾಹಿತ್ಯದ ಇತರ ಪ್ರಕಾರಗಳಲ್ಲಿ ಒಂದೆರಡು ಪುಸ್ತಕಗಳು ಪ್ರಕಟವಾಗಿದ್ದರೆ ಪರವಾಗಿಲ್ಲ. ತಮಗೆ ಉತ್ತಮವೆನಿಸಿದ ಸುಮಾರು 10 ಪ್ರಕಟಿತ/ಅಪ್ರಕಟಿತ ಸ್ವಂತ ಕತೆಗಳನ್ನು ಡಿಟಿಪಿ ಮಾಡಿಸಿ ಇಲ್ಲವೇ ಸ್ಪಷ್ಟವಾಗಿ ಕೈಬರಹದಲ್ಲಿ ಬರೆದು ಕಳುಹಿಸಬೇಕು. ಹಸ್ತಪ್ರತಿ ಹಿಂತಿರುಗಿಸುವುದಿಲ್ಲ.
ಆಯ್ಕೆಯಾದ ಕಥೆಗಾರರಿಗೆ 5000ರುಪಾಯಿ ಬಹುಮಾನ ಕೊಟ್ಟು, ಅವರ ಕಥಾ ಸಂಕಲನವನ್ನು ಛಂದ ಪುಸ್ತಕ ಪ್ರಕಟಿಸುತ್ತದೆ. ಈ ಪುಸ್ತಕವನ್ನು 2008ರ ಜನವರಿ ತಿಂಗಳ ಕೊನೆಯಲ್ಲಿ ಬೆಂಗಳೂರಿನಲ್ಲಿ ನಡೆಯವ ಸಮಾರಂಭದಲ್ಲಿ ಬಿಡುಗಡೆ ಮಾಡಲಾಗುವುದು.
ಪುಸ್ತಕದ ಆಯ್ಕೆ ಮತ್ತು ಪ್ರಕಟಣೆಯಲ್ಲಿ ಪ್ರಕಾಶಕರದೇ ಅಂತಿಮ ನಿರ್ಧಾರ. ಹಸ್ತಪ್ರತಿ ಕಳುಹಿಸಲು ಕೊನೆಯ ದಿನಾಂಕ: ಸೆಪ್ಟೆಂಬರ್ 30.
ಕತೆಗಳನ್ನು
ಕಳಿಸಬೇಕಾದ
ವಿಳಾಸ
:
ಛಂದ
ಪುಸ್ತಕ,
c/o
ವಸುಧೇಂದ್ರ,
ಐ-004,
ಮಂತ್ರಿ
ಪ್ಯಾರಡೈಸ್,
ಬನ್ನೇರುಘಟ್ಟ
ರಸ್ತೆ,
ಬೆಂಗಳೂರು
-
78
(ದೂ.98444
22782)
ಇಮೇಲು
:
[email protected]
(ದಟ್ಸ್ ಕನ್ನಡ ವಾರ್ತೆ)